ಇಂಡಿ : ಈಗಿನ ಯುವಕರಲ್ಲಿ ಸಂಸ್ಕ್ರತಿ, ಸಂಸ್ಕಾರ ಮೌಲ್ಯ ಬೆಳೆಸುವದು ಅತಿ ಮುಖ್ಯಾಗಿದೆ ಎಂದು ಬಿಜೆಪಿ ಜಿಲ್ಲಾ ಮುಖಂಡ ಅನೀಲ ಜಮಾದಾರ ಹೇಳಿದರು.
ಪಟ್ಟಣದ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ 73 ನೇ ಗಣರಾಜ್ಯೋತ್ಸವದ ದ್ವಜವನ್ನು ಮುಖ್ಯ ಅತಿಥಿಯಾಗಿ ನೆರೆವೆರಿಸಿದರು. ಅವರು ಮಾತಾನಾಡಿ ಮೆಡಿಕಲ್ ವಿದ್ಯಾರ್ಥಿಗಳಿಗೆ ವೈಧಕೀಯ ಕ್ಷೇತ್ರದಲ್ಲಿ ದೇವರ ಎರಡನೆಯ ಸ್ವರೂಪಿ ಎಂದು ಕರೆಯುತ್ತಾರೆ.ತಾವು ಮಡಿಕಲ್ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು ಸಂತಸದ ವಿಷಯ. ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡಿ, ಜನರಿಗೆ ಉತ್ತಮ ಸೇವೆ ನೀಡಿ ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಬದಲ್ಲಿ ಇನ್ನೊರ್ವ ಅತಿಥಿ ಶ್ರೀಮತಿ ರಜನಿದೇವಿ ಹಿರೇಮಠ ಅವರು, ಮಾತಾನಾಡಿ ಅಂಬೇಡ್ಕರ, ಗಾಂಧಿಜೀ ಭಾವಚಿತ್ರಕೆ ಪೂಜೆ ಸಲ್ಲಿಸಿ, ಕೋವಿಡ ಅಂತ ಮಾಹಾಮಾರಿ ಕಾಯಿಲೆಯನ್ನು ವೈದಕೀಯ ಕ್ಷೇತ್ರದವರು ಹಗಲಿರುಳು ಎನ್ನದೆ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ ತಾವು ಕೂಡಾ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಎಸ್ ಬಿ ಕೆಂಬೋಗಿ ಮಾತಾನಾಡಿ ಸಂವಿಧಾನ ಎಲ್ಲರೂ ಚಾಚು ತಪ್ಪದೆ ಪಾಲನೆ ಮಾಡಬೇಕು. ಸಂವಿಧಾನವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಬೌಗೋಳಿಕೆ ಸಂವಿಧಾನ ಮಹತ್ವದ ಪಾತ್ರವಹಿಸಿದೆ ಎಂದರು.
ಡಾ.ಸ್ವರೂಪಾನಂದ ಶ್ರೀಗಳು ಆಶೀರ್ವಚನ ನೀಡಿದರು. ಚಾಂದಸಾಬ ಬಾಗವನ, ಡಾ.ಸುನೀಲಕುಮಾರ ಸರಸಂಬಿ, ಪ್ರಾಚಾರ್ಯ ದಾನಯ್ಯ ಮಠಪತಿ, ಮಹಾಂತೇಶ ಪಾಟೀಲ,ಬಲರಾಮ ವಡ್ಡರ, ಶೋಭಾ ಬಡಿಗೇರ, ಲಕ್ಷ್ಮೀ ಗೊರನಾಳ, ನುಸ್ರತ ಹವಲ್ದಾರ, ಶ್ರೀಶೈಲ ಹೂಗಾರ ಉಪಸ್ಥಿತರು. ನಿರೂಪನೆ ಮಹೇಶ ಕನ್ನೋಳ್ಳಿ ವಂದನಾರ್ಪನೆ ಮಹಾಂತೇಶ ಪಾಟೀಲ ಮಾಡಿದರು.