ವಿದ್ಯುತ್ ಸಂಬಂಧಿತ ಅವಘಡಗಳಲ್ಲಿ
ವಿಜಯಪುರ, ಜು. 01: ಮಳೆಗಾಲದಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳನ್ನು ತಪ್ಪಿಸಲು ಡಂಗುರ ಸಾರುವ ಮೂಲಕ ಜನಜಾಗೃತಿ ಮೂಡಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ಸೋಮವಾರ ತಿಕೋಟಾ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ರೂ. 1.50 ಕೋ. ವೆಚ್ಚದ ತಿಕೋಟಾ ತಾಜಪೂರ.ಎಚ್, ರೂ. 1.20 ಕೋ. ವೆಚ್ಚದ ತಿಕೋಟಾ- ಐ.ಟಿ.ಐ ಕಾಲೇಜು ವರೆಗಿನ ರಸ್ತೆ, ರೂ. 1.20 ಕೋ. ವೆಚ್ಚದ ತಿಕೋಟಾ ನಂದಿಕೋಲ ವರಗಿನ ರಸ್ತೆ ಸುಧಾರಣೆ ಭೂಮಿ ಪೂಜೆ ನೆರೆವೇರಿಸಿದರು. ಅಲ್ಲದೇ, ರೂ. 25 ಲಕ್ಷ ವೆಚ್ಚದ ತಿಕೋಟಾ ರೈತ ಸಂಪರ್ಕ ಕೇಂದ್ರ ಗೋಡಾವನ್ ಕಟ್ಟಡ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಳೆಗಾಲದಲ್ಲಿ ಜಿಲ್ಲೆಯ ನಾನಾ ಕಡೆಗಳಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳಲ್ಲಿ ಈಗಾಗಲೇ ಮಕ್ಕಳು ಸೇರಿದಂತೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಮುಂಗಾರು ಆರಂಭವಾದ ನಂತರ ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ಮಳೆ-ಗಾಳಿಗೆ ತುಂಡಾಗಿ ಬಿದ್ದಿರುತ್ತವೆ. ಅಲ್ಲದೇ, ಹಲವು ಕಡೆ ಭೂಮಿಯಲ್ಲಿ ಹೆಚ್ಚಿನ ತೇವಾಂಶ ಇರುವ ಕಾರಣ ಕಂಬಗಳ ಸುತ್ತಮುತ್ತ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಕೃಷಿ ಮತ್ತೀತರ ಚಟುವಟಿಕೆಗಳಿಗಾಗಿ ರೈತರು ಮತ್ತು ಸಾರ್ವಜನಿಕರು ಪಂಪ್ಸೆಟ್ ಚಾಲೂ ಮಾಡುವಾಗ, ಕೆರೆ, ಬಾವಿಗಳ ಬಳಿ ತೆರಳುವಾಗ ಅಕ್ಕಪಕ್ಕದಲ್ಲಿ ವಿದ್ಯುತ್ ಕಂಬಗಳು ಇದ್ದರೆ ಎಚ್ಚರಿಕೆ ವಹಿಸಬೇಕು. ನಾನೂ ಕೂಡ ಹೆಸ್ಕಾಂ ಹಾಗೂ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳಿಗೆ ವಿದ್ಯುತ್ ಸಂಬಂಧಿತ ಅವಘಡಗಳನ್ನು ತಪ್ಪಿಸಲು ಈಗಾಗಲೇ ಸೂಚನೆ ನೀಡಿದ್ದೇನೆ. ಅಲ್ಲದೇ, ಸ್ತಳೀಯ ಸಂಸ್ಥೆಗಳಲ್ಲಿ ಈ ಕುರಿತು ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಲಾಗುವುದು. ಆದ್ದರಿಂದ ರೈತರು ಮತ್ತು ಸಾರ್ವಜನಿಕರು ಕೂಡ ವಿದ್ಯುತ್ ತಂತಿ ಹರಿದು ಬಿದ್ದಿದ್ದರೆ ಮತ್ತು ಭೂಮಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದರೆ ಕೂಡಲೇ ಹೆಸ್ಕಾಂ ಗಮನಕ್ಕೆ ತರಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರೇಮಠದ ಶಿವಬಸವ ಶಿವಾಚಾರ್ಯ ಸ್ವಾಮೀಜಿ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮುಖಂಡರಾದ ಪ್ರಭಾವತಿ ನಾಟಿಕಾರ, ಜಕ್ಕಪ್ಪ ಯಡವೆ, ಯಾಕೂಬ ಜತ್ತಿ, ವಿಜುಗೌಡ ಪಾಟೀಲ, ಡಾ. ಜಿ. ಎಸ್. ಮೈಶಾಳ, ತಹಸೀಲ್ದಾರ ಪ್ರಶಾಂತ ಚನಗೊಂಡ, ಗ್ರಾಮದ ಹಿರಿಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ತಿಕೋಟಾ ತಾಲೂಕಿನ ಮುಮ್ಮೆಟ್ಟಿಗುಡ್ಡದ ಬಳಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು, ರೂ. 1.45 ಕೋ. ವೆಚ್ಚದ ಸಿದ್ದಾಪೂರ ಅ- ಅಮೋಘಸಿದ್ದ ರಸ್ತೆ ಸುಧಾರಣೆ, ಅಮೋಘಸಿದ್ದ ಗುಡ್ಡದಿಂದ ಜಾಲಗೇರಿ ಮುಖ್ಯ ರಸ್ತೆಯ ವರೆಗೆ ರೂ. 1.50 ಕೋ. ವೆಚ್ಚದ ರಸ್ತೆ ಸುಧಾರಣೆ, ಇಟ್ಟಂಗಿಹಾಳ- ಖಿಲಾರಹಟ್ಟಿ ರಸ್ತೆಯಿಂದ ಇಟ್ಟಂಗಿಹಾಳ ಎಲ್.ಟಿ- 02 ಅಮೋಘಸಿದ್ದ ಗುಡ್ಡದ ವರೆಗೆ ರೂ. 2 ಕೋ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ, ಮುಖಂಡರಾದ ಚನ್ನಪ್ಪ ದಳವಾಯಿ, ಪೀರ ಪಟೇಲ, ಭೂತಾಳಿಸಿದ್ದ ಒಡೆಯರ, ಅರಕೇರಿ ಗ್ರಾ.ಪಂ ಅಧ್ಯಕ್ಷ ಅಣ್ಣಪ್ಪ ಮಾನವರ, ಜಾಲಗೇರಿ ಗ್ರಾ.ಪಂ ಅಧ್ಯಕ್ಷ ಓಗೆಪ್ಪ ಗೋಪಣೆ, ಮುಖಂಡರಾದ ಗೀತಾಂಜಲಿ ಪಾಟೀಲ ಉಪಸ್ಥಿತರಿದ್ದರು.
ತಿಕೋಟಾ ನಂತರ ನಿಡೋಣಿ ಬಳಿ ನಡೆದ ಕಾರ್ಯಕ್ರಮದಲ್ಲಿ ತಾಜಪುರ-ಎಚ್. ದಿಂದ ನಿಡೋಣಿ ವರೆಗಿನ ರೂ. 2 ಕೋ. ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ ಸುನೀಲಗೌಡ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಅಲ್ಲದೇ, ಗ್ರಾಮ ಒನ್ ಕೇಂದ್ರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿರಕ್ತ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕೆಎಂಎಫ್ ನಿರ್ದೇಶಕ ಶ್ರೀಶೈಲಗೌಡ ಪಾಟೀಲ ನಿಡೋಣಿ, ಮುಖಂಡರಾದ ಶಂಕರಗೌಡ ಆರ್. ಪಾಟೀಲ, ಜಾಫರ್ ಇನಾಮದಾರ, ಸೋಮಶೇಖರ ಕೋಟ್ಯಾಳ, ಕುಮಾರೇಶ ಬಡಗಿ, ಭೀಮಗೊಂಡ ಗವಾರಿ, ಸಾಬು ತೇರದಾಳ ಮುಂತಾದವರು ಉಪಸ್ಥಿತರಿದ್ದರು.
1. ಶಾಸಕ ಸುನೀಲಗೌಡ ಪಾಟೀಲರಿಂದ ತಿಕೋಟಾದಲ್ಲಿ ಭೂಮಿ ಪೂಜೆ: ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಕೋಟಾ- ತಾಜಪೂರ.ಎಚ್, ತಿಕೋಟಾ ನಂದಿಕೋಲ ಮತ್ತು ತಿಕೋಟಾ- ಐ.ಟಿ.ಐ ಕಾಲೇಜು ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಭೂಮಿಪೂಜೆ ನೆರವೇಹಿಸಿದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಹಿರೇಮಠದ ಶಿವಬಸವ ಶಿವಾಚಾರ್ಯ ಸ್ವಾಮೀಜಿ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮುಖಂಡರಾದ ಪ್ರಭಾವತಿ ನಾಟಿಕಾರ, ಜಕ್ಕಪ್ಪ ಯಡವೆ, ಯಾಕೂಬ ಜತ್ತಿ, ವಿಜುಗೌಡ ಪಾಟೀಲ, ತಹಸೀಲ್ದಾರ ಪ್ರಶಾಂತ ಚನಗೊಂಡ, ಗ್ರಾಮದ ಹಿರಿಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
2. ಶಾಸಕ ಸುನೀಸಗೌಡ ಪಾಟೀಲರಿಂದ ತಿಕೋಟಾದಲ್ಲಿ ಭೂಮಿ ಪೂಜೆ: ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಕೋಟಾ- ತಾಜಪೂರ.ಎಚ್, ತಿಕೋಟಾ ನಂದಿಕೋಲ ಮತ್ತು ತಿಕೋಟಾ- ಐ.ಟಿ.ಐ ಕಾಲೇಜು ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಭೂಮಿಪೂಜೆ ನೆರವೇಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಹಿರೇಮಠದ ಶಿವಬಸವ ಶಿವಾಚಾರ್ಯ ಸ್ವಾಮೀಜಿ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮುಖಂಡರಾದ ಪ್ರಭಾವತಿ ನಾಟಿಕಾರ, ಜಕ್ಕಪ್ಪ ಯಡವೆ, ಯಾಕೂಬ ಜತ್ತಿ, ವಿಜುಗೌಡ ಪಾಟೀಲ, ತಹಸೀಲ್ದಾರ ಪ್ರಶಾಂತ ಚನಗೊಂಡ, ಗ್ರಾಮದ ಹಿರಿಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
3. ಶಾಸಕ ಸುನೀಲಗೌಡ ಪಾಟೀಲ ಮುಮ್ಮೆಟ್ಟಿಗುಡ್ಡ ಕಾರ್ಯಕ್ರಮ : ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಮುಮ್ಮೆಟ್ಟಿಗುಡ್ಡದ ಬಳಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅವರು ಸಿದ್ದಾಪೂರ ಅ- ಅಮೋಘಸಿದ್ದ, ಅಮೋಘಸಿದ್ದ ಗುಡ್ಡದಿಂದ ಜಾಲಗೇರಿ ಮುಖ್ಯ ರಸ್ತೆ ಮತ್ತು ಇಟ್ಟಂಗಿಹಾಳ- ಖಿಲಾರಹಟ್ಟಿ ರಸ್ತೆಯಿಂದ ಇಟ್ಟಂಗಿಹಾಳ ಎಲ್.ಟಿ- 02 ಅಮೋಘಸಿದ್ದ ಗುಡ್ಡದವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅರ್ಜುನ ಹೀರು ರಾಠೋಡ, ಚನ್ನಪ್ಪ ದಳವಾಯಿ, ಪೀರ ಪಟೇಲ, ಭೂತಾಳಿಸಿದ್ದ ಒಡೆಯರ, ಅಣ್ಣಪ್ಪ ಮಾನವರ, ಓಗೆಪ್ಪ ಗೋಪಣೆ, ಗೀತಾಂಜಲಿ ಪಾಟೀಲ ಉಪಸ್ಥಿತರಿದ್ದರು.