ರಾಜ್ಯ ಸರಕಾರ ಬಜೆಟ್ ಪ್ರತಿಕ್ರಿಯೆ
ಸರ್ವರಿಗೂ ಅನ್ವಯಿಸುವ ಬಜೆಟ್ . ಜನರ ನಿರೀಕ್ಷೆ ನನಸಾಗಿಸುವ ಬಜೆಟ್. ಜನಪರ ಯೋಜನೆಗೆ ಹೆಚ್ಚು ಒತ್ತುನೀಡಿದ್ದಾರೆ. ಮೂಲ ಸೌಕರ್ಯಕ್ಕೆ ಆಧ್ಯತೆ ನೀಡಿದ್ದು ಇದೊಂದು ಉತ್ತಮ ಬಜೆಟ್
ಶಾಸಕ ಯಶವಂತರಾಯಗೌಡ ಪಾಟೀಲ
ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ೧೫೦ ಸಂಖ್ಯಾಬಲದ ೨೫ಹೊಸ ಮೇಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು ಯೋಚಿಸಿರುವದು ಸ್ವಾಗತಾರ್ಹ, ವಿದ್ಯಾರ್ಥಿ ಸಂಖ್ಯೆ ೫೦ ರಷ್ಟು ಹೆಚ್ಚಿಸಿ ೧೦ ಕೋಟಿ ಅನುದಾನ ನೀಡಿರುವದು ಮತ್ತು ೧೦ ಹೊಸ ಸಿಬಿಎಸ್ ಇ ಶಾಲೆ ಪ್ರಾರಂಭಿಸುತ್ತಿರುವದು ಸ್ವಾಗತಾರ್ಹ
ಇಲಿಯಾಸ ಬೋರಾಮಣಿ ಜಿಲ್ಲಾ ಅಧ್ಯಕ್ಷರು ಗ್ಯಾರಂಟಿ ಸಮಿತಿ
ಸಾಲದ ಬಜೆಟ್ ನೀಡಿದ್ದಾರೆ. ಅಭಿವೃದ್ದಿ ವಿರೋಧಿ ಬಜೆಟ್ ಕಳಪೆ ದಿಕ್ಕು ದೆಶೆಯಿಲ್ಲದ ಬಜೆಟ್
ಕಾಸುಗೌಡ ಬಿರಾದಾರ ಬಿಜೆಪಿ ಧುರೀಣರು
ಬಜೆಟ್ ಪೂರಾ ನಿರಾಶದಾಯಕವಾಗಿದೆ ಮತ್ತು ಒಂದು ಜಾತಿಗೆ ಸೀಮಿತವಾದಂತ ಬಜೆಟ್ ಆಗಿದೆ ಇದರಲ್ಲಿ ಸಾಮಾನ್ಯ ಜನರಿಗೆ ಯಾವುದೇ ವಿಶೇಷ ಸೌಲಭ್ಯಗಳು ಒದಗಿಸಿಲ್ಲ ಮತ್ತು ಯಾವುದೇ ರೀತಿಯ ಹೊಸ ಯೋಜನೆಗಳು ಜಾರಿಗೆ ತಂದಿಲ್ಲ ಕೇವಲ ಹಳೆ ಯೋಜನೆಗಳಿಗೆ ಚಾಲನೆ ಕೊಡುತ್ತೇವೆ ಅಂತ ಸುಳ್ಳು ಆಶ್ವಾಸನೆ ಕೊಟ್ಟಿದ್ದು ಇರುತ್ತದೆ ಒಟ್ಟಿನಲ್ಲಿ ಈ ಬಜೆಟ್ ಜನಸಾಮಾನ್ಯರ ಬಜೆಟ್ ಅಲ್ಲ.
ಎಸ್ ಜೆ ವಾಲಿಕಾರ ಹಿರಿಯ ನ್ಯಾಯವಾದಿಗಳು, ಅಧ್ಯಕ್ಷರು ತಾಲೂಕ ಕಾನೂನು ಘಟಕ ಜೆಡಿಎಸ್ ಇಂಡಿ
ಆದಾಯ ಕಡಿಮೆ ಸಾಲ ಹೆಚ್ಚು ಬಜೆಟ್ ಬಹುಪರಾಕವಾಗಿದೆ.
ಬಿ.ಡಿ.ಪಾಟೀಲ ಜೆಡಿ ಎಸ್ ತಾಲೂಕಾ ಅಧ್ಯಕ್ಷರು.
ನಿಂಬೆ ಅಭಿವೃದ್ದಿ ಮಂಡಳಿಗೆ ಬಜೆಟಿನಲ್ಲಿ ಹಣ ಇಲ್ಲ, ನಿಂಬೆ ರಪ್ತು ಮಾಡುವ ಕುರಿತು ಬಜೆಟಿನಲ್ಲಿ ಯಾವದೇ ಯೋಜನೆಗಳಿಲ್ಲ.
ಎಸ್.ಬಿ.ಕಂಬೋಗಿ ರೈತ ಸಂಘದ ಜಿಲ್ಲಾ ಅಧ್ಯಕ್ಷರು.
ಜೈನ ಬೌದ್ದ ಸಿಖ ಸಮುದಾಯಗಳಿಗೆ ಸಮಗ್ರ ಅಬಿವೃದ್ದಿಗಾಗಿ ೧೦೦ ಕೋಟಿ ಅನುದಾನ ನೀಡಿರುವದು ಸ್ವಾಗತಾರ್ಹ
ಪ್ರಶಾಂತ ಕಾಳೆ ತಾಲೂಕಾ ಅಧ್ಯಕ್ಷರು ಗ್ಯಾರಂಟಿ ಸಮಿತಿ
೫೬ ಸಾವಿರ ಸರಕಾರಿ ಖಾಲಿ ಹುದ್ದೆಗಳನ್ನು ತುಂಬುತ್ತಿರುವದು ಸಂತೋಷದ ವಿಚಾರ. ಇದರಿಂದ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಶ್ರೀಕಾಂತ ಕೂಡಿಗನೂರ ಪುರಸಭೆ ಮಾಜಿ ಅಧ್ಯಕ್ಷರು ಇಂಡಿ
ರೈತರು, ಮಹಿಳೆಯರು, ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರು ಹಾಗೂ ಬಡವರು ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಅದರಂತೆ ಎಲ್ಲಾ ವರ್ಗದ ಜನರ ಹಿತ ಕಾಪಾಡುವ ಜನಪರ ಬಜೆಟ್ ಮಂಡಿಸಿದ್ದಾರೆ
ಹುಚ್ಚಪ್ಪ ತಳವಾರ ಕಾಂಗ್ರೆಸ್ ಮುಖಂಡ ಇಂಡಿ
ಚೊಂಬು ಚೋಂಬು ಖಾಲಿ ಚೊಂಬು ಬಜೆಟ್ ಇದಾಗಿದೆ.
ಬಾಳು ಮುಳಜಿ ಕರವೇ ಅಧ್ಯಕ್ಷರು ಇಂಡಿ
ಕೃಷ್ಣಾ ಕಾಲುವೆ ಕಾರ್ಯಗಳಿಗಾಗಿ ಹಣ ನೀಡದಿರುವದು ದುರಂತ. ಇದರಿಂದ ಸರಕಾರಕ್ಕೆ ನೀರಾವರಿ ಕುರಿತು ಆಸಕ್ತಿ ಇಲ್ಲ ರೈತರ ಹಿತ ಕಾಪಾಡಲು ರೈತರ ಹೊಲಗಳಿಗೆ ನೀರು ಅವಶ್ಯ ಅದನ್ನು ಮರೆತ ಸರಕಾರ
ಅನೀಲಗೌಡ ಬಿರಾದಾರ ಬಿಜೆಪಿ ಧುರೀಣರು ಇಂಡಿ
ಬಜೆಟ್ ನಲ್ಲಿ ಸ್ಪಷ್ಟ ಯೋಜನೆಗಳಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಕರ್ನಾಟಕ ರಾಜ್ಯ ಬಜೆಟ್ ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ. ನಾಡಿನ ರೈತರಿಗೆ, ಮಹಿಳೆಯರು, ಯುವಕರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಅಭಿವೃದ್ಧಿಗೆ ಸ್ಪಷ್ಟ ಹಾಗೂ ಶಾಶ್ವತ ಯೋಜನೆಗಳು ಈ ಬಜೆಟ್ನಲ್ಲಿ ಕಾಣಿಸುತ್ತಿಲ್ಲ.
ರೈತ ಮುಖಂಡ ಮಲ್ಲಿಕಾರ್ಜುನ ಗುಡ್ಲ
ಬಜೆಟ್ ನಲ್ಲಿ ಬಹುಸಂಖ್ಯಾತರಿಗೆ ಅನ್ಯಾಯ: ಬಿಜೆಪಿ ಮುಖಂಡ ನಾಗೇಶ ಹೆಗಡ್ಯಾಳ
ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಬಹುಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಇಂಡಿ ತಾಲೂಕಿನ ಬಿಜೆಪಿ ಮುಖಂಡರಾದ ನಾಗೇಶ ಹೆಗಡ್ಯಾಳ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸನಾತನ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಯಾವುದೇ ರೀತಿಯ ಅನುದಾನ ಮೀಸಲಿಟ್ಟಿಲ್ಲ, ಉತ್ತರ ಕರ್ನಾಟಕದ ಪ್ರವಾಸೋದ್ಯಮ ಹಾಗೂ ನೀರಾವರಿ ಯೋಜನೆಗಳಿಗೆ ಮಹತ್ವ ನೀಡಿಲ್ಲ. ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂದು ಹೇಳಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆದಾಯ ಕಡಿಮೆಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತು ಪಾಲನೆಗೆ ಬಜೆಟ್ ನಲ್ಲಿ ಒತ್ತು ನೀಡಬೇಕಿತ್ತು. ಎಂದು ಹೇಳಿದರು.


















