ಜೀವನದಲ್ಲಿ ಸಂಸ್ಕಾರ ಬಹಳ ಮುಖ್ಯ: ನಿಜಗುಣದೇವ ಶ್ರೀ
ಇಂಡಿ: ಮನುಷ್ಯನ ಜೀವನದಲ್ಲಿ ಸಂಸ್ಕಾರ ಬಹಳ ಮುಖ್ಯ. ಪತಿ – ಪತ್ನಿ ತಮ್ಮ ಮಕ್ಕಳ ಮುಂದೆ ಜಗಳವಾಡಿದರೆ ಮಕ್ಕಳ ಸಂಸ್ಕಾರ ಹಾಳಾಗುತ್ತದೆ. ಆದ್ದರಿಂದ ತಂದೆ – ತಾಯಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಪ್ರವಚನಕಾರ ಮದರಖಂಡಿಯ ಶ್ರೀ ನಿಜಗುಣದೇವ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸೆ. ೨೪ ಹಾಗೂ ೨೫ ರಂದು ಜರುಗಲಿರುವ ಸದ್ಗುರು ಶ್ರೀ ಸಿದ್ಧಲಿಂಗ ಮಹಾರಾಜರ ೯೭ನೇ ಪುಣ್ಯಾರಾಧನೆಯ ಅಂಗವಾಗಿ ಭಾನುವಾರ (ಸೆ.೧೫ ರಂದು) ೪ನೇ ದಿನದಲ್ಲಿ ನಡೆದ ಅಜಾತ ನಾಗಲಿಂಗ ಅಜ್ಜನವರ ಪುರಾಣ ಕಾರ್ಯಕ್ರಮ ನಡೆಸಿಕೊಟ್ಟು ಅವರು ಮಾತನಾಡಿದರು.
ಪುರಾಣ ಚರಿತ್ರೆಯ ನಾಯಕ ನಾಗಲಿಂಗ ಅಜ್ಜನವರು. ತಾಯಿಯ ಬಗ್ಗೆ ಅಪಾರವಾದ ಗೌರವ ಹೊಂದಿದ್ದರು. ತಾಯಿ ಆಡಿದ ಸಿಟ್ಟಿನ ನುಡಿಯೇ ಆಶಿರ್ವಾದವಾಗಿ ಮುಂದೆ ಸಂನ್ಯಾಸಿಯಾದರು, ಮಹಾತ್ಮರಾದರು. ಜೀವನದ ದರ್ಶನಕ್ಕೆ ಬಂಥನಾಳ ಶ್ರೀಗಳಂತಹ, ಸಿದ್ಧಲಿಂಗರAಥಹ, ನಾಗಲಿಂಥಹ ಮಹಾತ್ಮರು ತಮ್ಮ ಭಕ್ತರಿಗೆ ಯೋಗ್ಯವಾದ ದಾರಿ ತೋರಿಸಿದ ಸತ್ಪುರುಷರು ಎಂದು ಸ್ಮರಿಸಿದರು.
ಶಿವಾಜಿ ಮಹಾರಾಜನಿಗೆ ಉತ್ತಮ ಸಂಸ್ಕಾರ ನೀಡಿದವಳು ತಾಯಿ ಜೀಜಾಬಾಯಿ, ಪುಂಡಲೀಕನು ತಂದೆ ತಾಯಿಯ ಸೇವೆಯಲ್ಲಿ ತೊಡಗಿ ಸಂದರ್ಭದಲ್ಲಿ ಸಾಕ್ಷಾತ ಪಾಂಡುರAಗ ದೇವರು ಮನೆ ಬಾಗಲಿಗೆ ಬಂದರೂ ಜನ್ಮ ಕೊಟ್ಟ ತಂದೆ ತಾಯಿಯ ಸೇವೆ ಬಿಡಲಿಲ್ಲ. ಅದಕ್ಕಾಗಿ ಎಲ್ಲೂ ಕಾಣದ ದೇವರನ್ನು ಹುಡುಕುವದಕ್ಕಿಂತ ಕಣ ್ಣಗೆ ಕಾಣುವ ತಂದೆ ತಾಯಿಯನ್ನೆ ನಿಜವಾದ ದೇವರೆಂದು ಪೂಜಿಸಿ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಈ ದಿನದ ದಾಸೋಹ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕ ವಿಠ್ಠಲ ಕರಾಳೆ ಅವರನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗವಾಯಿ ರುದ್ರಪ್ಪ ಹೂಗಾರ ಹಡೆದ ತಾಯಿಯ ಮಹಿಮೆಯ ಕುರಿತು ಅತ್ಯಂತ ಸುಶ್ರಾವ್ಯವಾಗಿ ಹಾಡಿದರು. ನಿರಂಜನ್ ರುಇಕರ ತಬಲಾ ಸಾಥ್ ನೀಡಿದರು.
ಬಳಿಕ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರಿಗೆ ಅನ್ನ, ಸಾಂಬಾರು, ಸೀರಾ ಪ್ರಸಾದ ವಿತರಿಸಲಾಯಿತು.
ಕಳೆದ ೩ ದಿನ ನಡೆದ ಪುರಾಣ ಕಾರ್ಯಕ್ರಮದಲ್ಲಿ ೧ನೇ ದಿನ ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡ, ೨ನೇ ದಿನ ಪಡನೂರ ಗ್ರಾಮದ ಸಿದ್ದು ಪೂಜಾರಿ, ೩ನೇ ಇಂಡಿ ಪಟ್ಟಣದ ಸಂಜೀವಕುಮಾರ ರೂಗಿ ಮನೆತನದವರು ಒಂದು ದಿನದ ದಾಸೋಹ ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡ, ನಿವೃತ್ತ ಮುಖ್ಯೋಪಾಧ್ಯಾಯ ಡಿ.ಎಸ್. ಪಾಟೀಲ, ಗಣ್ಯ ವ್ಯಾಪಾಸ್ಥರಾದ ಎಂ.ಎಸ್. ಮುಜಗೊಂಡ, ಸಂಕಪಗೌಡ ಬಿರಾದಾರ, ಹಣಮಂತ ಮುಜಗೊಂಡ, ಜಗದೀಶ ಬಾಬುಳಗಾವ, ವ್ಹಿ.ಸಿ. ಬಿರಾದಾರ, ಶ್ರೀಶೈಲ ಸಂಭಾಜಿ, ಶಿವನಿಂಗಪ್ಪ ಸಿದ್ರಾಮಶೆಟ್ಟಿ, ಸ್ವಯಂ ಸೇವಕರಾದ ಸುಧಾಕರ ಬಿರಾದಾರ, ಸಂಜೀವ ಅಂಕಲಗಿ, ಮಂಜುನಾಥ ನಿಂಬರಗಿ, ಹಣಮಂತ ನಿಂಬರಗಿ, ಕುಂಬಾರ, ಗುರುಪಾದ ಬಾಬುಳಗಿ, ಇದ್ದರು. ಶಿಕ್ಷಕ ಹಣಮಂತ ಕಾಗವಾಡ ಸ್ವಾಗತಿಸಿದರು. ಶಿವಯೋಗಿ ಬಿರಾದಾರ ವಂದಿಸಿದರು.