ಶತಮಾನದ ಶ್ರೇಷ್ಠ ಸಂತ ಸಿದ್ದೆಶ್ವರ ಶ್ರೀಗಳು
ಇಂಡಿ : ವರ್ಷದ ಹಿಂದೆ ಸಿದ್ದೇಶ್ವರ ಶ್ರೀಗಳು ಇಹಲೋಕ
ತ್ಯಜಿಸಿದಾಗ ಕೋಟಿ ಕೋಟಿ ಜನರಿಗೆ ಬರ ಸಿಡಿಲು
ಆವರಿಸಿತ್ತು. ಸಿದ್ದೇಶ್ವರ ಶ್ರೀಗಳ ಪ್ರವಚನಕ್ಕೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲೂ ಅಪಾರ ಜನ ಸೇರುತ್ತಿದ್ದರು. ಅವರೊಬ್ಬ ಶತಮಾನ ಕಂಡ ಶ್ರೇಷ್ಠ ಸಂತರು ಎಂದುನಿ ವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ ಹೇಳಿದರು. ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿವಿಯ ಜ್ಞಾನ ಗಂಗಾ ಭವನದಲ್ಲಿ ನಡೆದ ಸಿದ್ದೇಶ್ವರ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪಟ್ಟಣದ ಓಂಕಾರ ಆಶ್ರಮದ ಡಾ. ಸ್ವರೂಪಾನಂದ
ಸ್ವಾಮೀಜಿ,ಬ್ರಹ್ಮ ಕುಮಾರಿ ವಿವಿಯ ಬಿ.ಕೆ.ಯಮುನಾ
ಅಕ್ಕಾ , ಬಿ.ಕೆ. ಶ್ರೀದೇವಿ ಅಕ್ಕನವರು, ಪುರಸಭೆ
ಸದಸ್ಯ ಅನೀಲಗೌಡ ಬಿರಾದಾರ, ನಿವೃತ್ತ ಪ್ರಾಚಾರ್ಯ
ಐ.ಬಿ.ಸುರಪುರ, ಯೋಗ ಶಿಕ್ಷಕ ಬಿ.ಎಸ್.ಪಾಟೀಲ
ಮಾತನಾಡಿ ಸಮಾಜದ ಒಳತಿಗೆ ಜ್ಞಾನವನ್ನು ಬಿತ್ತಿದ
ಸಿದ್ದೇಶ್ವರ ಸ್ವಾಮಿಜೀಯವರು ನಾಡಿನ ಜನರ
ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ
ಅವರು ನುಡಿದಂತೆ ನಡೆದ ಶ್ರೇಷ್ಠ ಸಂತರು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ತಹಸೀಲ್ದಾರ ಶಿವಲಿಂಗಪ್ಪ ಪಟ್ಟದಕಲ್ಲ, ರಾಜಶ್ರೀ ಕೋಳೆಕರ, ಅರವಿಂದ ಕಠಾರೆ, ಅಲೆಗಾವಿ, ಉಮಾ ಪಟ್ಟದಕಲ್ಲ, ನಾಗಮ್ಮ ಸಂಗಾ, ದ್ರಾಕ್ಷಾಯಿಣಿ ಮೈದರಗಿ, ವಿದ್ಯಾಶ್ರೀ ಪಾಟೀಲ, ಶ್ಯಾಮಲಾ ಬಗಲಿ , ಭಾರತಿ ಮಾಳಾಬಾಗಿ, ಜ್ಯೋತಿ ವಂದಾಲ, ಪವಿತ್ರ ವಾಲಿ , ಸುಮಾ ಪತಂಗಿ, ಜಯಶ್ರೀ ಪತ್ತಾರ ಮತ್ತಿತರಿದ್ದರು.
ಇಂಡಿ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿವಿಯ ಜ್ಞಾನ ಗಂಗಾ ಭವನದಲ್ಲಿ ನಡೆದ ಸಿದ್ದೇಶ್ವರ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮದಲ್ಲಿ ಗಾಣಿಗೇರ ಮಾತನಾಡಿದರು.



















