ಮುದ್ದೇಬಿಹಾಳ :ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಪಟ್ಟಣದ ಗ್ರಾಮದೇವತೆ ( ಶ್ರೀ ದ್ಯಾಮವ್ವನ ) ಜಾತ್ರಮಹೋತ್ಸವ ಮೇ 30 ರಿಂದ ಐದು ದಿನಗಳು ಅದ್ದೂರಿಯಾಗಿ ಆಚರಿಸಲು ಗ್ರಾಮದೇವತೆ ಜಾತ್ರ ಮಹೋತ್ಸವ ಕಮಟಿ ನಿರ್ದರಿದ್ದು ಯುಗಾದಿ ಹಬ್ಬದದಂದು ಪಟ್ಟಣದ ಕುಂಬಾರ ಓಣಿಯ ದ್ಯಾಮವ್ವನ ಮಂದಿರದಲ್ಲಿ ವಿಶೇಷ ಬಿಂದಿಗೆ ಪೂಜೆ ಮಾಡುವ ಮೂಲಕ ಜಾತ್ರಾ ಮಹೋತ್ಸವ ತಯಾರಿಗೆ ಅಧಿಕೃತ ಚಾಲನೆಯನ್ನು ನೀಡಲಾಯಿತು.
ಗ್ರಾಮದೇವತೆ ಜಾತ್ರಾ ಮಹೋತ್ಸವ ಕಮಿಟಿ ಕರೆದ ಸಭೆಯಲ್ಲಿ ಪಟ್ಟಣದ ಹಿರಿಯರು ದೇವಿಯ ಸದ್ಭಕ್ತರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು .
ದೇವಿ ಜಾತ್ರೆ ಅಂಗವಾಗಿ ವಾರ ಹಿಡಿಯುವುದು; ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಅಂಗವಾಗಿ ಐದು ವಾರಗಳನ್ನು ಹಿಡಿಯಲಾಗುತ್ತದೆ ಅಂತಯೇ ಈ ಜಾತ್ರಾ ಅಂಗವಾಗಿ ಮೇ 2ರಿಂದ ಶುಕ್ರವಾರ ಮಂಗಳವಾರ ವಾರ ಹಿಡಿಲಾಗುತ್ತದೆ. ಮೇ ೨. ಮೇ ೬ ಮೇ ೯ ಮೇ ೧೩ ಮೇ ೧೬ ಐದು ವಾರ ಹಿಡಿಯಲಾಗುತ್ತದೆ ಮೇ 17 ರಂದು ದೇವಿ ಬಣ್ಣಕ್ಕೆ ಹೋಗುತ್ತಾಳೆ ಮೇ 30 ರಿಂದ ದೇವಿಯ ಜಾತ್ರಾ ವೈಭವ ಐದು ದಿನಗಳು ನಡೆಯುತ್ತದೆ.
ಈ ವೇಳೆ ಅಶೋಕ ನಾಡಗೌಡ,ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪ್ರಭುದೇವ ಕಲಬುರಗಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಮಾತನಾಡಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ವೈಭವ ಮತ್ತೆ ಮರುಕಳಿಸಲಿದ್ದು ದೇವಿಯ ಎಲ್ಲಾ ಸದ್ಭಕ್ತರು ಒಂದಾಗಿ ಭಾವೈಕ್ಯಯಿಂದ ಆಚರಿಸೋಣ ಮೇ 30 ರಿಂದ ನಡೆಯುವ ಜಾತ್ರಾ ತಯಾರಿಗೆ ಎಲ್ಲರ ಸಹಾಯ ಸಹಕಾರ ಅಗತ್ಯತೆವಿದೆ ಎಲ್ಲಾ ಒಂದಾಗಿ ಜಾತ್ರೆ ಆಚರಿಸೋಣವೆಂದು ಕರೆ ನೀಡಿದರು
ಸಭೆಯಲ್ಲಿ ಕಳೆದ ಜಾತ್ರೆಯಲ್ಲಿ ಉಳಿದ ದೇಣಿಗೆ ಸಂಗ್ರಹ 19 ಲಕ್ಷ ರೂ ಲೆಕ್ಕಪತ್ರ ಪ್ರಭುದೇವ ಕಲಬುರಗಿ ಓದಿ ತಿಳಿಸಿದರು
ಗ್ರಾಮದೇವತೆ ಮುಂದೆ ಬಿಂದಿಗೆ ಪೂಜೆ ಮಾಡಿ ಅನಾದಿಕಾಲದಿಂದಲೂ ಬಂದ ಸಾಂಪ್ರದಾಯದಂತೆ ಗುರಲಿಂಗಯ್ಯಾ ಹಿರೇಮಠ,ಶಿವಾನಂದ ಹಿರೇಮಠ, ರಾಚಯ್ಯ ಹಿರೇಮಠ, ಶ್ರೀಶೈಲ ಅಮರಣ್ಣವರ, ಸಂತೋಷ ನಾಯ್ಕೋಡಿ,
ಬಸನಗೌಡ ರಾಯನಗೌಡ ಪಾಟೀಲ್,ಹಾಗೂ ಬಸರಕೋಡ ನಾಡಗೌಡರ ಅವರ ಮನೆಯಲ್ಲಿ ಸಹ ಬಿಂದಿಗೆಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆ ಗೆ ದೇಣಿಗೆ ಸಂಗ್ರಹ ಈ ಮನೆತನಗಳಿಂದ ಮಾಡಲಾಯಿತು
ಈ ವೇಳೆ ಶರಣು ಸಜ್ಜನ (ಸಿಪಿ) ಸಂಗನಗೌಡ ಬಿರಾದಾರ( ಜಿಟಿಸಿ) ಪ್ರತಿಭಾ ಅಂಗಡಗೇರಿ, ಚನ್ನಪ್ಪ ಕಂಠಿ,ರಾಜುಗೌಡ ರಾಯಗೂಂಡ, ಪರಶುರಾಮ ನಾಲತವಾಡ,ವೀರುಪಾಕ್ಷಿ ಪತ್ತಾರ,ಚಿನ್ನು ನಾಡಗೌಡ, ಸಂಜಯ ಸಜ್ಹನ, ಭಾರತಿ ಪಾಟೀಲ್, ಮಾಂತು ಬೂದಿಹಾಳಮಠ ಸುರೇಶ ಕಲಾಲ, ಮಹಾಂತೇಶ ಹಡಪದ ಸಂಗಣ್ಣ ಮೇಲಿನಮನಿ, ಹರೀಶ ಬೇವೂರ, ಶ್ರೀಕಾಂತ್ ಹಿರೇಮಠ, ಮಹಾಂತೇಶ ಕಡೆಬಾಗಿಲು, ಟಿ ವಿಜಯಭಾಸ್ಕರ್, ಗೋಪಿ ಮಡಿವಾಳರ, ಜಗದೀಶ್ ಲಕ್ಷಟ್ಟಿ,ಮಾಣಿಕಚಂದ ದಂಡಾವತಿ,ಉಮೇಶ ರಾಯಗೂಂಡ, ಮಹಾಂತೇಶ ಮೋಟಗಿ,ರುದ್ರಪ್ಪ ಕಡಿ, ಸದು ಮಠ,ಅಶೋಕ ಚಟ್ಟೇರ,ಅನಿಲ್ ತೇಲಂಗಿ ಚಂದ್ರಶೇಖರ ಕಲಾಲ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.