ವಿಜಯಪುರ ಜಿಲ್ಲೆಯ ಹರಳಯ್ಯ ಸಮಾಜದ ಜಿಲ್ಲಾಧ್ಯಕ್ಷರಾಗಿ ಶ್ರೀನಿವಾಸ ಶಾಹಪುರ ಆಯ್ಕೆ
ವಿಜಯಪುರ – ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘ (ರಿ) ನಾಗರಭಾವಿ ಬೆಂಗಳೂರು- ವಿಜಯಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಶ್ರೀನಿವಾಸ ರಾಜಗೋಪಾಲ ಶಹಾಪೂರ ಅವರು
ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ವಸಂತ ಹೊನಮೊಡೆಯವರು
ಆಯ್ಕೆಯಾಗಿದ್ದಾರೆ. ನೂತನ ಜಿಲ್ಲಾದ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮಾದರ ಚಿನ್ನಯ್ಯ ಸಮುದಾಯ
ಭವನದಲ್ಲಿ ಹಮ್ಮಿಕೊಂಡಿತ್ತು.
ಆಯ್ಕೆಯನ್ನು ರಾಜ್ಯಾಧ್ಯಕ್ಷರಾದ ಜಗದೀಶ ಬೆಟಗೇರಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಚುನಾವಣಾ
ಉಸ್ತುವಾರಿ ಪರಶುರಾಮ ಅರಕೇರಿ ಅವರು ಶ್ರೀನಿವಾಸ ಶಹಾಪೂರ ಅವರು ಅವಿರೋಧವಾಗಿ ಆಯ್ಕೆ
ಮಾಡಿ ಜಿಲ್ಲಾಧ್ಯಕ್ಷರೆಂದು ಘೋಷಣೆ ಮಾಡಿದರು. ಆಯ್ಕೆಯ ಪ್ರಕ್ರಿಯೆಯಲ್ಲಿ ರಾಜ್ಯದ ಗೌರವಾಧ್ಯಕ್ಷರಾದ
ಯಲಪ್ಪ ಬೆಂಡಿಗೇರಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅತಿಥಿಗಳಾಗಿ ಕಾರ್ಯಕಾರಿ ಸಮಿತಿ
ಸದಸ್ಯರಾದ ಮಹಾದೇವ ಕಬಾಡೆ, ಸುನೀಲ ಮದಲಭಾವಿ, ಮಂಜುನಾಥ ಹಂಜಗಿ ವಕೀಲಕರು, ಸುನೀಲ ಮದಲಬಾವಿ
ಅಶೋಕ ಸೌದಾಗರ, ಧರ್ಮಣ್ಣ ಸಾಣಕ್ಯಾನವರ ಭಾಗವಹಿಸಿದ್ದರು. ಜಿಲ್ಲೆಯ ಇಂಡಿ, ಸಿಂದಗಿ,ಬಸವನ ಬಾಗೇವಾಡಿ, ಮುದ್ದೇಬಿಹಾಳ, ಚಡಚಣ, ತಿಕೋಟಾ, ಬಬಲೇಶ್ವರ, ದೇವರಹಿಪ್ಪರಗಿ, ತಾಳಿಕೋಟಿ ವಿವಿಧ ತಾಲೂಕಿನ ಎಲ್ಲ ಸದಸ್ಯರು ಸಕ್ರೀಯವಾಗಿ ಭಾಗವಹಿಸಿದ್ದರು.
ನಗರದ ಹರಳಯ್ಯ ಸಮಾಜದ ಸಿದ್ದಲಿಂಗ ವಗ್ಯಾನವರ, ಹಾಜಿಲಾಲ ಕಬಾಡೆ, ಬಸವರಾಜ ಕಾಂಬಳೆ, ಧರೆಪ್ಪ ಅರ್ಧಾವೂರ ವಕೀಲಕರು, ಶಾಂತಿ ಮಲ್ಲಪ್ಪ ಕಟ್ಟಿಮನಿ, ಕೈಲಾಸ ಕಾಂಬಳೆ, ಅಶೋಕ ಶಹಾಪೂರ ಪರಮಾನಂದ º ಹಳ್ಳೂರ, ವಸಂತ ಮನಗೂಳಿ ಎಂ.ಆರ್. ಸೌದಾಗರ, ಎಂ.ಆರ್. ಕಬಾಡೆ, ರಾಘವೇಂದ್ರ ವಿಜಾಪುರ ಮುಂತಾದ ಗಣ್ಯರು ಉಪಸ್ಥಿತರಿದ್ದರು.