ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ
ಅಫಜಲಪುರ: ಅಫಜಲಪುರ ಮತಕ್ಷೇತ್ರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಕಂಡುಬಂದಿದ್ದು, ನೂರಾರು ಯುವಕರು ಭಾರತೀಯ ಜನತಾ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಎಂ. ವೈ. ಪಾಟೀಲ ಅವರ ಅಭಿವೃದ್ಧಿಮುಖಿ ನಾಯಕತ್ವ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ. ವೈ. ಪಾಟೀಲ ಅವರ ನೇತೃತ್ವದಲ್ಲಿ ದಣ್ಣೂರ ಗ್ರಾಮದಲ್ಲಿ ಭವ್ಯ ಹಾಗೂ ಐತಿಹಾಸಿಕ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ದಣ್ಣೂರ, ಗೌಡಗಾಂವ, ದಿಕ್ಸಂಗಾ (ಬಿ), ಮದರಾ (ಬಿ), ಇಂಗಳಗಿ (ಬಿ), ಚೌಡಾಪೂರ ಗ್ರಾಮಗಳ ನೂರಾರು ಯುವ ಮುಖಂಡರು ಪಕ್ಷದ ಧ್ವಜ ಸ್ವೀಕರಿಸಿ ಕಾಂಗ್ರೆಸ್ ಸೇರ್ಪಡೆಯಾದರು.
ಕಾರ್ಯಕ್ರಮವು ಯುವಜನರ ಉತ್ಸಾಹ, ವಿಶ್ವಾಸ ಮತ್ತು ಬದಲಾವಣೆಯ ಸಂಕಲ್ಪಕ್ಕೆ ಸಾಕ್ಷಿಯಾಯಿತು.
ಸೇರ್ಪಡೆಗೊಂಡ ಪ್ರಮುಖರಲ್ಲಿಯು ಯಲ್ಲಣ್ಣಗೌಡ ಪಾಟೀಲ, ರಾಜುಗೌಡ ಅವರಳ್ಳಿ, ದತ್ತಣ್ಣ ಜಮಶೆಟ್ಟಿ, ಉಗ್ರರ ಮೂರ್ತಿ, ಶರಣಗೌಡ ಪಾಟೀಲ, ವಿಜಯಕುಮಾರ್ ಮಾಸ್ಟರ್, NSUI ಅಧ್ಯಕ್ಷ ಗುರುಕಿರಣ್ ಮಾಸ್ಟರ್, ರಾಚಪ್ಪ ಹುಮನಾಬಾದಿ, ರಾಜಕುಮಾರ್ ಪಿಸ್ತಿ, ಬಸವರಾಜ ಭಟ್ಟರಕಿ, ಜೆಟ್ಟೆಪ್ಪ ಪೂಜಾರಿ, ಪ್ರಭುಲಿಂಗ ಪಾಟೀಲ, ರಾಮ ಮಿಂಚನ್, ಸಚಿನ್ ಲಿಂಗಶೆಟ್ಟಿ, ಸುಧಾಕರ ಕಾಂಬ್ಳೆ, ರಾಮಗೌಡ ಪಾಟೀಲ, ಸಂಗಯ್ಯ ಸ್ವಾಮಿ ಸೇರಿದಂತೆ ಹಲವರು ಸೇರಿದ್ದಾರೆ.
ಇನ್ನೂ ಅತನೋರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಮಲಕರ್ ದೊಡ್ಮನಿ, ಮಲ್ಲು ನಾಯಿಕೋಡಿ, ಸಾಗರ ನಾಯಿಕೋಡಿ, ಮಲ್ಲಿನಾಥ ಪಾಟೀಲ, ಪ್ರಭುಲಿಂಗ ಪಾಟೀಲ, ಮಲ್ಲು ದಿಕಸಂಗಿ, ರಾಜು ವಾಡಿ ಸೇರಿದಂತೆ ಅನೇಕ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು, ಇದು ಕೇವಲ ಪಕ್ಷ ಸೇರ್ಪಡೆಯಷ್ಟೇ ಅಲ್ಲದೆ ಕ್ಷೇತ್ರ ರಾಜಕೀಯದಲ್ಲಿ ಹೊಸ ಸಮೀಕರಣಕ್ಕೆ ದಾರಿ ಮಾಡಿಕೊಡುವ ಬೆಳವಣಿಗೆ ಎಂದು ಅಭಿಪ್ರಾಯ ವ್ಯಕ್ತವಾಯಿತು. ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ದಿನೇ ದಿನೇ ಬಲಪಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಮುಖಂಡರು ತಿಳಿಸಿದ್ದಾರೆ.


















