‘ಕರ್ನಾಟಕ ರತ್ನ’ ಡಾ. ಪುನೀತ್ ರಾಜ್ಕುಮಾರ್ ಪ್ರತಿಮೆ ಅನಾವರಣ
Voiceofjanata Desk News :Gokak : ಗೋಕಾಕ
ನಗರದಲ್ಲಿರುವ ಕನ್ನಡಿಗರ ಹೆಮ್ಮೆಯ ‘ಕರ್ನಾಟಕ ರತ್ನ’ ಡಾ. ಪುನೀತ್ ರಾಜ್ಕುಮಾರ್ ವೃತ್ತದಲ್ಲಿ ಇಂದು ಅವರ ಭವ್ಯ ಪ್ರತಿಮೆಯನ್ನು ಯುವ ನಟ ವಿನಯ್ ರಾಜ್ಕುಮಾರ್ ಅವರ ಉಪಸ್ಥಿತಿಯಲ್ಲಿ ಅತ್ಯಂತ ಸಡಗರದಿಂದ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಅಮರನಾಥ ಜಾರಕಿಹೊಳಿ, ಯುವ ನಾಯಕ ಶ್ರೀ ಸರ್ವೋತ್ತಮ ಜಾರಕಿಹೊಳಿ, ಗೋಕಾಕ ನಗರಸಭೆಯ ಸದಸ್ಯರು, ಮುಖಂಡರು ಹಾಗೂ ಅಪ್ಪು ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಉಪಸ್ಥಿತರಿದ್ದರು.
ಪುನೀತ್ ರಾಜ್ಕುಮಾರ್ ಅವರ ಕಲಾ ಸೇವೆ ಹಾಗೂ ಸಮಾಜಮುಖಿ ವ್ಯಕ್ತಿತ್ವವನ್ನು ಸ್ಮರಿಸುವ ಮೂಲಕ ಗೋಕಾಕ ನಗರ ಇಂದು ಭಾವಪೂರ್ಣ ಕ್ಷಣಗಳಿಗೆ ಸಾಕ್ಷಿಯಾಯಿತು.
#Puneethrajkumar
#RahulJarkiholi #VinayRajkumar


















