– ಕುಖ್ಯಾತಿ ರೌಡಿ ಮಲ್ಲಿಕಾರ್ಜುನ ಬಂಧನಕ್ಕೆ ವಿಶೇಷ ತಂಡ.
ಚಡಚಣ : ಭೀಮಾತೀರದಲ್ಲಿ ಬಾಲ ಬಿಚ್ಚಿದರೆ ಗಡಿಪಾರು ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಇಂಡಿ ಪೋಲಿಸ್ ಉಪವಿಭಾಗ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ ದೊಡ್ಡಿ. ವಿಜಯಪುರ ಜಿಲ್ಲೆಯ ನೂತನ ಚಡಚಣ ತಾಲ್ಲೂಕು ಕೇಂದ್ರದ ಪೋಲಿಸ್ ಠಾಣಾ ಆವರಣದಲ್ಲಿ ಭಾನುವಾರ ರೌಡಿಗಳಿಗೆ ಪರೆಡ ನಡೆಸಿ ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ಕೊಟ್ಟರು.
ಚಡಚಣ ಹಾಗೂ ಝಳಕಿ ಪೋಲಿಸ್ ಠಾಣಾ ವ್ಯಾಪ್ತಿಯ ಸುಮಾರು 42 ಕ್ಕೂ ಹೆಚ್ಚು ರೌಡಿಗಳಿಗೆ ಪರೇಡ ನಡೆಸಿ ಮಾತಾನಾಡಿದರು.ಈಗಾಗಲೇ ಹಲವು ಬಾರಿ ಮುನ್ನೆಚ್ಚರಿಕೆ ಕೊಡಲಾಗಿದೆ. ಆದರೂ ಕೆಲವು ಕಿಡಿಗೇಡಿಗಳು ದಷ್ಕೃತ್ಯಗಳಲ್ಲಿ ಭಾಗವಹಿಸಿದ್ದು ಗಮನಕ್ಕೆ ಬಂದಿದ್ದು ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಇನ್ನೂ ಮುಂದೆ ಯಾರಾದರೂ ಇಂತಹ ಚಿಕ್ಕ ಪುಟ್ಟ ಗಲಾಟೆ, ಅಮಾಯಕರ ಹತ್ತೀರ ಹಣ ವಸೂಲಾತಿ ಕಂಡು ಬಂದರೆ ಹಳೆ ಪ್ರಕರಣ ಜೊತೆ ಹೊಸ ಪ್ರಕರಣ ಸೇರಿಸಿ ಕಠಿಣ ಕ್ರಮ ಜರುಗಿಸಲಾಗುತ್ತೆ.
ಇನ್ನೂ ಸಮಾಜ ಘಾತುಕ ಚಟುವಟಿಕೆಗಳಿಲ್ಲಿ ತೊಡಗಿಕೊಳ್ಳದೆ ಪಟ್ಟಣದಲ್ಲಿ ಬಾಳೆ ಹಣ್ಣಾದಾರೂ ವ್ಯಾಪಾರ ಮಾಡಿ, ಒಳ್ಳೆಯ ಬದುಕು ಕಟ್ಟಿಕೊಂಡು ಕುಟುಂಬದಲ್ಲಿ ಚನ್ನಾಗಿ ಇರಿ ಎಂದು ಬುದ್ದಿವಾದ ಹೇಳಿದರು. ಆದರೆ ಇವೆಲ್ಲವನ್ನೂ ಬಿಟ್ಟು ಪಟ್ಟಣದಲ್ಲಿ ಅಮಾಯಕರಿಗೆ ಬೇದರಿಕೆ ಹಾಕವುದು, ದುಷ್ಕೃತ್ಯ ಕೈ ಹಾಕುವುದು, ಕೆಟ್ಟ ಚಾಳಿ ಹಿಡಿದಿರೆ, ಬಾಲ್ ಬಿಚ್ಚದಂತೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ.
ಅಲ್ಲದೇ, ಮುಂದೆ ಇಂತಹ ಕೆಲಸಕ್ಕೆ ಕೈ ಹಾಕದಂತೆ ಪಾಠ ಕಲಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು
ಅಲ್ಲದೇ ಸುಮಾರು ವರ್ಷಗಳ ಹಿಂದೆ ತಲೆಮರೆಸಿ – ಕೊಂಡಿರುವ ಕುಖ್ಯಾತ ರೌಡಿ ಮಲ್ಲಿಕಾರ್ಜುನ ಚಡಚಣ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದ್ದು, ಮಹಾರಾಷ್ಟ್ರದ ಪೋಲಿಸ್ ಸಹಕಾರದೊಂದಿಗೆ ಕೆಲವೇ ದಿನಗಳಲ್ಲಿ ಬಂಧಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐ ಸಾಹೇಬಗೌಡ ಪಾಟೀಲ್, ಪಿಎಸ್ಐ ತಿಪ್ಪಾರೆಡ್ಡಿ,ಝಳಕಿ ಪಿಎಸ್ಐ ಪರಶುರಾಮ ಮನಗೂಳಿ, ಹೊರ್ತಿ ಪಿಎಸ್ಐ ಚಂದ್ರಕಾಂತ ತೇಲಿ ಉಪಸ್ಥಿತರು.