ಬಾಗಲಕೋಟ ಘಟನೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಇಂಡಿ : ಬಾಗಲಕೋಟದಲ್ಲಿ ಗುರುವಾರ ಶಿವಾಜಿ ಜಯಂತಿಯ ದಿನ ಮೆರವಣೆಗೆ ಮೇಲೆ ಕಲ್ಲು ತೂರಾಟ ಮಾಡಿದ ಜನರನ್ನು ಬಂದಿಸಬೇಕೆAದು ಆಗ್ರಹಿಸಿ ಇಂಡಿಯಲ್ಲಿ ಹಿಂದು ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ ಮಾತನಾಡಿ ಕಲ್ಲು ತೂರಾಟಕ್ಕೆ ಕುಮ್ಮಕ್ಕು ನೀಡಿದವರ ಬಂಧನವಾಗಬೇಕು. ಇದು ಆಕಸ್ಮಿಕವಲ್ಲ. ಪೂರ್ವನಿಯೋಜಿತ ಕೃತ್ಯ, ಸಹಸ್ರಾರು ಜನ ಮೆರವಣೆಗೆಯಲ್ಲಿ ಸೇರಿದಾಗ ಪೋಲಿಸರು ರಕ್ಷಣೆ ನೀಡಿಲ್ಲ. ಕಾನೂನು ಸವ್ಯವಸ್ಥೆಗೆ ಧಕ್ಕೆ ತಂದವರ ವಿರುದ್ಧ ಕ್ರಮವಾಗಲಿ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರಾಜು ಪತಂಗೆ, ಪ್ರಕಾಶ ಬಿರಾದಾರ, ಸಂತೋಷ ಗವಳಿ, ಆನಂದ ಪವಾರ, ಶ್ರೀಧರ ಕ್ಷತ್ರಿ, ವಿಜು ರಾಠೋಡ, ರವಿ ಗವಳಿ, ಮಲ್ಲಿಕಾರ್ಜುನ ಹಾವಿನಾಳಮಠ, ನೇತಾಜಿ ಪವಾರ, ಹುಚ್ಚಪ್ಪ ತಳವಾರ, ಅಪ್ಪು ಮಾನೆ, ಅಪ್ಪು ಪವಾರ, ವಿನೋದ ಸೂರ್ಯವಂಶಿ ಆದಿತ್ಯ ಶಿಂಧೆ ಮತ್ತಿತರಿದ್ದರು,
ತಹಸೀಲ್ದಾರ ಬಿ.ಎಸ್.ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.
ಬಾಗಲಕೋಟದಲ್ಲಿ ಗುರುವಾರ ಶಿವಾಜಿ ಜಯಂತಿಯ ದಿನ ಮೆರವಣೆಗೆ ಮೇಲೆ ಕಲ್ಲು ತೂರಾಟ ಮಾಡಿದ ಜನರನ್ನು ಬಂದಿಸಬೇಕೆAದು ಆಗ್ರಹಿಸಿ ಇಂಡಿಯಲ್ಲಿ ಹಿಂದು ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.



















