ಅಫಜಲಪುರ: ಆಧುನಿಕ ಜಗತ್ತಿಗೆ ಮರುಳಾಗಿ ಮಾನವ ದಿನವಿಡೀ ಒತ್ತಡದ ನಡುವೆ ಬದುಕುತ್ತಿದ್ದಾನೆ. ಒತ್ತಡಗಳಿಂದ ಹೊರ ಬಂದು ನೆಮ್ಮದಿಯಿಂದ ಜೀವನ ನಡೆಸಲು ಪುರಾಣ ಪ್ರವಚನ ಆಲಿಸುತ್ತಿರಬೇಕು ಎಂದು ಅಫಜಲಪುರ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಆನೂರ ಗ್ರಾಮದ ಶ್ರೀ ಚಂದ್ರಗಿರಿ ದೇವಿ ಜಾತ್ರಾ ಮಹೋತ್ಸವ ಹಾಗೂ ನೂತನ ದೇವಾಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ನಿಮಿತ್ತ ನಡೆಯುತ್ತಿರುವ ಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ತಾಂತ್ರಿಕವಾಗಿ ಜಗತ್ತು ವೇಗವಾಗಿ ಬೆಳೆಯುತ್ತಿದೆ. ಇದರ ನಡುವೆ ಪರಸ್ಪರ ಭಾವನಾತ್ಮಕ ಸಂಬಂಧಗಳು ಕೂಡಾ ಕ್ಷೀಣಿಸುತ್ತಿವೆ. ಅದಕ್ಕಾಗಿ ಭಾವನಾತ್ಮಕ ಸಂಭಂದಗಳು ಗಟ್ಟಿಯಾಗಲು ಧಾರ್ಮಿಕ ಕಾರ್ಯಗಳು ನಡೆಯುತ್ತಿರಬೇಕು ಎಂದ ಅವರು ಪುರಾಣಗಳಿಂದ ಗ್ರಾಮೀಣ ಭಾಗದಲ್ಲಿ ಎಲ್ಲ ವರ್ಗದವರು ಶಾಂತಿ ಹಾಗೂ ನೆಮ್ಮದಿಯಿಂದ ಜೀವನ ನಡೆಸಲು ಸಹಕಾರಿಯಾಗಿದೆ. ಅದಕ್ಕಾಗಿ ಗ್ರಾಮದಲ್ಲಿಂದು ಜಾತ್ರಾಮಹೋತ್ಸವ ಪ್ರಯುಕ್ತ ಎಲ್ಲರೂ ಸೇರಿಕೊಂಡು ಅರ್ಥಪೂರ್ಣ ಕಾರ್ಯಕ್ರಮ ಮಾಡುತ್ತಿರುವುದು ಖುಷಿ ತಂದಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸದಾಕಾಲ ನಡೆಯಬೇಕು ಎಂದರು.
ಚಿಂಚೋಳ ಮಠದ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಚಂದ್ರಗಿರಿದೇವಿ ಪ್ರಧಾನ ಅರ್ಚಕ ರಾಹುಲ್ ಭಂಡಾರಿ ಮುಖಂಡರಾದ ಈರಣ್ಣಗೌಡ ನವದಗಿ, ರಾಜು ಜೀರೊಳಿ, ನಿಂಗಣ್ಣ ಕಲಶೆಟ್ಟಿ, ಶ್ರೀಮಂತ ಭಂಡಾರಿ, ಮಹಾಂತಯ್ಯ ಸ್ವಾಮಿ ಮಲಘಾಣ, ಬಲಭೀಮ ಬಳೂಂಡಗಿ, ಚಂದ್ರಕಾಂತ ಸೀತನೂರ, ಬಾಬು ಬಿರಾದಾರ, ಮಲಕಣ್ಣ ಕೆರೆಮಗಿ, ದತ್ತು ಘಾಣೂರ, ಡಾ.ಸಂಗಣ್ಣ ಸಿಂಗೆ, ರೇವಣಸಿದ್ದ ಕಲಶೆಟ್ಟಿ, ರೇವಣಸಿದ್ದ ಬಳೂಂಡಗಿ, ಮಲ್ಲಣ್ಣಗೌಡ ಮಾಲೀಪಾಟೀಲ, ಅಂಬರೀಶ ಪಟ್ಟಣ, ಸಿದ್ದು ರೂಗಿ, ಗುರು ಪೂಜಾರಿ, ವಿಜಯಕುಮಾರ ಭಂಡಾರಿ, ಪಾಲೀಕರಾಯ ಬಳೂಂಡಗಿ ಹಾಗೂ ಪುರಾಣಿಕರು ಗ್ರಾಮಸ್ಥರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.