ತಾಲೂಕಾಡಳಿತ ನೇತೃತ್ವದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೩೯೬ನೇ ಜಯಂತ್ಯೋತ್ಸವ
ಶಿವಾಜಿ ಮಹಾರಾಜರ ಆದರ್ಶ ಎಲ್ಲರಿಗೂ ಅನುಕರಣಿಯ-ತಹಶಿಲ್ದಾರ ಚಾಲಕ
ಮುದ್ದೇಬಿಹಾಳ, ಛತ್ರಪತಿ ಶಿವಾಜಿ ಮಹಾರಾಜರಿಗೆ ಮಾತೃದೇವೋಭವವೆಂಬುದು ಚಿಕ್ಕಂದಿನಿಂದಲೇ ಅರಿತಿದ್ದಲ್ಲದೇ ಮಾತೆ ಜೀಜಾಬಾಯಿ ದಿನನಿತ್ಯ ಶ್ರೀದೇವಿ ತುಳಜಾಭವಾನಿಯನ್ನು ಪೂಜಿಸುತ್ತಾ ಶೂರ ದೀರ ಮಗನನ್ನು ದಯಪಾಲಿಸುವ ತಾಯಿ ಎಂಬ ಆಕೆಯ ಭಕ್ತಿಗೆ ಮೆಚ್ಚಿ ಛತ್ರಪತಿ ಶಿವಾಜಿ ಮಹರಾಜರು ಜನ್ಮತಾಳಲು ಕಾರಣವಾಯಿತೆಂದು ತಹಸಿಲ್ದಾರರಾದ ಶ್ರೀಮತಿ ಕೀರ್ತಿ ಚಾಲಕ್ ಅವರು ಹೇಳಿದರು.
ಗುರುವಾರರಂದು ತಾಲೂಕಾಡಳಿತ ಕಂದಾಯ ಇಲಾಖೆಯ ವತಿಯಿಂದ ಏರ್ಪಡಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ೩೯೬ನೇ ಜಯಂತ್ಯೋತ್ಸವ ಅಂಗವಾಗಿ ಭಜಾರ ಹನುಮಾನ ದೇವಸ್ಥಾನದ ಆವರಣದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಮಹಾಪೂಜೆ ಸಲ್ಲಿಸುವದರೊಂದಿಗೆ ಶಿವಾಜಿ ಮಹಾರಾಜರ ಭಾವಚಿತ್ರದ ಮೇರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು ತಾಯಿಯಭಕ್ತಿಯ ಮಾತನ್ನು ಪಾಳಿಸುತ್ತಿದ್ದ ಶಿವಾಜಿ ಅವರಿಗೂ ಶ್ರೀ ದೇವಿಯ ವಲುಮೆಯಾಗಿತ್ತು ದೇಶದ ಇತಿಹಾಸ ಕಾಪಾಡಬೇಕೆಂಬ ಮಹಾದಾಸೆಯನ್ನು ಹೊಂದಿದ್ದ ಅವರ ಇತಿಹಾಸವನ್ನು ಓದಿದರೆ ಅವರ ವ್ಯಕ್ತಿತ್ವ ಸಾಹಸಗಳ ಕುರಿತು ಓದಿದರೆ ಮೈ ರೋಮಾಂಚನಗೊಳ್ಳುವಂತಹದ್ದಾಗಿದೆ ಅವರ ತಾಯಿಯ ಮಾರ್ಗದರ್ಶನ ಒಳ್ಳೆಯ ದಾರಿದೀಪವಾಗಿತ್ತು ಮಾತೆಯರು ಅದನ್ನು ಅರೀತು ಮಕ್ಕಳಿಗೆ ಒಳ್ಳೆಯ ದೈರ್ಯಶಾಲಿ ವಿದ್ಯಾವಂತರನ್ನಾಗಿ ಮಾಡಲು ಮುಂದಾಗಬೇಕೆಂದರು.
ತಾಲೂಕಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಅವರು ಮಾತನಾಡಿ ಭಾರತದ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಣಾಪ್ರತಾಪಸಿಂಹ ರಂತಹ ಶೂರ ದೀರರು ತಮ್ಮ ತಮ್ಮ ವೈಯಕ್ತಿಕ ಆದಾಯಕ್ಕಾಗಿ ಹೋರಾಟ ಮಾಡಿಲ್ಲಾ ಅವರಲ್ಲಿ ದೇಶದ ಹಿತರಕ್ಷಣೆ ಎಂಬುದು ಅಡಗಿತ್ತು ಶಿವಾಜಿ ಮಹಾರಾಜರಿಗೆ ತಾಯಿ ಜೀಜಾಬಾಯಿ ನೀಡಿದ ಸಂಸ್ಕಾರ ಮಹತ್ವದ್ದಾಗಿತ್ತು ಗುರು ಎನ್ನುವ ಸ್ಥಾನ ಮಹತ್ವ ನೀಡಿದ ಅವರು ಅವರ ಮಾತನ್ನು ಆಲಿಸುತ್ತಾ ಚಿಕ್ಕ ಚಿಕ್ಕ ಯುದ್ದಗಳನ್ನು ಮಾಡುತ್ತಾ ಶೂರ ದೀರ ಎನಿಸಿಕೊಳ್ಳುತ್ತಾ ಚಾಣಾಕ್ಷಬುದ್ದಿಯನ್ನು ಉಪಯೋಗಿಸುತ್ತಾ ವೈದಿಕ ಯುಗದಲ್ಲಿ ಪಟ್ಟಾಭಿಷೇಕ ಮಾಡಿಸಿಕೊಂಡ ಶಿವಾಜಿ ಮಹಾರಾಜರು ಕ್ಷತ್ರೀಯ ವಂಶದಲ್ಲಿ ಜನ್ಮತಾಳಿದ ಇವರು ವಂಶ ಪರಂಪರೆ ರಾಜನಾಗಿದ್ದ ಅವರು ರೈತರ ಹಿತರಕ್ಷಣೆ ಬಯಸಿದ್ದರು ಸರ್ವ ಧರ್ಮ ಶ್ರೇಷ್ಠತೆ ಎಂಬ ವಿಚಾರವು ಅವರ ಇತಿಹಾಸ ಬಿಚ್ಚಿಟ್ಟಾಗ ಗೊತ್ತಾಗುತ್ತದೆ ಎಂದ ಬೆಳಗಲ್ಲ ಅವರು ತಾಯಿಯ ಸ್ಥಾನಮಾನದಲ್ಲಿದ್ದವರು ತಾಯಿ ಮಾತೆ ಜೀಜಾಬಾಯಿಯ ಮಾರ್ಗವನ್ನು ಅನುಸರಿಸಿದರೆ ಛತ್ರಪತಿ ಶಿವಾಜಿ ಮಹಾರಾಜರಂತಹ ಮಗನ್ನು ಪಡೆಯಬಹುದಾಗಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ರಾಜನಾರಾಯಣ ನಲವಡೆ, ಸಮಾಜ ಸೇವಕ ಉದಯ ರಾಯಚೂರ, ಅವರು ಮಾತನಾಡಿ ಕೆಲವು ಅಂಕಣಕಾರರು ತಮ್ಮ ಹೆಸರನ್ನು ಭಹಿರಂಗ ಪಡಿಸಿಕೊಳ್ಳಲು ಶಿವಾಜಿ ಮಹಾರಾಜರ ಇತಿಹಾಸ ತಿರುಚಿಬರೆಯುವ ಹವ್ಯಾಸ ರೂಡಿಸಿಕೊಂಡಿದ್ದಾರೆ ಹಾಗಾಗಬಾರದು ಅವರ ಸತ್ಯಾಸತ್ಯತೆಯ ಇತಿಹಾಸ ಹೊರ ಹಾಕಿದರೆ ಎಲ್ಲ ಸಮೂದಾಯಕ್ಕೆ ಸಮಾಜಕ್ಕೆ ಒಳಿತಾಗುತ್ತದೆ ಶಿವಾಜಿ ಮಹಾರಾಜರಲ್ಲಿದ್ದ ದೇಶ ಪ್ರೇಮ ಮಾತೃಪ್ರೇಮ, ಮಹಿಳೆಯರ ಮೇಲೆ ಆಗುವ ದೌರ್ಜನ್ಯ ಕಂಡು ಬಂದರೆ ಅಂದಿನ ಕಾಲದಲ್ಲಿ ತಕ್ಕ ಶಿಕ್ಷೆ ನೀಡಲಾಗುತ್ತಿತ್ತು ಎಂಬುದರ ಕುರಿತು ತಿಳಿಹೇಳಿದರಲ್ಲದೇ ಶಿವಾಜಿ ಮಹಾರಾಜರು ಜನ್ಮತಾಳದಿದ್ದರೆ ಹಿಂದುತ್ವವೆಂಬುದು ಅಷ್ಠೇ ಅಲ್ಲಾ ನಾವೂಕೂಡಾ ಇಲ್ಲಿ ಇರುತ್ತಿದ್ದೀಲ್ಲಾವೆಂಬ ಭಾವನೆಯನ್ನು ವ್ಯಕ್ತಪಡಿಸಿ ಶಿವಾಜಿ ಮಹಾರಾಜರ ಜನ್ಮ ಹಾಗೂ ಅವರ ಆದರ್ಶಮಯ ತಿಳುವಳಿಕೆಗಳ ಕುರಿತು ವಿವರಿಸಿದರು.
ಮೇರಣಿಗೆಯು ಶಿವಾಜಿ ಮಹಾರಾಜರ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಮರಾಠಾ ಸಮಾಜ ಬಾಂದವರ ನೇತೃತ್ವದಲ್ಲಿ ಆಯೋಜಿಸಲಾದ ದ್ವಜಾರೋಹಣ ಕಾರ್ಯಕ್ರಮವನ್ನು ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ ಅವರು ನೇರವೇರಿಸಿದರು.
ಈ ಸಂದರ್ಭದಲ್ಲಿ ಮರಾಠಾ ಸಮಾಜದ ಗೌರವಾಧ್ಯಕ್ಷ ರಾಜೇಂದ್ರ ಭೋಸಲೆ, ಉಪಾಧ್ಯಕ್ಷ ಅಣ್ಣಾಜಿ ಪವಾರ, ರಾಘವೇಂದ್ರ ಘಾಟಗೆ, ಖಜಾಂಚಿ ರಮೇಶ ಥೋರಾತ, ರವಿ ಭೋಸಲೆ, ಪ್ರ.ಕಾರ್ಯದರ್ಶಿ ಕೃಷ್ಣಾಜಿ ಪವಾರ. ಹಣಮಂತ ನಲವಡೆ, ಭರತ ಭೋಸಲೆ, ಮಾರುತಿ ನಲವಡೆ, ರಾಘವೇಂದ್ರ ನಲವಡೆ, ಸಚೀನ ಸಾಳುಂಕೆ, ಕೀರಣ ಪವಾರ, ಅನೀಲ ಜಾಧವ, ಅನೀಲ ಪವಾರ, ಸಂತೋಷ ಚವ್ಹಾಣ, ವಿನಾಯಕ ಘಾಟಗೆ, ವಿನೋದ ಜಾಧವ, ಲೋಹಿತ್ ಘಾಟಗೆ, ಗಣೇಶ ಘಾಟಗೆ, ಕೃಷ್ಣಾ ಭೋಸಲೆ, ಗಜಾನನ ನಲವಡೆ, ಬಸವರಾಜ ಸೂರ್ಯವಂಶಿ, ಸಂತೋಷ ಸಾಳುಂಕೆ, ಈಶ್ವರಪ್ಪ ಪವಾರ, ವಿರೇಶ ಹಾದಿಮನಿ, ಕಾಶಿಬಾಯಿ ರಾಂಪೂರ, ಪ್ರಭು ಕಡಿ, ಭೀಮಾಜಿ ಘಾಟಗೆ, ಕಾಮರಾಜ ಬಿರಾದಾರ, ಮಾಣಿಕ ದಂಡಾವತಿ, ಸುರೇಶ ಪಾಟೀಲ, ವಿಜು ಬಡಿಗೇರ, ನಾಗೇಶ ಲಾತೂರಕರ, ಸಂಗಮ್ಮ ದೇವರಳ್ಳಿ, ಗೌರಿಶಂಕರ ಹಿರೇಠಮಠ, ಪ್ರೀತಿ ದೇಗಿನಾಳ, ತಾಲೂಕಾ ದೈಹಿಕ ಶಿಕ್ಷಕರಾದ ಎ.ಜೆ.ದಖನಿ ಮೊದಲಾದವರು ಉಪಸ್ಥಿತರಿದ್ದರು.
ಟಿ.ಡಿ.ಲಮಾಣೆ ಸ್ವಾಗತಿಸಿ ನಿರೂಪಿಸಿದರು.