ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ದೇಶದ ೧೨೦ ಕೋಟಿ ಹಿಂದುಗಳು ಒಂದಾಗಿ ಕೈಯಲ್ಲಿ ಬಡಿಗೆ ಹಿಡಿದು ಹೊರಟರೆ ಉಗ್ರರ, ಉಗ್ರವಾದ ಪೋಷಿಸುವವರ ಪರಿಸ್ಥಿತಿ ಏನಾಗಬಹುದು ಎನ್ನುವುದನ್ನು ಊಹಿಸುವುದೂ ಅಸಾಧ್ಯ. ದೇಶದ ಹಿಂದುಗಳೆಲ್ಲ ಒಂದಾಗಿ ಭಯೋತ್ಪಾದನೆ ಬುಡಸಮೇತ ನಿರ್ಮೂಲನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿಜಿ, ಕೇಂದ್ರ ಗೃಹಮಂತ್ರಿ ಅಮಿತ್ಶಾಜಿ ಅವರಿಗೆ ಶಕ್ತಿ ತುಂಬುವ ಕಾಲ ಬಂದಿದೆ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಬಜಾರ ಮಾರುತೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಪೆಹಲ್ಗಾಮ್ ಘಟನೆ ಖಂಡಿಸಿ ಕ್ಯಾಂಡಲ್ ಮಾರ್ಚಗೂ ಮುನ್ನ ನಡೆದ ಸಭೆಯಲ್ಲಿ ಜಮ್ಮು ಕಾಶ್ಮೀರದ ಪುಲಗಾಮ್ನಲ್ಲಿ ನಡೆದ ಭಯೋತ್ಪಾದಕ ಕೃತ್ಯ, ಹಿಂದುಗಳ ಹತ್ಯೆ ಖಂಡಿಸಿ ಮಾತನಾಡಿದ ಅವರು, ಭಯೋತ್ಪಾದನೆ ಇವತ್ತು ಬೇರೆ ಊರಲ್ಲಿ ನಡೆದಿದೆ, ನಾಳೆ ನಮ್ಮೂರಿಗೆ, ಮುಂದಿನ ದಿನ ನಮ್ಮ ಮನೆಗೂ ಭಯೋತ್ಪಾದಕ ಉಗ್ರರು ಬರಬಹುದು. ಈಗಲೇ ಹಿಂದುಗಳು ಜಾಗ್ರತರಾಗಬೇಕು. ನಮ್ಮ ಸಹನೆಯನ್ನು ದೌರ್ಬಲ್ಯವಾಗಿಸಬಾರದು. ಮೋದಿ ಅವರಂತಹ ಸಮರ್ಥ ಆಡಳಿತಗಾರರ ಕೈ ಬಲಪಡಿಸಬೇಕು ಎಂದರು.
ಶ್ರೀ ಗುರು ರಾಘವೇಂದ್ರ ರಾಯರ ಬೃಂದಾವನ ಸನ್ನಿಧಿಯ ಆವರಣದಲ್ಲಿ ನಡೆದ ಕ್ಯಾಂಡಲ್ ಮಾರ್ಚ ಸಮಾರೋಪ, ಶ್ರದ್ಧಾಂಜಲಿ ಸಭೆಯಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಇಬ್ಬರು ಕನ್ನಡಿಗರೂ ಸೇರಿದಂತೆ ಎಲ್ಲರ ಎಲ್ಲರ ಆತ್ಮಕ್ಕೂ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸುವ ಸಭೆಯಲ್ಲಿ ಆರ್ಎಸ್ಎಸ್ನ ಪ್ರಾಂತ ಕಾರ್ಯವಾಹ ದಾಮೋದರ್ಜಿ ಅವರು ಮಾತನಾಡಿ, ಗಡಿಗಿಂತ ಒಳಗಿನ ಸುರಕ್ಷತೆ ಭಯಾನಕವಾಗಿದೆ. ಹಿಂದು, ಮುಸಲ್ಮಾನ ಎಂದು ಪ್ರತ್ಯೇಕಿಸಿ ಹಿಂದುಗಳ ಮೇಲೆ ಗುಂಡು ಹಾರಿಸಿರುವುದರ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಇದನ್ನು ಹಿಂದುಗಳು ಅರಿತುಕೊಳ್ಳಬೇಕು. ಹಿಂದುಗಳೆಲ್ಲ ಒಟ್ಟಾದರೆ ಏನಾಗುತ್ತದೆ ಎನ್ನುವ ಶಕ್ತಿ ತೋರಿಸಬೇಕು. ಹಿಂದಿನ ಸರ್ಕಾರದಲ್ಲಿ ಸೈನಿಕ ಶಕ್ತಿ ದುರ್ಬಲವಾಗಿತ್ತು. ಮೋದಿ ಅವರು ಪ್ರಧಾನಿಯಾದ ನಂತರ ಸೈನಿಕರ ಶಕ್ತಿ ಬಲ ಹೆಚ್ಚಾಗಿದೆ ಎಂದರು.
ಕ್ಯಾಂಡಲ್ ಮಾರ್ಚ-ಶ್ರದ್ಧಾಂಜಲಿ
ಬಿಜೆಪಿ ಮಂಡಲದಿಂದ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರ ನೇತೃತ್ವದಲ್ಲಿ ಹಿಂದು ಪರ, ಮಾಜಿ ಸೈನಿಕರ, ದಲಿತಪರ ಸಂಘಟನೆಗಳ ಸದಸ್ಯರು, ದೇಶಾಭಿಮಾನಿಗಳು ಜಮ್ಮು ಕಾಶ್ಮೀರದ ಪೆಹಲ್ಗಾಮ್ನಲ್ಲಿ ಹಿಂದುಗಳನ್ನೇ ಗುರಿಯಾಗಿಸಿಕೊಂಡು ನಡೆದ ಉಗ್ರರ ದಾಳಿ ಖಂಡಿಸಿ ಮತ್ತು ಘಟನೆಯಲ್ಲಿ ಮೃತರಾದ ಹಿಂದುಗಳಿಗೆ ಶ್ರದ್ಧಾಂಜಲಿ ಕೋರಿ ರಾಷ್ಟçಧ್ವಜ, ಭಗವಾಧ್ವಜ, ಮೊಂಬತ್ತಿ ಹಿಡಿದು ಮೆರವಣಿಗೆ ನಡೆಸಿದರು. ದೇವಸ್ಥಾನದಲ್ಲಿ ಮಾರುತೇಶ್ವರನಿಗೆ ಹಚ್ಚಿದ್ದ ದೀಪದಿಂದ ಮೊಂಬತ್ತಿ ಬೆಳಗಿಸಿಕೊಂಡು ಮುಖ್ಯ ಬಜಾರ್, ಮಹಾತ್ಮಾಗಾಂಧಿ, ಬಸವೇಶ್ವರ, ರಾಣಿ ಚನ್ನಮ್ಮ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ರಾಯರ ಬೃಂದಾವನ ಸನ್ನಿಧಿಯವರೆಗೂ ಅಂದಾಜು ಎರಡು ಕಿಮಿ ಕಾಲ್ನಡಿಗೆ ಮೂಲಕ ಕ್ಯಾಂಡಲ್ ಮಾರ್ಚ ನಡೆಸಿದರು.
ಒಂದಾಗಿ ಒಂದಾಗಿ ಹಿಂದುಗಳೆಲ್ಲ ಒಂದಾಗಿ, ಪ್ರಧಾನಿ ಮೋದಿಜಿ ಮುನ್ನುಗ್ಗಿ ಉಗ್ರರ ಸದೆಬಡಿಯಿರಿ, ಉಗ್ರರಿಗೆ ಧಿಕ್ಕಾರ, ಉಗ್ರತ್ವ ಬುಡಸಮೇತ ಕಿತ್ತಿಹಾಕಬೇಕು ಇತ್ಯಾದಿ ಘೋಷಣೆ ಕೂಗಿದರು.
ಪ್ರಮುಖರಾದ ಬಿ.ಪಿ.ಕುಲಕರ್ಣಿ, ಮುನ್ನಾಧಣಿ ನಾಡಗೌಡ, ಚನ್ನಪ್ಪ ಕಂಠಿ, ಸಿದ್ದರಾಜ ಹೊಳಿ, ಸೋಮನಗೌಡ ಮೇಟಿ, ಸಂಜು ಬಾಗೇವಾಡಿ, ನಾನಪ್ಪ ನಾಯಕ, ಶ್ರೀಶೈಲ ದೊಡಮನಿ, ವಾಸು ಶಾಸ್ತಿç, ಮಾಣಿಕಚಂದ ದಂಡಾವತಿ, ಎಲ್.ಎಸ್.ದೇಶಪಾಂಡೆ, ವಿಲಾಸ ದೇಶಪಾಂಡೆ, ಗೌರಮ್ಮ ಹುನಗುಂದ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಅನೀಲ ರಾಠೋಡ, ಶಿವಾನಂದ ರಾಠೋಡ, ಅಶೋಕ ರಾಠೋಡ, ವಿಕ್ರಮ್ ಓಸ್ವಾಲ, ಹರೀಶ ನಾಟೀಕಾರ, ಗಿರೀಶಗೌಡ ಪಾಟೀಲ ಹಿರೇಮುರಾಳ, ಜಗದೀಶ ಪಂಪಣ್ಣವರ್, ಲಕ್ಷö್ಮಣ ಬಿಜ್ಜೂರ, ಸಂಗಮೇಶ ಕರಭಂಟನಾಳ, ರಾಜು ಬಳ್ಳೊಳ್ಳಿ, ಮಲಕೇಂದ್ರಗೌಡ ಪಾಟೀಲ, ಆನಂದ ತುಪ್ಪದ, ರೇಖಾ ಕೊಂಡಗೂಳಿ, ಕಾವೇರಿ ಕಂಬಾರ, ಪ್ರೀತಿ ಕಂಬಾರ, ಸಂತೋಷ ಬಾದರಬಂಡಿ, ಬಸನಗೌಡ ಪಾಟೀಲ ಸರೂರ, ಹಿಂದುಪರ ಸಂಘಟನೆಗಳ ಸದಸ್ಯರು ಸೇರಿ ಅನೇಕರು ಪಾಲ್ಗೊಂಡಿದ್ದರು.
ದೇಶವಾಸಿಗಳಿಗೆ ಮಾನಸಿಕ ನೆಮ್ಮದಿ ಸಿಗಲು ನಾಯಕತ್ವ, ದೇಶದ ನೇತೃತ್ವ ಬಲಿಷ್ಠವಾಗಿರಬೇಕು. ಅದನ್ನು ನಾವು ಪ್ರಧಾನಿ ನರೇಂದ್ರ ಮೋದಿಜಿ ಅವರಲ್ಲಿ ನೋಡುತ್ತೇವೆ. ಪೆಹಲ್ಗಾಮ್ ಘಟನೆಯನ್ನು ಎಲ್ಲರೂ ಉಗ್ರವಾಗಿ ಖಂಡಿಸೋಣ. ಉಗ್ರರಿಗೆ ತಕ್ಕ ಶಾಸ್ತಿ ಮಾಡಲು ಭಾರತದ ಸೈನ್ಯ ಸಮರ್ಥವಾಗಿದೆ.
–ದಾಮೋದರಜಿ, ಆರ್ಎಸ್ಎಸ್ ಪ್ರಾಂತ ಕಾರ್ಯವಾಹ.