ವಿಜಯಪುರ:
ವಿಜಯಪುರದಲ್ಲಿ ರಾಜ್ಯ ಸಭೆ ಸದಸ್ಯೆ ಸುಧಾಮೂರ್ತಿ ಹೇಳಿಕೆ
ಐತಿಹಾಸಿಕ ವಿಜಯಪುರ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ
ಕೃಷ್ಣಾ ತೀರದ ಜನರ ಒಡನಾಟ ಮತ್ತು ಇಲ್ಲಿ ಸಂಬಂಧಿಕರನ್ನು ಹೊಂದಿದ್ದೇನೆ
ಐತಿಹಾಸಿಕ ವಿಜಯಪುರ ಜಿಲ್ಲೆಯನ್ನು ನೋಡಲ್ ಜಿಲ್ಲೆಯನ್ನಾಗಿ ಆಯ್ದುಕೊಂಡಿದ್ದೇನೆ
ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಯೋಜನೆ ಮತ್ತು ಯೋಚನೆ ಹೊಂದಿದ್ದಾರೆ
ದೆಹಲಿ, ಮುಂಬೈ ಮತ್ತಿತರ ಭಾಗಗಳಿಂದ ವಿಜಯಪುರಕ್ಕೆ ಅನೇಕ ಪ್ರವಾಸಿಗರು ಬರುತ್ತಾರೆ
ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರ ಬಲಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿರುವ ಸುಧಾಮೂರ್ತಿ ಅವರು ಈ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು
ಕಾಯಕಲ್ಪ ಪ್ರಶಸ್ತಿ ಕಂಡ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಧರ್ಮ ಶಾಲೆ ಸ್ಥಾಪಿಸುವ ಅವಶ್ಯಕತೆ ಇದೆ
ಆ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ
ಸಿಂದಗಿ, ಬಸವನಬಾಗೇವಾಡಿ ಹಾಗೂ ತಾಳಿಕೋಟೆಯಲ್ಲಿ ಸುಸಜ್ಜಿತ ಗ್ರಂಥಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದೆ
ವಿಜಯಪುರ ಜಿಲ್ಲೆ ಜನ ಕೌಶಲ್ಯ ಹೊಂದಿದವರು, ಇಲ್ಲೊಂದು ಜಿಮ್ ಅವಶ್ಯಕತೆ ಇದೆ
ಬರುವ ದಿನಗಳಲ್ಲಿ ಪಟ್ಟಿ ಮಾಡಿ ಆದ್ಯತಾನುಸಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು
ಕುಮಟಗಿಯ ಬೇಸಿಗೆ ಅರಮನೆಯ ಅಭಿವೃದ್ಧಿಗಾಗಿ 2 ಕೋಟಿ ರೂ.ಅನುದಾನ ನೀಡಲಾಗುವುದು