ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ
ವಿಜಯಪುರ – ಆದರ್ಶನಗರದ ಸೇವಾಲಾಲ ದೇವಸ್ಥಾನದಲ್ಲಿ ಸಂತ ಶ್ರೀ ಸೇವಾಲಾಲ ಮಾಲಾಧಾರಿಗಳ ವತಿಯಿಂದ ಸೇವಾಲಾಲರ 287 ನೇ ಜಯಂತಿ ಅಂಗವಾಗಿ ನಡೆದ ಮಹಾಭೋಗ ಮತ್ತು ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಬಾಬುರಾಜೇಂದ್ರ ಬಿ ನಾಯಿಕ ಸತತವಾಗಿ ಆರು ವರ್ಷಗಳಿಂದ ನಡೆಯುತ್ತಿರುವ ವಿಜಯಪುರ ಜಿಲ್ಲೆ ಮಾಲಾ ಅಭಿಯಾನಕ್ಕೆ ವ್ಯಾಪಕವಾದ ಸ್ಪಂದನೆ ಸಿಗುತ್ತಿದ್ದು ವರ್ಷದಿಂದ ವರ್ಷಕ್ಕೆ ಮಾಲಾಧಾರಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೇವಲ 30 ಜನರಿಂದ ಆರಂಭವಾದ ಈ ಮಾಲಾ ಅಭಿಯಾನ ಈ ವರ್ಷ ಸಾವಿರಾರು ಜನ ಸೇವಾಲಾಲರ ಮಾಲೆ ಧರಿಸಿ ಪೂಜಾ ವಿಧಿವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಸಂತಸದ ಸಂಗತಿ. ಈ ಬಾರಿ ಸೇವಾ ಧ್ವಜಯಾತ್ರೆ ಎಂಬ ಕಲ್ಪನೆಯಲ್ಲಿ ಐವತ್ತಕ್ಕೂ ಹೆಚ್ಚು ತಾಂಡಾಗಳಲ್ಲಿ ಮಾಲಾಧಾರಿಗಳು ಸಂಚರಿಸಿ ಧರ್ಮಜಾಗೃತಿ ಕಾರ್ಯವನ್ನು ಮಾಡಿದ್ದಾರೆ, ಸೇವಾಲಾಲರ ಜಯಂತಿಯಂದು ಧರಿಸಿರುವ ಮಾಲೆಯನ್ನು ವಿಸರ್ಜಿಸಿ ನಂತರವೂ ವಿಧಿ ವಿಧಾನಗಳನ್ನು ಪಾಲಿಸಿಕೊಂಡು ಜೀವನವನ್ನು ಸನ್ಮಾರ್ಗದಲ್ಲಿ ನಡೆಸಬೇಕು ಎಂಬ ಸಲಹೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಲಿಂಗಸೂರಿನ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ ಡಾ.ಬಾಬುರಾಜೇಂದ್ರ ನಾಯಿಕ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಮಾಲಾ ಅಭಿಯಾನ ವರ್ಷದಿಂದ ವರ್ಷಕ್ಕೆ ವೈಭವಯುತವಾಗಿ ನಡೆಯುತ್ತಿದ್ದು ಈ ಮೂಲಕ ಬಂಜಾರ ಸಮಾಜದ ಕುಲಗುರುಗಳಾದ ಸೇವಾಲಾಲರ ಚಿಂತನೆಗಳು ಹೆಚ್ಚಿನ ಜನರಿಗೆ ತಲುಪುತ್ತಿವೆ ಹಾಗೂ ಧರ್ಮ ಜಾಗೃತಿ ಮಾಡುತಿದ್ದಾರೆ ಎಂದರು.
ಕೆಸರಟ್ಟಿಯ ಪೂಜ್ಯರಾದ ಶ್ರೀ ಸೋಮಲಿಂಗ ಸ್ವಾಮೀಜಿ ಮಾತನಾಡಿ ಸಮಾಜದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣಕ್ಕಾಗಿ ಇಂತಹ ಮಾಲಾಧಾರಣೆ ಕಾರ್ಯಕ್ರಮಗಳು ಪೂರಕ, ಆರು ವರ್ಷದಿಂದ ಡಾ.ಬಾಬುರಾಜೇಂದ್ರ ನಾಯಿಕ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಪೂರ್ವದಲ್ಲಿ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಸೇವಾ ಸಂಚಲನದಲ್ಲಿ ಐದುನೂರಕ್ಕಿಂತ ಹೆಚ್ಚಿನ ಜನ ಮಾಲಾಧಾರಿಗಳು ಭವ್ಯ ಸೇವಾ ಸಂಚಲನ (ಶೋಭಾಯಾತ್ರೆಯ)ಮೂಲಕ ಆದರ್ಶನಗರದ ಸೇವಾಲಾಲ ದೇವಸ್ಥಾನವನ್ನು ತಲುಪಿದರು.
ಧನಸಿಂಗ್ ಮಹಾರಾಜ್ ಆಹೇರಿ ಮುಗಳಖೋಡ ಶಾಖಾದ ಸಂಜು ಮಹಾರಾಜ್,ಪ್ರಕಾಶ್ ಮಹಾರಾಜ್ ಭೀಮು ಮಹಾರಾಜ ಹಲವಾರು ತಾಂಡಾಗಳ ಪೂಜಾರಿಗಳು,
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಅರ್ಜುನ್ ರಾಠೋಡ್ ವಿಡಿಎ ಸದಸ್ಯ ಮಹದೇವ್ ರಾಠೋಡ್ ಮಾಜಿ ಜಿ ಪಂ ಸದಸ್ಯ ರಾಜಪಾಲ ಚವಾಣ್,ಬಿ ಬಿ ಲಮಾಣಿ,ರವಿ ರಾಠೋಡ್ ,ರಾಕೇಶ್ ರಜಪೂತ್ ,ಮೋಹನ್ ಚವಾಣ್,ಜಯರಾಮ್ ಪೂಜಾರಿ ರಾಜು ರಾಠೋಡ್,ಹಾಗೂ ಹಲವಾರು ತಾಂಡಗಳ ಹಿರಿಯರು ಉಪಸ್ಥಿತರಿದ್ದರು


















