ಬರಗಾಲದ ಮಲ್ಲ ಭೀಮಶಿ ಕಲಾದಗಿ ನೀಧನ, ಪೋಲಿಸ್ ಗೌರವದೊಂದಿಗೆ ಅಂತ್ಯಕ್ರಿಯೆ..!
ವಿಜಯಪುರ : ಹಿರಿಯ ರೈತ ಮುಖಂಡ ಭೀಮಶಿ ಹಣಮಂತ ಕಲಾದಗಿ ನಿಧನ ವಿಷಯವನ್ನು ರಾಜ್ಯ ಸರಕಾರ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಅದಲ್ಲದೆ ಮೃತರ ಅಂತ್ಯಕ್ರಿಯೆನ್ನು ಪೋಲಿಸ್ ಗೌರವದೊಂದಿಗೆ ನೆರೆವರಿಸಲು ಅಧಿನ ಕಾರ್ಯದರ್ಶಿ ಗೌರೀಶ ಟಿ ಆದೇಶ ಹೊರಡಿಸಿದ್ದಾರೆ.
ಹಿರಿಯ ರೈತ ಮುಖಂಡ, ಸಿಪಿಎಂ ಮುಖಂಡ, ‘ಬರಿಗಾಲ ಗಾಂಧಿ’ ಎಂದೇ ಪ್ರಸಿದ್ಧವಾಗಿದ್ದ ಭೀಮಶಿ ಕಲಾದಗಿ(86) ಸೋಮವಾರ ರಾತ್ರಿ ನಿಧನರಾದರು.
ಇವರಿಗೆ ಸುರೇಶ ಕಲಾದಗಿ ಮತ್ತು ಮಾಳಪ್ಪ ಕಲಾದಗಿ ಸೇರಿದಂತೆ ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಮತ್ತು ಪತ್ನಿ ಇದ್ದಾರೆ.
ಮಂಗಳವಾರ(ಆಗಸ್ಟ್ 6) ಮಧ್ಯಾಹ್ನ 2ಕ್ಕೆ ವಿಜಯಪುರದ ಕಾಳಿಕಾ ನಗರದಲ್ಲಿರುವ ಅವರ ಮನೆಯಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು, ಬಳಿಕ ಇಂಡಿ ತಾಲ್ಲೂಕಿನ ನಿಂಬಾಳದ ಅವರ ತೋಟದಲ್ಲಿ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಭೀಮಶ್ಯಾ ಕಲಾದಗಿ ಹೋರಾಟದ ಹೆಜ್ಜೆಗಳು
ರೈತ ಹೋರಾಟಗಳು, ಕೂಲಿಕಾರರ ಸಮಸ್ಯೆಗಳು, ಕಾರ್ಮಿಕರ ಬವಣೆಗಳು, ನಾಗರಿಕ ಸಮಸ್ಯೆಗಳು,
ಭ್ರಷ್ಟಾಚಾರ, ನೌಕರರ ಮೇಲಿನ ದೌರ್ಜನ್ಯ, ದಲಿತರ ಮೇಲಿನ ದಬ್ಬಾಳಿಕೆ, ಭೂ ವಸತಿಹೀನರ ಸಮಸ್ಯೆ, ಕೋಮು ಸೌಹಾರ್ದತೆ ಬೆಸೆಯುವಿಕೆ, ಬ್ರಾಡ್ ಗೇಜ್ ರೈಲಿಗಾಗಿ ಹೋರಾಟ, ಪಂಚಾಯಿತಿ ನೌಕರರ ಜಾಡಮಾಲಿಗಳ ಸಮಸ್ಯೆಗಳಿಗಾಗಿ ಹೋರಾಟ, ಪಡಿತರ ಸಮಸ್ಯೆ, ಸಾರಾಯಿ ವಿಮುಕ್ತಿ, ಅನಿಷ್ಟ ಪದ್ಧತಿ, ವೇಶ್ಯಾವಾಟಿಕೆ ನಿಲ್ಲಿಸುವಿಕೆ, ಕೊಲೆ ಪ್ರಕರಣಗಳ ಭೇದ, ವ್ಯಾಪಾರಸ್ಥರಿಗೆ ನೆರವು, ಕುಡಿಯುವ ನೀರಿನ ಸಮಸ್ಯೆ, ಆಹಾರ ಧಾನ್ಯ ವಿತರಣೆ, ಬೀಡಿ ಕಾರ್ಮಿಕರು, ರಿಕ್ಷಾ ಚಾಲಕರ ಮತ್ತು ಹಮಾಲರ ಸಮಸ್ಯೆಗಳು ಮುಂತಾದ ಹೋರಾಟಗಳಲ್ಲಿ ಭೀಮಶಿ ಕಾಕಾ ಅನನ್ಯ ಭಾಪನ್ನು ಒತ್ತಿದ್ದಾರೆ. ವರಸೆ ತೋರಿಸಿದ್ದಾರೆ. ಅಂದಿನ ಗತ್ತು, ಶೈಲಿ, ಜವಾರಿ ಮಾತು, ದೀನ ದಲಿತರ ಮೇಲಿನ ಮಮತೆಯ ಕಾವು ಇನ್ನೂ ಆರಿಲ್ಲ. ಅನ್ಯಾಯಕ್ಕೊಳಗಾದ ಹಲವು ಸ್ಥಳಗಳು ಇವರ ನೆರಳನ್ನು ಕಂಡರೆ ಹೌಹಾರುತ್ತಿದ್ದವು. ಮೂಡಿದ ಹೆಜ್ಜೆಗುರುತುಗಳು ಸಿಡಿಗುಂಡಿಗೂ ಸಿಡಿಯಲಾರವು. ಹೋದರೆ ಸಮಯ ಸಾಲದು. ಬಲ್ಲವನೇ ಹೋರಾಟದ ಮಲ್ಲ ಭೀಮಶಿ ಕಾಕಾನ ಕಥೆ..