ಶೋಷಿತರಿಗೆ ಅಕ್ಷರದ ಬೆಳಕು ನೀಡಿದ ಸಾವಿತ್ರಿಬಾಯಿ
: ಸಂತೋಷ ಬಂಡೆ
ಇಂಡಿ: ಭಾರತೀಯ ಸಮಾಜ ಲಿಂಗಬೇಧದ
ಅಸಮಾನತೆಯಲ್ಲಿ ಬಳಲುತ್ತಿದ್ದಾಗ, ಹೆಣ್ಣು ಮಕ್ಕಳಿಗೆ
ಶಿಕ್ಷಣವನ್ನು ನಿರಾಕರಿಸಿದ್ದ ಕಾಲಘಟ್ಟದಲ್ಲಿ ಸಾವಿತ್ರಿಬಾಯಿ ಫುಲೆ ಶೋಷಿತರಿಗೆ ಅಕ್ಷರದ ಬೆಳಕು ನೀಡಿದ ಮೊದಲ ಮಹಿಳಾ ಶಿಕ್ಷಕಿ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಗುರುವಾರ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್,
ಕೆಜಿಎಸ್,ಯುಬಿಎಸ್ ಶಾಲೆಗಳ ವತಿಯಿಂದ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲ್ಯವಿವಾಹವಾಗಿದ್ದರೂ, ಪತಿ ಜ್ಯೋತಿಬಾ ಅವರಿಂದ ಪ್ರೇರಣೆ ಪಡೆದು ಅಕ್ಷರ ಕಲಿತು ಶಿಕ್ಷಕ ತರಬೇತಿ ಮುಗಿಸಿ, ದಲಿತ ಮತ್ತು ಶೋಷಿತ ಸಮುದಾಯದ ಬಾಲಕಿಯರಿಗೆ ಶಾಲೆ ಪ್ರಾರಂಭಿಸಿ, ಶಿಕ್ಷಕಿಯಾದ ಅವರ ಜೀವನ
ರೋಚಕವಾದುದು. ಸಮಾಜದ ಬಹಿರಂಗ ಹಾಗೂ ಹೆಜ್ಜೆ
ಹೆಜ್ಜೆಗೂ ಅವಮಾನ ಅನುಭವಿಸುತ್ತಾ, ಛಲ ಬಿಡದೇ
ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ ಸಾವಿತ್ರಿಬಾಯಿ ಭಾರತೀಯ ಸಮಾಜಕ್ಕೆ ಸ್ಫೂರ್ತಿ ಎಂದು ಹೇಳಿದರು.
ಶಿಕ್ಷಕಿ ಎಸ್.ಬಿ. ಕುಲಕರ್ಣಿ ಮಾತನಾಡಿ, ಬಾಲ್ಯ ವಿವಾಹ ಮತ್ತು ವಿಧವೆಯರ ಬಹಿಷ್ಕಾರ ದ ಪ್ರಾಚೀನ ಪದ್ಧತಿಗಳನ್ನು ಅವರು ಕಟುವಾಗಿ ವಿರೋಧಿಸಿದರು. ಆಕೆಯ ಕಾವ್ಯಾತ್ಮಕ ಕೃತಿಗಳು ಆಕೆಯ ಸುಧಾರಣಾವಾದಿ
ದೃಷ್ಟಿಕೋನಗಳನ್ನು ಪ್ರತಿಧ್ವನಿಸಿದವು. ಅವು ಸಾಮಾಜಿಕ ಪರಿವರ್ತನೆಯನ್ನು ತರುವ ಗುರಿಯನ್ನು ಹೊಂದಿದ್ದವು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ
ಶಿಕ್ಷಕಿ ವಿ.ವೈ. ಪತ್ತಾರ ಮಾತನಾಡಿ, ಮೊದಲ ಮಹಿಳಾ
ಶಿಕ್ಷಕಿಯಾದ ಅವರು ದೇಶದಲ್ಲಿ ಸ್ತ್ರೀವಾದಿ ಚಳುವಳಿ
ಮತ್ತು ಮಹಿಳಾ ಶಿಕ್ಷಣವನ್ನು ಮುನ್ನಡೆಸಿದರು. ಅವರು
ಸಾಮಾಜಿಕ ಸುಧಾರಣೆಗೆ ಒತ್ತು ನೀಡುತ್ತಾ, ಬಾಲ್ಯವಿವಾಹ ಮತ್ತು ಜಾತಿ ತಾರತಮ್ಯಗಳ ನಿರ್ಮೂಲನೆಗೆ ಶ್ರಮಿಸಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್.ಎಂ. ಪಂಚಮುಖಿ, ಜೆ.ಸಿ. ಗುಣಕಿ, ಎಸ್.ಎನ್. ಡಂಗಿ, ಯಲ್ಲಮ್ಮ ಸಾಲೋಟಗಿ, ಸಂತೋಷ ಬಿರಾದಾರ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.
ಇಂಡಿ: ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್,
ಕೆಜಿಎಸ್,ಯುಬಿಎಸ್ ಶಾಲೆಗಳ ವತಿಯಿಂದ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಆಚರಣೆಗೆ ಚಾಲನೆ ನೀಡಿ ಸಂತೋಷ ಬಂಡೆ ಮಾತನಾಡಿದರು.