ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ವಿ..!
ಇಂಡಿ – ಜೀವನದಲ್ಲಿ ಮನುಷ್ಯ ಯಶಸ್ವಿಯ ಉತ್ತುಂಗ ಶಿಖರಕ್ಕೇರಬೇಕಾದರೇ ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯವೆಂದು ಶಿಕ್ಷಕ, ಸಾಹಿತಿ ದಶರಥ ಕೋರಿಯವರು ತಿಳಿಸಿದರು.
ಸರ್ವೋದಯ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರೇವಣಸಿದ್ದ ಪೂಜಾರಿಯವರ ರಾಜ್ಯ ಮಟ್ಟದ ಗಾಣಿಗ ರತ್ನ ಪ್ರಶಸ್ತಿ ಹಾಗೂ ಪ್ರೇಶರ್ಸ ಡೆ ಸಮಾರಂಭದಲ್ಲಿ ಮಾತನಾಡುತ್ತ ಬಹಳಷ್ಟು ವರ್ಷಗಳ ಹಿಂದೆ ಇಂಗ್ಲೀಷ್ ಮಾಧ್ಯಮ ಶಾಲೆಗಳು ಗಡಿಭಾಗವಾದ ಇಂಡಿ ಮತ್ತು ಚಡಚಣದಲ್ಲಿ ಒಂದೆರಡು ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಸಾಯನ್ಸ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಊಟ ವಸತಿಯೊಂದಿಗೆ ಶಿಕ್ಷಣ ಪಡೆಯುವದು ನಿಲುಕದ ನಕ್ಷತ್ರವಾಗಿತ್ತು.ಇಂತಹ ಸನ್ನಿವೇಶದಲ್ಲಿ ಶಿಕ್ಷಣ ಕೇಂದ್ರ ಪ್ರಾರಂಭಿಸಿ ದಕ್ಷಿಣ ಕನ್ನಡ ಮತ್ತು ಮೂಡ ಬಿದರಿಯ ಆಳ್ವಾಸ್ ನ ರೀತಿಯಲ್ಲಿ ಶಿಕ್ಷಣ ನೀಡುತ್ತಿರುನ ಸರ್ವೋದಯ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ ಇದಕ್ಕೆ ಕಾರಣರಾದ ಶ್ರೀ ರೇವಣ ಸಿದ್ದ ಪೂಜಾರಿಯವರು ಶ್ಲಾಘನೀಯರಾಗಿದ್ದಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ರೇವಣಸಿದ್ದ ಪೂಜಾರಿಯವರು ಸಮಾಜದ ಸಹಕಾರ ಗೆಳೆಯರ ನೆರವು ಹಿರಿಯರ ಮಾರ್ಗದಶನದಿಂದ ಎಲ್ಲವೂ ಸಾಧ್ಯವಾಗಿದೆ ನನ್ನ ಪ್ರಶಸ್ತಿ ಪುರಸ್ಕಾರ ಎಲ್ಲವೂ ಸಮಾಜಕ್ಕೆ ಅರ್ಪಣೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಸಿಬ್ಬಂದಿಗಳು ಅತಿಥಿಗಳಾಗಿ ವೇದ ಮೂರ್ತಿ ಶ್ರೀ ಮಲ್ಲಿಕಾರ್ಜುನ ಹಿರೇಮಠ ಮತ್ತು ಇತರರು ಉಪಸ್ಥಿತರಿದ್ದರು.



















