ಲಚ್ಯಾಣ: ಚರಂಡಿ ನಿರ್ಮಿಸಲು ಆಗ್ರಹ
ಇಂಡಿ : ತಾಲೂಕಿನ ಲಚ್ಯಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4 ನೇ ವಾರ್ಡಿನಲ್ಲಿ ಚರಂಡಿ ತುಂಬಿ ಮನೆಗಳಿಗೆ ನುಗ್ಗುತ್ತಿದ್ದರು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಗ್ರಾಮದ ಗೌರಿಶಂಕರ ಲೋಣಿಕರ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಲಚ್ಯಾಣ ಗ್ರಾಮದ ವಾರ್ಡ 4 ರಲ್ಲಿ ಚರಂಡಿ ಹಾಗೂ ಬಟ್ಟೆ ತೊಳೆದ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ನೀರು ಹೆಚ್ಚಾದಂತೆ ಮನೆಯ ಗೋಡೆಗೆ ಅಂಟಿಕೊಂಡು ನಿಲ್ಲುತ್ತಿರುವುದರಿಂದ ಮನೆಯ ಗೊಡೆ ತೇವಾಂಶ ಹಿಡಿದು ಬಿಳುವ ಪರಿಸ್ಥಿತಿ ಇದೆ. ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಕೊಟ್ಟು ವರ್ಷವಾಗಿದೆ. ಪ್ರತಿನಿತ್ಯ ಭೇಟಿಯಾಗಿ ಮೌಖಿಕವಾಗಿ ಸಮಸ್ಯೆ ಬಗೆ ಹರಿಸಲು ಮನವಿ ಮಾಡಿಕೊಂಡರು ಸಮಸ್ಯೆ ಬಗೆಹರಿಸುತ್ತಿಲ್ಲ. ಹೀಗಾಗಿ ರಾತ್ರಿಯಾದರೆ ಸೊಳ್ಳೆಗಳು ಹೆಚ್ಚಾಗಿ ತೊಂದರೆ ಉಂಟಾಗಿದೆ. ಚರಂಡಿ ನೀರಿನ ರಭಸದಿಂದ ಮನೆವೊಳಗೆ ನುಗ್ಗುತ್ತಿದೆ.ಕೂಡಲೆ ಸಂಬಂಧಿಸಿದ ಇಲಾಖೆ ಮೇಲಾಧಿಕಾರಿಗಳು ಚರಂಡಿ ನಿರ್ಮಿಸಿ ಚರಂಡಿ ನೀರು ಹೋಗುವಂತೆ ಮಾಡಬೇಕು.ಇಲ್ಲವಾದರೆ ಕುಟುಂಬ ಸಮೇತ ಗ್ರಾಮ ಪಂಚಾಯಿತಿ ಮುಂದೆ ಧರಣಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.