ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದ ಶಾಸಕ ಎಂ.ಆರ್ ಮಂಜುನಾಥ್
ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪರೀಕ್ಷೆಯ ಬರೆಯಲು ಇದೇ ತಿಂಗಳು ಪ್ರಾರಂಭ ಮಾಡಿ ಮಾ.21 ರಿಂದ ಏ.04ರವರೆಗೆ ಪರೀಕ್ಷೆ ನಡೆಯಲಿರುವುದರಿಂದ ಎಲ್ಲಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವಂತೆ ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದ್ದು ಪರೀಕ್ಷೆಗೆ ಶುಭ ಹಾರೈಸಿದ್ದಾರೆ.
ಎಲ್ಲಾ ವಿದ್ಯಾರ್ಥಿಗಲಿಗೂ ತಮ್ಮ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಇಲ್ಲಿ ಕೈಗೊಂಡ ನಿರ್ಧಾರ ಹಾಗೂ ಗುರಿ ನಿಮ್ಮ ಭವಿಷ್ಯದಲ್ಲಿ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಇದರಿಂದ ಉತ್ತಮ ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು.
ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯ ಪಡದೇ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವುದರ ಜೊತೆಗೆ ಆತ್ಮಸ್ಥೆರ್ಯದೊಂದಿಗೆ ಪರೀಕ್ಷೆಯನ್ನು ಎದುರಿಸಬೇಕು. ಪರೀಕ್ಷೆಗೆ ತೆರಳಲು ಸಾರಿಗೆ ಇಲಾಖೆಯಿಂದ ಉಚಿತವಾಗಿ ತೆರಳಲು ಅವಕಾಶವನ್ನು ಸರ್ಕಾರ ಮಾಡಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕು.
ಮನೆಯಲಿ ಪೋಷಕರು ಮಕ್ಕಳಿಗೆ ಪರೀಕ್ಷೆಗೆ ಸಂಬಂಧ ಅಗತ್ಯ ಮಾರ್ಗದರ್ಶನ ನೀಡಬೇಕು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಕೊರತೆಯಾಗದಂತೆ ಅಗತ್ಯ ಮೂಲ ಸೌಕರ್ಯವನ್ನು ಅಧಿಕಾರಿಗಳು ಒದಗಿಸಿಕೊಡುವುದರ ಮೂಲಕ ಸುಸೂತ್ರವಾಗಿ ಪರೀಕ್ಷೆ ನಡೆಯಬೇಕು ಎಂದು ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದ್ದಾರೆ .
ಹನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯ ವ್ಯಾಪ್ತಿಯಲ್ಲಿ ಒಟ್ಟು 9 ಪರೀಕ್ಷೆ ಕೇಂದ್ರಗಳು ಇದ್ದು, ಒಟ್ಟು 2,3 74 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ ಅದರಲ್ಲಿ ಹೆಣ್ಣು ಮಕ್ಕಳು 1147 ಗಂಡು ಮಕ್ಕಳು 1227 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ.
9 ಪರೀಕ್ಷೆ ಕೇಂದ್ರಗಳು ಈ ಕೆಳಕಂಡಂತೆ ಇವೆ
1)ಮಲೆ ಮಹದೇಶ್ವರ ಬೆಟ್ಟ
2)ಕೌದಳ್ಳಿ ಸೆಂಟ್ ಮೇರಿಸ್
3)ಮಾರ್ಟಳ್ಳಿ ಸೆಂಟ್ ಮೇರಿಸ್
4)ರಾಮಾಪುರ ಜೆಎಸ್ಎಸ್ ಪ್ರೌಢ ಶಾಲೆ
5)ಹೂಗ್ಯಂ ಮೊರಾರ್ಜಿ ಶಾಲೆ
6)ಜಿವಿ ಗೌಡ ಪ್ರೌಢ ಶಾಲೆ
ಹನೂರು
7) ಹನೂರು ಕ್ರಿಸ್ತ ರಾಜ ಪ್ರೌಢ ಶಾಲೆ
8)ಮಣಗಳ್ಳಿ ಸರ್ಕಾರಿ ಪ್ರೌಡ ಶಾಲೆ
9)ಲೋಕ್ಕನಹಳ್ಳಿ ಕೆಪಿಎಸ್ ಶಾಲೆ ಗಳಾಗಿವೆ ಎಂದು ತಿಳಿಸಲಾಗಿದೆ.