ಇಂಡಿ : ಭಾರತೀಯ ಸಾಂಸ್ಕೃತಿಕ ಸಂಸ್ಕಾರಗಳ ಅನಾವರಣ ಕಾರ್ಯಕ್ರಮವು ವಿಜ್ರಂಬಣೆಯಿಂದ ನೇಗಿಲು ಪೂಜೆಯೊಂದಿಗೆ ಕರ್ನಾಟಕ ಟೀಚರ್ಸ್ ಬಿ.ಇ.ಡಿ ಕಾಲೇಜಿನಲ್ಲಿ ಉದ್ಘಾಟಿಸಲಾಯಿತು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಕರ್ನಾಟಕ ಬಿಇಡಿ ಕಾಲೇಜಿನಲ್ಲಿ ಅತಿಥಿ ಗಣ್ಯರನ್ನು ಎತ್ತಿನ ಬಂಡೆಯಲ್ಲಿ ಬರಮಾಡಿಕೊಂಡಿದ್ದು ವಿಶೇವಾಗಿತ್ತು. ಇನ್ನೂ ಪೂರ್ವಜರ್ ಸಾಂಪ್ರದಾಯದಂತೆ ಉಡುಗೆ ತೊಡಿಗೆ ತೊಟ್ಟು ವಿವಿಧ ರೀತಿಯ ಅಡುಗೆಗಳನ್ನು ತಯಾರಿಸಿ ಸಂಪ್ರದಾಯ ಮೆರೆಯಲಾಗಿತ್ತು. ಅದಲ್ಲದೇ ಹಲವಾರು ಸಾಮಾಜಿಕ ಸಂದೇಶ ಸಾರುವಂತಹ ವರದಕ್ಷಿಣೆ ಪಿಡುಗು, ಭ್ರೂಣ ಹತ್ಯೆ, ಬಾಲ್ಯವಿವಾಹ, ಮರಳಿ ಮಿಂಚಿದ ಬಾಳು, ಹೀಗೆ ಹಲವಾರು ನಾಟಕಗಳನ್ನು ಪ್ರಶಿಕ್ಷಣಾರ್ಥಿಗಳು ಪ್ರದರ್ಶನ ಮಾಡಿದರು. ಜನಪದ ನೃತ್ಯ, ಜನಪದ ಹಾಡು, ಏಕ ಅಭಿನಯ ಪಾತ್ರ ಸತತ ಎರಡು ದಿನಗಳ ಕಾಲ ಚಟುವಟಿಕೆಗಳು ನಡೆದವು.
ಈ ಕಾರ್ಯಕ್ರಮ ಅಧ್ಯಕ್ಷತೆ ಎಸ್.ಎಮ್ ಕಡಕೋಳ , ಮುಖ್ಯ ಅತಿಥಿ ಬಸವರಾಜ್ ಕುಂಬಾರ, ಉದ್ಘಾಟಿಕರಾಗಿ ಪಿ.ಬಿ ಕತ್ತಿ, ಹಾಗೂ ಉಪಸ್ಥಿತಿ ಡಾ ಸುಧಾ ಸುಣಗಾರ ಪ್ರಾಚಾರ್ಯರರು ವಹಿಸಿಕೊಂಡಿದ್ದರು.
ಇನ್ನೂ ಸಂಯೋಜಕ ಪ್ರೊ ಬಿ.ಕೆ ಉಕುಮನಾಳ, ಪ್ರೊ ಎಸ್ ಎಸ್ ಉಟಗಿ, ಹಾಗೂ ಸಿಬ್ಬಂದಿವರ್ಗ, ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.