ದೌರ್ಜನ್ಯ ನಡೆಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಆಗ್ರಹ..!
ಇಂಡಿ: ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾಗೌಡ ಅವರ ಮೇಲೆ ರಾಜಕೀಯ ಮುಖಂಡ ರಾಜೀವಗೌಡ ನಡೆಸಿರುವ ದೌರ್ಜನ್ಯ ಖಂಡಿಸಿದ ಇಂಡಿ ನಗರಸಭೆಯ ಸಿಬ್ಬಂದಿಗಳು ಕರ್ನಾಟಕ ರಜ್ಯ ಪೌರ ನೌಕರರ ಸಂಘಟನೆ ನೇತೃತ್ವದಲ್ಲಿ ದೌರ್ಜನ್ಯ ನಡೆಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ಶುಕ್ರವಾರ ವಿಜಯಪೂರ ಜಿಲ್ಲಾಧಿಕಾರಿ ಡಾ. ಕೆ. ಆನಂದ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಶಿವಶರಣ, ಶಾಂತು ಲಚ್ಯಾಣ, ಮುತ್ತು ಮುರಳ, ಅಸ್ಲಾಂ ಖಾದಿಮ್, ಸುರೇಶ ಅಮರಣ್ಣವರ, ಶುಭಹಾನಜಿ ಕಸಬ್ ಸೇರಿದಂತೆ ನಗರ ಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇಂಡಿ: ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾಗೌಡ ಅವರ ಮೇಲೆ ರಾಜಕೀಯ ಮುಖಂಡ ರಾಜೀವಗೌಡ ನಡೆಸಿರುವ ದೌರ್ಜನ್ಯ ಖಂಡಿಸಿದ ಇಂಡಿ ನಗರಸಭೆಯ ಸಿಬ್ಬಂದಿಗಳು ಕರ್ನಾಟಕ ರಜ್ಯ ಪೌರ ನೌಕರರ ಸಂಘಟನೆ ನೇತೃತ್ವದಲ್ಲಿ ದೌರ್ಜನ್ಯ ನಡೆಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ಶುಕ್ರವಾರ ವಿಜಯಪೂರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.



















