ಇಂಡಿ : ಅಧಿಕಾರಿವರ್ಗಕ್ಕೆ ಎಸ್ ಎಲ್ ಸಿ ಪರೀಕ್ಷೆ , ಸ್ವತಃ ಪರೀಕ್ಷೆ ಮತ್ತು ಅಗ್ನಿ ಪರೀಕ್ಷೆ ಯಾಗಿದೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ವಸಂತ ರಾಠೋಡ ಇಂಡಿ ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಭಾ ಭವನದಲ್ಲಿ ಏರ್ಪಡಿಸಿದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವ ಭಾವಿ ಸಭೆಯಲ್ಲಿ ಹೇಳಿದರು.
ತಹಶಿಲ್ದಾರ ಸಿ.ಎಸ್ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮತಾನಾಡಿದ ಅವರು, 2021-22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ 28 ರಿಂದ ನಡೆಯುತ್ತಿದ್ದು ,ಪರೀಕ್ಷೆ ಸುಗಮ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಪರೀಕ್ಷೆ ಮಾರ್ಗ ಸೂಚಿಯಂತೆ ಎಲ್ಲಾ ಕಟ್ಟು ನಿಟ್ಟಿನ ಕ್ರಮ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಒಟ್ಟು ಪರೀಕ್ಷಾ ಕೇಂದ್ರಗಳಲ್ಲಿ 4342 ವಿಧ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ. ವಿಧ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಪರೀಕ್ಷಾ ಕೇಂದ್ರ ಕೂಡಾ ಮಾಡಲಾಗಿದೆ. ಈ ಬಾರಿ ಬಹು ಆಯ್ಕೆಯ ಪ್ರಶ್ನೆ ಬದಲಾಗಿ ಮೊದಲನಂತೆ ವಿವರಣಾತ್ಮಕ ಪರೀಕ್ಷೆ ವಿಧ್ಯಾರ್ಥಿಗಳು ಬರೆಯಬೇಕಾಗಿದೆ ಎಂದು ಹೇಳಿದರು.
ಈಗಾಗಲೇ ಪರೀಕ್ಷೆ ಕೇಂದ್ರಗಳ ಬಗ್ಗೆ ಪರಿಶೀಲನೆ ಮಾಡಿದ್ದು ಆಸನದ ವ್ಯವಸ್ಥೆ, ಸಿ.ಸಿ.ಕ್ಯಾಮರಾ, ಕುಡಿಯುವ ನೀರು, ಶಾಲಾ ತಡೆಗೋಡೆ ಹೀಗೆ ಎಲ್ಲವೂಗಳ ಕುರಿತು ಗಮನಿಸಲಾಗಿದೆ. ಯಾವುದೇ ಕಾರಣಕ್ಕೂ ಅಹಿತಕರ ಘಟನೆ ಅವಕಾಶ ಮಾಡಿಕೊಡದೇ ನಕಲು ಮುಕ್ತ, ಪಾರದರ್ಶಕತೆ ಪರೀಕ್ಷೆ ನಡೆಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಇನ್ನೂ ಪರೀಕ್ಷೆ ಕೇಂದ್ರಕ್ಕೆ ಸಿಬ್ಬಂದಿ ನಿಯೋಜನೆ ಮಾಡಿ ಆದೇಶ ಪತ್ರ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆ ಹಿತದೃಷ್ಟಿಯಿಂದ ಪೋಲಿಸ್ ,ಭದ್ರತಾ ದಳ ಮತ್ತು ದೈಹಿಕ ಶಿಕ್ಷಕರನ್ನ ನೇಮಿಸಲಾಗಿದೆ. ಕೊವಿಡ್ ನಿಯಮ ಪರಿಪಾಲನೇ ಮಾಡಬೇಕು. ಅದರಂತೆ ಮಾಸ್ಕ್ ಸಾನಿಟೈಜರ್ ಕಡ್ಡಾಯವಾಗಿವಾಗಿದೆ. ಪರೀಕ್ಷೆ ಕೇಂದ್ರದ ಸುತ್ತಲೂ 144 ಕಲಂ ಜಾರಿಗೆ ಇರುತ್ತೆ. ಯಾರೂ ಪರೀಕ್ಷೆ ನಿಯಾಮವಳಿ ಉಲ್ಲಂಗನೆ ಮಾಡಬಾರದು, ಮಾಡಿದ್ರೆ ಕಾನೂನು ಕ್ರಮಕ್ಕೆ ಜವಾಬ್ದಾರರಾಗುತ್ತಾರೆ. ಜೊತೆಗೆ ಮಾದ್ಯಮ ಮಿತ್ರ ಕೂಡಾ 200 ಮೀಟರ್ ಅಂತರ ಕಾಪಾಡಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆ ತಾಲೂಕು ಅಧಿಕಾರಿ ಡಾ.ಅರ್ಚನಾ ಕುಲಕರ್ಣಿ, ಶಿಶು ಅಭಿವೃದ್ಧಿ ಅಧಿಕಾರಿ ಸಮುಂಗಲಾ ಹಿರೇಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ
ಜೆ.ಇಂಡಿ , ಪರೀಕ್ಷೆ ನೂಡಲ್ ಅಧಿಕಾರಿ ಸಂತೋಷ ಪಾಟೀಲ್, ಪೋಲಿಸ್ ಇಲಾಖೆ ಸಿಬ್ಬಂದಿ, ತಾಲ್ಲೂಕಿನ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು, ಪರೀಕ್ಷೆ ಮುಖ್ಯ ಅಧೀಕ್ಷಕರು ಕಸ್ಟೋಡಿಯನ್ ಮಾರ್ಗಾಧಿಕಾರಿಗಳು ಉಪಸ್ಥಿತರು.