ಬದಾಮಿ: ಬಳ್ಳಾರಿಯಿಂದ ಬಾಗಲಕೋಟೆಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಬೇಟಿ ನೀಡುವ ಸಂದರ್ಭದಲ್ಲಿ ಕಮತಗಿ ಬ್ರಿಡ್ಜ್ ಬಳಿ ರಾಮಥಾಳ ಗ್ರಾಮದ ಜನರು ಬಸ್ ನಿಲುಗಡೆಗೆ ಮನವಿ ಸಲ್ಲಿಸಲು ಬಂದಿದ್ದರು. ಈ ವೇಳೆ ಬಾಗಲಕೋಟೆಯಿಂದ ಇಲಕಲ್ ಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿಯ ಚಾಲಕ ಹಾಗೂ ನಿರ್ವಾಹಕರನ್ನು ಕರೆದು ಆರಾಮಾಗಿದ್ದೀರಾ? ಡ್ಯೂಟಿ ಹೇಗೆ ನಡೆಯುತ್ತಿದೆ ಎಂದು ವಿಚಾರಿಸಿದರು.ಇನ್ನು ಸಾರಿಗೆ ನೌಕರರು ಸಚಿವರು ತಮ್ಮನ್ನು ಕರೆದು ಆರೋಗ್ಯ ವಿಚಾರಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಚಾಲಕ ಹಾಗೂ ನಿರ್ವಾಹಕ ಸಚಿವರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಸಚಿವರು ಕೂಡಾ ನೌಕರರಿಗೆ ಶುಭ ಕೋರಿ ಪ್ರಯಾಣ ಬೆಳೆಸಿದರು.