ಶಾಂತಿಯುತವಾಗಿ ಗೌರಿ ಗಣೇಶ ವಿಸರ್ಜಿಸಲು ಸಲಹೆ ನೀಡಿದ ಶಾಸಕ ಎಂ ಆರ್ ಮಂಜುನಾಥ್
ಹನೂರು: ತಾಲೂಕಿನ ವಿವಿದೆಡೆ ಗೌರಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿರುವ ಗ್ರಾಮಗಳಿಗೆ ತೆರಳಿ ಶಾಸಕ ಎಂ.ಆರ್ ಮಂಜುನಾಥ್ ಗ್ರಾಮಸ್ಥರಿಗೆ ಶುಭಾಯ ತಿಳಿಸಿ ಶಾಂತಿಯುತವಾಗಿ ವಿಸರ್ಜನೆ ಮಾಡುವಂತೆ ಸಲಹೆ ನೀಡಿದರು.
ಹನೂರು ತಾಲೂಕಿನ ವಡ್ಡರದೊಡ್ಡಿ ಹಾಗೂ ಲೊಕ್ಕನಹಳ್ಳಿಯಲ್ಲಿ ಪ್ರತಿಷ್ಠಾಪನ ಮಾಡಲಾಗಿರುವ ಗೌರಿ ಗಣೇಶ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗ್ರಾಮಸ್ಥರಿಗೆ ಶುಭಶಯ ತಿಳಿಸಿ ನಂತರ ಮಾತನಾಡಿ.
ನಾಡಿನಾದ್ಯಂತ ಸಡಗರದ ಸಂಭ್ರಮದಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗಿದೆ ವಿವಿಧ ಗ್ರಾಮಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಗೌರಿ ಗಣೇಶ ಮೂರ್ತಿಗಳನ್ನು ಪೂಜೆ ಸಲ್ಲಿಸಿ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಶಾಂತಿಯುತವಾಗಿ ಗ್ರಾಮಗಳಲ್ಲಿ ಯುವಕರು ಮತ್ತು ಗ್ರಾಮಸ್ಥರು ಸುರಕ್ಷಿತವಾಗಿ ವಿಸರ್ಜನೆ ಮಾಡಬೇಕು ಎಂದರು.
ಧಾರ್ಮಿಕ ಪೂಜೆ ಜನತೆಗೆ ಒಳಿತಾಗಲಿ : ಕ್ಷೇತ್ರದಲ್ಲಿ ಎಲ್ಲೆಡೆ ಆಚರಿಸಲಾಗುತ್ತಿರುವ ಹಬ್ಬದ ಜೊತೆಗೆ ವಿಸರ್ಜನೆ ಮಾಡಿ ರೈತರು ತಮ್ಮ ದಿನನಿತ್ಯದ ಕಾಯಕಕ್ಕೆ ಈ ಬಾರಿ ಉತ್ತಮ ಮಳೆ ಬೆಳೆ ಆಗಲಿ ಎಲ್ಲಾ ಬೆಳೆಗಳಿಗೂ ನಿಗದಿತ ಬೆಲೆ ಸಿಗಲಿ ಮತ್ತು ತಾಲೂಕಿನ ನಾಡಿನಾದ್ಯಂತ ಜನತೆಗೆ ಆರೋಗ್ಯ ಆಯಸ್ಸು ನೆಮ್ಮದಿ ಕಲ್ಪಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಪ್ರತಿಯೊಬ್ಬರು ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ನೀಡುವ ಮೂಲಕ ಸರ್ಕಾರದಿಂದ ಸಿಗುವ ಸೌವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಗ್ರಾಮಗಳಲ್ಲಿ ಜನತೆ ಶಾಂತಿ ಸೌದಾರ್ಹತೆಯಿಂದ ಇರಬೇಕು ಎಂದು ಶುಭ ಹಾರೈಸಿದರು.
ಪ್ರತಿ ದಿನ ಈ ಭಾಗದ ವಿದ್ಯಾರ್ಥಿಗಳು ದಿನನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆಯನ್ನು ಇಲ್ಲದಿದ್ದ ಕಾರಣ ,ಮಕ್ಕಳಿಗೆ ಓಡಾಲು ತೊಂದರೆ ಯಾಗುತ್ತಿತು ಅದನ್ನು ಮನಗಂಡ ಶಾಸಕರು ಈ ಭಾಗದ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದರು.
ಇದೇ ಸಂದರ್ಭದಲ್ಲಿ ವಡ್ಡರ ದೊಡ್ಡಿ ಗ್ರಾಮದ ಮುಖಂಡರಾದ, ಮುನಿಸ್ವಾಮಿ ಕದ್ರಣ, ಗೋವಿಂದರಾಜು ಮಾದೇವಣ್ಣ. ಅಜ್ಜಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರುದ್ರ ನಾಯಕ. ಲೊಕ್ಕನಹಳ್ಳಿ ಗ್ರಾಮ್ಮ ಪಂಚಾಯತಿಯ ಅಧ್ಯಕ್ಷರಾದ ಚಿಕ್ಕರಾಜು, ಅಜ್ಜೀಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣಮೂರ್ತಿ,ಮಂಜೇಶ ಗೌಡ, ರಂಗಸ್ವಾಮಿ,ರವಿ, ವಿಜಯಕುಮಾರ್, ಎಸ್ ಸರ್ ಮಹದೇವ್ ನಾರಾಯಣ,ಲೋಕೇಶ್,ಸಿದ್ದರಾಜು, ಶಿವಕುಮಾರ್,ವಿ ಎ ವಿನೋದ. ಪಾಳ್ಯ ಗೋಪಾಲ್ ನಾಯ್ಕ, ಜಾಗೇರಿ ಪನ್ನಾಡಿ ,ಚೆನ್ನ ಲಿಂಗನಹಳ್ಳಿ ವೆಂಕಟೇಶ್. ಬಂಡಳ್ಳಿ ಅತಿಕ್, ರಾಮಪುರ ಎ.ಎಸ್.ಐ ಭೈರಪ್ಪ,ವಿನಾಯಕ ಬಳಗದ ಅಧ್ಯಕ್ಷರಾದ ಶಿವಮೂರ್ತಿ,ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ