ವಿಜಯಪುರ: ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮತ್ತು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ರವರ ನೇತೃತ್ವದಲ್ಲಿ ಇಂದು ಕೇಂದ್ರದ ಬಿಜೆಪಿ ಸರಕಾರ (ಮನರೇಗಾ) ಮಹಾತ್ಮಾಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾಯಿಸುವುದರ ಜೊತೆಗೆ ಈ ದೇಶಕ್ಕೆ ಅನ್ನ ಹಾಕುತ್ತಿರುವ ರೈತರಿಗೆ, ಬಡವರಿಗೆ, ಶೋಷಿತರಿಗೆ ಹಾಗೂ ಕಾರ್ಮಿಕರ ಜೊತೆ ಅನ್ಯಾಯ ಮಾಡಿದ್ದು, ಇದನ್ನು ಖಂಡಿಸಿ ಮನರೇಗಾ ಬಚಾವ ಆಂದೋಲನ ಹಮ್ಮಿಕೊಂಡು ವಿಜಯಪುರ ನಗರದ ಮಹಾತ್ಮಾಗಾಂಧಿ ವೃತ್ತದಿಂದ ಪಾದಯಾತ್ರೆಯ ಮೂಲಕ ಡಾ||ಬಾಬಾಸಾಹೇಬ ಅಂಬೇಡ್ಕರ ವೃತ್ತದವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಬಲವಾಗಿ ಖಂಡಿಸಿ ಬೃಹತ್ ಮಟ್ಟದಲ್ಲಿ ಪ್ರತಿಭಟಿಸಲಾಯಿತು.
ಈ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಮಾತನಾಡಿ ಬಿಜೆಪಿ ಸರಕಾರ ದ್ವೇಷದ ರಾಜಕಾರಣ ಮಾಡುತ್ತಾ ಈ ಹಿಂದೆ ಕಾಂಗ್ರೆಸ್ ಪಕ್ಷದ ಜನಪ್ರಿಯ ಜನಪರ, ಬಡವರಪರ, ಶೋಷಿತರಪರ, ರೈತಪರ ಯೋಜನೆಗಳು ಕ್ರಮಬದ್ಧವಾಗಿ ಮುಗಿಸುವುದರಲ್ಲಿ ತಲ್ಲೀನವಾಗಿದ್ದು, ಇದು ಜನವಿರೋಧಿ ಸರಕಾರವಾಗಿದೆ ಹಾಗೂ ಈ ಸರಕಾರ ನಮ್ಮ ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟ ಮಹಾಪುರುಷರ ಹೆಸರುಗಳು ಶಾಶ್ವತವಾಗಿ ತೆಗೆಯುವ ಹುನ್ನಾರ ನಡೆಸಿದ್ದು, ಉದಾ: ಮಹಾತ್ಮಾಗಾಂಧಿಯವರ ಹೆಸರು ತೆಗೆದು ವಿಬಿಜಿ ರಾಮಜಿ ಎಂದು ಹೆಸರಿಟ್ಟು ಮಹಾತ್ಮಾಗಾಂಧೀಜಿಯವರಿಗೆ ಮಾಡಿದ ಅಪಮಾನವಿದು, ಕೇಂದ್ರ ಸರಕಾರದ ಈ ಕೃತ್ಯ ಜನ ಎಂದಿಗೂ ಮರೆಯಲಾರರು. ಈ ಸರಕಾರ ಬಂಡವಾಳಶಾಹಿಗಳ ಪರವಾಗಿದ್ದು, ಜನರ ಕೈಯ್ಯಲ್ಲಿರುವ ಉದ್ಯೋಗ ಕಸಿದುಕೊಂಡು ಈ ಬಂಡವಾಳಶಾಹಿಗಳಿಗೆ ಕೊಡುವ ಹುನ್ನಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಆರ್ಥಿಕ ತಜ್ಞ ಮಾಜಿ ಪ್ರಧಾನಿ ದಿ. ಡಾ.ಮನಮೋಹನ ಸಿಂಗ್ರವರು ತಂದAತಹ ಈ ಯೋಜನೆಯ ಉದ್ದೇಶ ರೈತರು, ಬಡವರು, ಕೂಲಿಕಾರರು, ಕಾರ್ಮಿಕರು ವರ್ಷದಲ್ಲಿ ೯೦ ದಿನ ತಮ್ಮ ಸ್ವಂತ ಊರಿನಲ್ಲಿಯೇ ಉದ್ಯೋಗ ಮಾಡಲಿ, ಅವರ ಜೀವನ ನೆಮ್ಮದಿಯಾಗಿ ಇರಲಿ, ಆದರ ಜೊತೆಗೆ ಹಳ್ಳಿಗಾಡಿನಲ್ಲಿ ರಸ್ತೆ, ಶಾಲಾ ಕಂಪೌAಡ, ಬಾಂದಾರ ಇಂತಹ ಅನೇಕ ಅಭಿವೃದ್ಧಿ ಕಾರ್ಯಗಳು ಆಗಲಿ ಅಂತಾ ತಂದAತಹ ಯೋಜನೆ ಸ್ಥಳೀಯಮಟ್ಟದಲ್ಲಿ ನಿರ್ಧಾರವಾಗಿ ಜನರು ಉದ್ಯೋಗದ ಜೊತೆಗೆ ಅಭಿವೃದ್ಧಿ ಹೊಂದಲಿ ಅಂತಾ ತಂದAತಹ ಖಾತರಿ ಯೋಜನೆಯಾಗಿದೆ. ಇದರಲ್ಲಿ ಮುಖ್ಯವಾಗಿ ಶೇ.೯೦ ರಷ್ಟು ಅನುದಾನ ಕೇಂದ್ರ ಸರಕಾರದ್ದಾಗಿತ್ತು. ಈ ಜನಪ್ರಿಯ ಯೋಜನೆ ಸಹಿಸದೆ ಇಂದಿನ ಕೇಂದ್ರ ಬಿಜೆಪಿ ಸರಕಾರ ಮಹಾತ್ಮಾಗಾಂಧೀಜಿಯವರ ಹೆಸರು ಅಳಿಸಿ, ತಾವು ಕೊಡಬೇಕಾದ ಅನುದಾನದಲ್ಲಿ ಕಡಿತ ಮಾಡಿ ರಾಜ್ಯ ಸರಕಾರಗಳ ಮೇಲೆ ಭಾರಹಾಕಿ ಬಡವರಿಗೆ ಅನ್ಯಾಯ ಮಾಡುವುದರ ಜೊತೆಗೆ ಈ ಯೋಜನೆಯ ನಿಯಂತ್ರಣ ತನ್ನ ಕೈಯ್ಯಲ್ಲಿಟ್ಟುಕೊಂಡು ತಮಗೆ ಬೇಕಾದ ಬಂಡವಾಳಶಾಹಿಗಳ ಪಾಲು ಮಾಡಲು ಹೊರಟಿದ್ದು, ಬಡವರ ಉದ್ಯೋಗ ಕಸಿದುಕೊಳ್ಳುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸುತ್ತದೆ. ಹಾಗೂ ಘನವೆತ್ತ ರಾಷ್ಟçಪತಿಗಳಲ್ಲಿ ವಿನಂತಿಸುತ್ತಾ ಕೇಂದ್ರ ಬಿಜೆಪಿ ಸರಕಾರ ತಂದAತಹ ಕಾನೂನಿಗೆ ಮಾನ್ಯತೆ ನೀಡದೆ ತಕ್ಷಣ ಅದನ್ನು ರದ್ದುಪಡಿಸಿ ಈ ಮೊದಲಿದ್ದ ಮನರೇಗಾವನ್ನು ಪುನರ್ ಸ್ಥಾಪಿಸಿ ರೈತರಿಗೆ, ಕೂಲಿಕಾರ್ಮಿಕರಿಗೆ, ಶೋಷಿತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡುತ್ತಾ, ಒಂದುವೇಳೆ ಇದನ್ನು ರದ್ದು ಮಾಡದೇ ಹೋದಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಉಗ್ರವಾದ ಹೋರಾಟ ಕೈಗೆತ್ತಿಕೊಂಡು ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿ ಬಲವಾಗಿ ಖಂಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರ.ಕಾ. ಮಹ್ಮದರಫೀಕ ಟಪಾಲ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಮೀರಹ್ಮದ ಬಕ್ಷಿ, ಜಲನಗರ ಬ್ಲಾಕ್ ಅಧ್ಯಕ್ಷೆ ಆರತಿ ಶಹಾಪೂರ, ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಮಿಜಾ ನದಾಫ್, ಮಹಾನಗರಪಾಲಿಕೆ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಶಬ್ಬೀರ ಜಾಗೀರದಾರ ಮುಂತಾದವರು ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಚಾಂದಸಾಬ ಗಡಗಲಾವ, ಆಜಾದ ಪಟೇಲ, ಕನ್ನಾನ ಮುಶ್ರೀಫ್, ವಿಜಯಕುಮಾರ ಘಾಟಗೆ, ಹೊನ್ನಮಲ್ಲ ಸಾರವಾಡ, ಅಪ್ಪು ಪೂಜಾರಿ, ಅಲ್ಲಾಬಕ್ಷ ಬಡೆಪೀರ, ವಸಂತ ಹೊನಮೊಡೆ, ಎಂ.ಎA. ಮುಲ್ಲಾ, ಫಯಾಜ ಕಲಾದಗಿ, ಪೀರಾ ಜಮಖಂಡಿ, ಶರಣಪ್ಪ ಯಕ್ಕುಂಡಿ, ಪರಶುರಾಮ ಹೊಸಮನಿ, ವಿರೇಶ ಕಲಾಲ, ಲಾಲಸಾಬ ಕೊರಬು, ಆನಂದ ಜಾಧವ, ಅಷ್ಫಾಕ ಮನಗೂಳಿ, ಸರಫರಾಜ ಮಿರ್ಜಿ, ಲಕ್ಷö್ಮಣ ಇಲಕಲ್ಲ, ದಸ್ತಗೀರ ಸಾಲೊಟಗಿ, ತಾಜುದ್ದೀನ ಖಲೀಫಾ, ಹಾಜಿಲಾಲ ದಳವಾಯಿ, ಅಬುಬಕರ ಕಂಬಾಗಿ, ಬಾಬು ಯಾಳವಾರ, ಸಂತೋಷ ಬಾಲಗಾಂವಿ, ಕೃಷ್ಣಾ ಲಮಾಣಿ, ಗಂಗುಬಾಯಿ ಧುಮಾಳೆ, ಲಕ್ಷಿö್ಮ ಕ್ಷೀರಸಾಗರ, ಕಾಶಿಬಾಯಿ ಹಡಪದ, ಹಮೀದಾ ಪಟೇಲ, ಭಾರತಿ ನಾವಿ, ಆಸ್ಮಾ ಕಾಲೇಬಾಗ, ಶಕೀಲ ಗಡೇದ, ಗೌಸ್ ಮುಜಾವರ, ಮೈಬೂಬ ಕಲಾದಗಿ, ಇಲಿಯಾಸ ಸಿದ್ದಿಕಿ, ಫಯಾಜ ಸಾಸನೂರ, ಎಜಾಜ ಮುಕಬಿಲ್, ಶಮಿಮಾ ಅಕ್ಕಲಕೋಟ, ಕಲ್ಲಪ್ಪ ಕಲಶೆಟ್ಟಿ, ಅಶೋಕ ಬಜಂತ್ರಿ, ರಜಾಕ ಕಾಖಂಡಕಿ, ಸಲಿಮ ಕಲಾದಗಿ, ಸುಂದರಪಾಲ ಚವ್ಹಾಣ, ಲಕ್ಷö್ಮಣ ಚಲವಾದಿ, ಅರುಣ ಗವಳಿ, ಅರುಣ ಬಜಂತ್ರಿ, ಹಾಜಿ ಪಿಂಜಾರ, ಶಕೀಲ ಸುತಾರ, ಇಸಾಕ ಗುಲ್ಬರ್ಗಾ, ಈರಪ್ಪ ಕುಂಬಾರ, ಅಲ್ಲಾಬಕ್ಷ ಮುಲ್ಲಾ, ಲಕ್ಷಿö್ಮ ಬಳ್ಳಾರಿ, ಲಕ್ಷಿö್ಮ ಶಿವಣಗಿ, ಪ್ರಿಯಾಂಕಾ, ಗಂಗುಬಾಯಿ ಕಣಮುಚನಾಳ ಮುಂತಾದವರು ಉಪಸ್ಥಿತರಿದ್ದು.



















