ರಾಯಚೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ಆರೋಪಗಳನ್ನು ವೆಸಗಿರುವ ಶ್ರೀಧರ್ ಕುಲಕರ್ಣಿ ಇವರನ್ನು ರಾಜಕೀಯ ಒತ್ತಡದಿಂದ ಜಿಲ್ಲೆಯ ಲೆಕ್ಕ ಶಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ರದ್ದು ಪಡಿಸಿ, ಇವರನ್ನು ಕೂಡಲೇ ಅಮಾನತುಗೊಳಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಜನ ಸೈನ್ಯ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಧರ ಕುಲಕರ್ಣಿ ಇವರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ, ಭ್ರಷ್ಟಾಚಾರವನ್ನು ವೆಸಗಿರುವುದು ಸಾಕ್ಷಿ ಸಮೇತ ಜಿಲ್ಲಾ ಪಂಚಾಯತ ತನಿಖಾ ತಂಡ ಮುಖ್ಯಸ್ತರು ಹಾಗೂ ಲೆಕ್ಕಾಧಿಕಾರಿಗಳ ವರದಿಯಲ್ಲಿ ಕಂಡು ಬಂದಿದೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ೧೮ ಜುಲೈ ೨೦೨೦ ರಲ್ಲಿ ಶ್ರೀಧರ ಕುಲಕರ್ಣಿ ವಿರುದ್ಧ ನೌಕರರ ವೇತನ ಹಾಗೂ ಬಟ್ಟೆಗಳನ್ನು ದುರುಪಯೋಗ ಪಡೆಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿತ್ತು.
ಆದರೂ, ಸದರಿ ಇವರ ಮೇಲೆ ಇಲ್ಲಿವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ, ಮೇಲಾಧಿಕಾರಿಗಳ ಆದೇಶವನ್ನು ಕಡೆಗಣಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಇವರ ಮೇಲೆ ಸೂಕ್ತ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭಧಲ್ಲಿ ಅಧ್ಯಕ್ಷ ವೆಂಕಟೇಶ ಅರಗೋಲ, ನಶಾಂತ್ ಕುಮಾರ, ಪ್ರಸಾದ ಭಂಡಾರಿ, ವೆಂಕಟಸ್ವಾಮಿ, ರಮೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.