ಮುದ್ದೇಬಿಹಾಳ:ಪಟ್ಟಣದಲ್ಲಿ ಬುಧವಾರ ಚೆಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಸ್ಪೂರ್ತಿ ಹರಾನಾಳ ಮತ್ತು ಈಚೆಗೆ ಬೆಂಗಳೂರಿನಲ್ಲಿ ಜರುಗಿದ ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಗಗನ ಸಿಂಧು, ಅನ್ನಾಗುಣಿ, ರನ್ವಿತ ಅನ್ನಾಗುಣಿ
ಇಬ್ಬರು ವಿದ್ಯಾರ್ಥಿಗಳನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಪ್ರತಿಯೊಂದು ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸಬೇಕು ಶ್ರಮವಹಿಸಿ ಆಟವಾಡಿ ವಿಜಯಶಾಲಿಯಾಗಬೇಕು ಎಂಬುದು ನಮ್ಮ ಅಕಾಡೆಮಿಯ ಎಲ್ಲಾ ಪಾಲಕರ ಮಹಾದಾಸೆಯಾಗಿದೆ ಹೀಗಾಗಿ ಇಂತಹ ಸಾಧಕ ವಿದ್ಯಾರ್ಥಿಗಳನ್ನು ಅಕಾಡೆಮಿವತಿಯಿಂದ ಸನ್ಮಾನಿಸಿ ಅಭಿನಂಧಿಸಲಾಗುತ್ತಿದೆ ಎಂದು ಅಕಾಡೆಮಿ ಪಾಲಕರಾಗಿರುವ ಸುನಿಲ ಹವಲ್ದಾರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕರಾಟೆ ಕೊಚ್ ಶಿವಕುಮಾರ ಶಾರದಳ್ಳಿ, ಬಸವರಾಜ ನಾಗೂರ, ಸುನಿಲ ಅವಲ್ದಾರ, ರುದ್ರು ಮುರಾಳ,ರಿಯಾಜ ನಾಯ್ಕೋಡಿ, ಗುರು ಢಮನಾಳ ,ಮಕ್ಕಳು ಸೇರಿದಂತೆ ಭಾಗವಹಿಸಿದ್ದರು.