ಹುಬ್ಬೆ ಹುಣಸೆ ಡ್ಯಾಮ್ಗೆ ಭಾಗಿನ ಅರ್ಪಿಸಿದ ಶಾಸಕ ಎಂ ಆರ್ ಮಂಜುನಾಥ್
ಹನೂರು:ತಾಲೂಕಿನ ಚಿಕ್ಕ ಮಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಹುಬ್ಬೆ ಹುಣಸೆ ಜಲಾಶಯ ಬರ್ತಿಯಾಗಿದ್ದು ಸ್ಥಳೀಯ ಶಾಸಕ ಎಂ ಆರ್ ಮಂಜುನಾಥ್ ಅವರು ಭಾಗಿನ ಅರ್ಪಿಸಿದರು.
ನಂತರ ಪತ್ರಿಕಾ ಮಾದ್ಯಮ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಕ್ಷೇತ್ರದ ಅಧಿಪತಿಗಳಾದ ಮಂಟೇಸ್ವಾಮಿ, ಸಿದ್ದಪಾಜಿ, ಶ್ರೀ ಮಲೈ ಮಹದೇಶ್ವರರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಉತ್ತಮ ಮಳೆ ಆಗುತ್ತಿದ್ದೂ, ಹುಬ್ಬೆ ಹುಣಸೆ ಜಲಾಶಯ ಭರ್ತಿಯಾಗಿರುವುದು ಒಳ್ಳೆಯ ವಿಚಾರ ಸಕಲ ಜೀವರಾಶಿಗಳಿಗೆ ಅತ್ಯಂತ ಅವಶ್ಯಕತೆ ಇರುವ ನೀರನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ. ಮುಂದಿನ ದಿನಗಳಲ್ಲಿ ನಮ್ಮ ರೈತರಿಗೆ ಉತ್ತಮ ಮಳೆಯಾಗಿ ಸುಬಿಕ್ಷವಾಗಿ ಬೆಳೆ ಆಗಲಿ ಎಂಬ ಉದ್ದೇಶ ದಿಂದ ಇಂದು ಬಾಗಿನ ಅರ್ಪಿಸುತ್ತಿರುವುದು ತುಂಬಾ ಸಂತೋಷ ಆಗ್ತಿದೆ. ಜೊತೆಗೆ ನಮ್ಮ ತಾಲೂಕು ವ್ಯಾಪ್ತಿಯ ಗುಂಡಾಲ್ ಜಲಾಶಯ ಉಡುತೊರೆ ಜಲಾಶಯ ರಾಮನ ಗುಡ್ಡೆ ಜಲಾಶಯ ಹಾಗು ಇನ್ನಿತರ ಕೆರೆ ಕಟ್ಟೆಗಳು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ತುಂಬಲಿ ಎಂಬುದು ನಮ್ಮ ಆಶಯ ನೀರನ್ನು ಸಂಗ್ರಹವಾದ ನಂತರ ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕಾಲುವೆಗಳ ಹೂಳು ತೆಗೆಸಿ ರೈತರಿಗೆ ನೀರಿನ ಸಮಸ್ಯೆ ಉಲ್ಬಣವಾಗದ ರೀತಿಯಲ್ಲಿ ಕಾರ್ಯಕ್ರಮ ರೂಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂಜಿನಿಯರ್ ಕರುಣಾಮಯಿ, ರಾಮಚಂದ್ರ,ರಮೇಶ್ ಬಸವೇಶ, ಮಂಜೇಶ್, ರಾಜು, ರೈತ ಸಂಘದ ಮುಖಂಡರುಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು ಸಾರ್ವಜನಿಕರು ಹಾಜರಿದ್ದರು.