ಕೋಲಿ ಸಮಾಜ ಎಸ್ಟಿ ಸೇರಿಸಲು ನಿರ್ಲಕ್ಷ: ಉಮೇಶ ಕೆ. ಮುದ್ನಾಳ
ಯಾದಗಿರಿ : ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಅಜಲಾಪುರ ಗ್ರಾಮದಲ್ಲಿ ಜನವರಿ 21 ರಂದು ರಾಜ್ಯ ಸರ್ಕಾರದಿಂದ ಆಚರಿಸಲ್ಪಡುವ ಅಂಬಿಗರ ಚೌಡಯ್ಯ ಜಯಂತಿ ನಿಮಿತ್ತ ಜನಜಾಗೃತಿ ಅಭಿಯಾನ ಗ್ರಾಮದ ಪ್ರಮುಖ ರಸ್ತೆಯಲ್ಲಿ ಜಾಥಾ ಮಾಡಲಾಯಿತು.
ಜಾಥಾ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ವತಂತ್ರ ಸಿಕ್ಕನಂತರ ಇಲ್ಲಿಯವರೆಗೆ ಟೋಕ್ರೆ ಕೋಳಿ ಬಿಟ್ಟುಹೋದ ಪರ್ಯಾಯ ಪದಗಳಾದ ಕೋಲಿ, ಅಂಬಿಗ, ಬೆಸ್ತ ಸೇರಿದಂತೆ ಹಲವು ಪದಗಳನ್ನು ಎಸ್ಟಿಗೆ ಸೇರಿಸುವಲ್ಲಿ ಮೀನಾ ಮೇಷ ಎಣಿಸಲಾಗುತ್ತಿದೆ.
ಈ ಕುರಿತು ನಿರಂತರ ಕಾಲಹರಣ ಮಾಡಲಾಗುತ್ತಿದೆ ಇದನ್ನು ಕೇಂದ್ರದಿAದ ರಾಜ್ಯಕ್ಕೆ ರಾಜ್ಯದಿಂದ ಕೇಂದ್ರಕ್ಕೆ ರವಾನಿಸುವ ಕೆಲಸ ಮಾಡುತ್ತಿರುವ ಐಎಎಸ್ ಅಧಿಕಾರಿಗಳು ಅವಿದ್ಯಾವಂತರೇ? ಎಂದು ಅವರು ಪ್ರಶ್ನಿಸಿದರು.
ಈ ಸಮಾಜವನ್ನು ಸುಮಾರು ವರ್ಷಗಳಿಂದ ದಿ|| ವಿಠಲ್ ಹೇರೂರನವರು ಸಾಕಷ್ಟು ಬಾರಿ ಹೋರಾಟ ಮಾಡಿದರೂ ಸಹ ಇದುವರೆಗೆ ಎಸ್ಟಿಗೆ ಸೇರಿಸುವಲ್ಲಿ ಸರ್ಕಾರಗಳು ವಿಫಲವಾಗಿರುವುದು ದುರದೃಷ್ಟಕರ ಸಂಗತಿ. ಉದಾ: ದೇಶದಲ್ಲಿ 16 ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಈ ಸಮಾಜ ಮತ್ತು 9 ರಾಜ್ಯದಲ್ಲಿ ಪರಿಶಿಷ್ಟ ಪಂಗಡದಲ್ಲಿದ್ದರೂ ಸಹ ಚುನಾಣೆ ಸಮಯದಲ್ಲಿ ಮತ ಪಡೆಯಲು ನಮ್ಮ ನಾಯಕರುಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪನೆಗೆ ಭೂಮಿಪೂಜೆ ಮಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲಿ ಮುಖಂಡರಾದ ವಿಶ್ವನಾಥ, ರಫೀಕ್ ಪಟೇಲ್, ನರಸಿಂಹಲು, ಬಾಬು, ಅನಿಲ್, ಬನ್ನಪ್ಪ, ಸಾಬಣ್ಣ, ಶಂಕರ, ಭೀಮಶೆಪ್ಪ, ಸಿದ್ದಪ್ಪ, ಭೀಮಪ್ಪ, ಶಾಂತಪ್ಪ, ಈಶ್ವರ, ಶಂಕ್ರಪ್ಪ, ಶಿವರಾಜ, ಶೇಖರ, ತಿಪ್ಪಣ್ಣ, ಚಂದ್ರಪ್ಪ ಬಾಗ್ಲಿ, ಸೌರಪ್ಪ, ಮಲ್ಲಿಕಾಜಪ್ಪ, ಶಂಕ್ರಪ್ಪ, ರಾಮಚಂದ್ರ, ಹಣಮಂತ, ಶಿವರಜ ಶೇಖರಪ್ಪ, ನಿಂಗಪ್ಪ, ಬಾಲರಾಜ, ಭೀಮರಾಯ, ಬನ್ನಪ್ಪ, ಭೀಮಪ್ಪ, ಲಕ್ಷಿö್ಮÃಕಾಂತ, ಭೀಮರಾಯ, ಚಂದ್ರು, ಲೋಕೇಶ, ಶಿವು , ರಮೇಶ ಹಾಗೂ ಮಹಿಳೆಯರು ಇದ್ದರು.