ಲಿಂಗಸುಗೂರಿನಿಂದ ಮುದೋಳಕ್ಕೆ ತೆರಳುತ್ತಿದ್ದ ಸಂದರ್ಭ ಸಚಿವ ಆರ್.ಬಿ. ತಿಮ್ಮಾಪುರರಿಗೆ ಮುದ್ದೇಬಿಹಾಳದಲ್ಲಿ ಗೌರವ ಸನ್ಮಾನ.
ಮುದ್ದೇಬಿಹಾಳ: ಲಿಂಗಸುಗೂರಿನಿಂದ ಮುದೋಳಕ್ಕೆ ತೆರಳುತ್ತಿದ್ದ ಸಂದರ್ಭ ಮುದೋಳ ಮತಕ್ಷೇತ್ರದ ಶಾಸಕರಾಗಿಯೂ ಹಾಲಿ ಅಬಕಾರಿ ಸಚಿವರಾಗಿರುವ ಆರ್.ಬಿ. ತಿಮ್ಮಾಪುರ ಅವರನ್ನು ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದೊಡಮನಿ ಫೌಂಡೇಶನ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಇದೇ ವೇಳೆಯಲ್ಲಿ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಹಾರ ಹಾಕಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದೊಡಮನಿ ಫೌಂಡೇಶನ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ತಿಪ್ಪಣ್ಣ ದೊಡಮನಿ ಅವರು, ಸಾಮಾಜಿಕ ನ್ಯಾಯ ಹಾಗೂ ಜನಪರ ಆಡಳಿತಕ್ಕೆ ಸರ್ಕಾರ ಬದ್ಧವಾಗಿದ್ದು, ಅದರಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಕೊಡುಗೆ ಗಮನಾರ್ಹವಾಗಿದೆ ಎಂದು ಹೇಳಿದರು.
ಸನ್ಮಾನ ಸಮಾರಂಭದಲ್ಲಿ ಮುಖಂಡರಾದ ಪ್ರಕಾಶ ಸರೂರ, ಮಕಬೂಲಸಾಬ ಬನ್ನೇಟ್ಟಿ, ಬಸವರಾಜ ಕುಂಬಾರ, ನ್ಯಾಯವಾದಿಗಳಾದ ಎಸ್.ಎಚ್. ಲೋಟಗೇರಿ, ಅಬ್ದುಲ್ ಡೋಣೂರ, ಶಿವು ದೊಡಮನಿ, ನೀಲಪ್ಪ ನಾಲತವಾಡ, ಹಣಮಂತ ಕರೆಕಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


















