ಆರ್ ಎಂ ಸಿ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಶಾಸಕ ಎಂ ಆರ್ ಮಂಜುನಾಥ್ ಗುದ್ದಲಿ ಪೂಜೆ
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು :2024-25 ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅನುಮೋದಿಸಿದ್ದು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾoಗಣದಲ್ಲಿ 4 ಲಕ್ಷದ 90 ಸಾವಿರ ರೂ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಶಾಸಕ ಎಂ ಆರ್ ಮಂಜುನಾಥ್ ರವರು ಗುದ್ದಲಿ ಪೂಜೆ ನೇರವೇರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಶಾಸಕ ಮಂಜುನಾಥ್ ಮಾತನಾಡಿ ಆರ್ ಎಂ ಸಿ ಆವರಣದಲ್ಲಿ ಇನ್ನು ಹಲವಾರು ಅಭಿವೃದ್ಧಿ ಕಾಮಗಾರಿಗಳು ಆಗಬೇಕಿದೆ ಇದೀಗ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅನುದಾನ ಬಿಡುಗಡೆಯಾಗಿದೆ ಇನ್ನು ಶೌಚಾಲಯ, ಕಟ್ಟಡ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆದ ಬಳಿಕ ಕೆಲಸ ಪ್ರಾರಂಭ ಮಾಡಲಾಗುವುದು, ಜೊತೆಗೆ ಇಲ್ಲಿ ಗೋಡನ್ ಗಳನ್ನು ನಿರ್ಮಾಣ ಮಾಡಿರುವ ಮಳಿಗೆದಾರರು ಇಲ್ಲೇ ಬಂದು ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.ಮಳಿಗೆ ನಿರ್ಮಾಣ ಮಾಡಿರುವವರು ಇಲ್ಲೇ ಬಂದು ವ್ಯಾಪಾರ ವಹಿವಾಟು ಮಾಡಿ ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿ. ಕಾಮಗಾರಿ ಉತ್ತಮ ಗುಣಮಟ್ಟದಿಂದ ಇರಬೇಕು ಎಂದು ಸಂಬಂಧ ಪಟ್ಟ ಗುತ್ತಿಗೆದಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಮುಂತಾಜ್ ಬಾನು,ಉಪಾಧ್ಯಕ್ಷ ಆನಂದ್ ಕುಮಾರ್,ಸದಸ್ಯ ಮಹೇಶ್ ನಾಯಕ, ,ಮುಖಂಡರುಗಳಾದ ಮಂಜೇಶ್ ,ಕೇಬಲ್ ರಾಜು, ಪ್ರಸನ್ನ,ವಿಜಯ್ ಕುಮಾರ್, ಅಮೀನ್, ರಾಹಿಲ್,ನಿಂಗರಾಜು, ಗೋವಿಂದ, ವೆಂಕಟೇಶ್, ಇನ್ನು ಮುಂತಾದವರು ಹಾಜರಿದ್ದರು.