ಲಿಂಗಸೂಗೂರು: ರಾಯಚೂರ ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಪುರಸಭೆಯ ಉದ್ಯಾನವನದಲ್ಲಿ ಸಮೃದ್ಧಿ ಸ್ನೇಹಿತರ ಬಳಗದ ವತಿಯಿಂದ ಉಚಿತ ಬಟ್ಟೆ ವಿತರಣೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೊಸವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಬಡವರಿಗೆ ಬಟ್ಟೆ ಮತ್ತು ಆಹಾರ ವಿತರಣೆ ಕಾರ್ಯಕ್ರಮವನ್ನು ಲಿಂಗಸೂಗೂರು ಸಿಪಿಐ ಮಹಾಂತೇಶ್ ಸಜ್ಜನ್ ಉದ್ಘಾಟಿಸಿ ಮಾತನಾಡಿದರು.

ಈ ಸಮೃದ್ಧಿ ಸ್ನೇಹಿತರ ಬಳಗ ಸ್ಥಾಪನೆಯಾಗಿ ಬಹಳ ದಿನ ಆಗಿಲ್ಲ. ಸುಮಾರು ಎರಡರಿಂದ ಮೂರು ತಿಂಗಳ ಆಗಿರಬಹುದು. ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ಬಡವರಿಗಾಗಿ ಬಟ್ಟೆ, ಅನ್ನ ನೀರು ಕೊಡುವ ಮೂಲಕ ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬ ತಾಲೂಕಿನ ನಾಗರಿಕರು ನಿಮ್ಮ ಮನೆಯಲ್ಲಿ ಇದ್ದತಂಹ ಬಟ್ಟೆ ಹಾಗೂ ಹಳೆಯ ಪಾತ್ರೆ ಇನ್ನಿತರ ವಸ್ತುಗಳನ್ನು ಸಮೃದ್ಧಿ ಸ್ನೇಹಿತರ ಬಳಗಕ್ಕೆ ನೀಡಿದರೆ ಆ ವಸ್ತುಗಳನ್ನು ಬಡ ಬಗ್ಗರಿಗೆ ತಲುಪಿಸುವಂತ ಕೆಲಸ ಸಮೃದ್ಧಿ ಸ್ನೇಹಿತರ ಬಳಗ ಮಾಡುತ್ತೆ. ನಿಮ್ಮ ಮನೆಗಳಲ್ಲಿ ಉಳಿದಂತ ಆಹಾರವನ್ನು ಚೆಲ್ಲಬೇಡಿ. ಸಮೃದ್ಧಿ ಸ್ನೇಹಿತರ ಬಳಗವನ್ನು ಸಂಪರ್ಕಿಸಿ ಆಹಾರವನ್ನು ನೀಡಿದರೆ ನೀವು ಕೊಟ್ಟಂತಹ ಆಹಾರ ಪದಾರ್ಥವನ್ನು ನೂರಾರು ಬಡವರ ಹಸಿವನ್ನು ನೀಗಿಸುವಂತ ಕೆಲಸ ಸಮೃದ್ಧಿ ಸ್ನೇಹಿತರ ಬಳಗದ ಕಾರ್ಯಕರ್ತರು ಮಾಡುತ್ತಾರೆ. ಅದಕ್ಕಾಗಿ ಪ್ರತಿಯೊಬ್ಬರು ಸಮೃದ್ಧಿ ಸ್ನೇಹಿತರ ಬಳಗದ ಜೊತೆ ಕೈಜೋಡಿಸಬೇಕು ಎಂದರು.



















