ಸಾರ್ವಜನಿಕರಿಗೆ ಒಳ್ಳೇಯದಾದರೆ ಸಾಕು : ಕಂದಾಯ ಹಕ್ಕು ಪತ್ರ ನೊಂದಣಿ
ಇಂಡಿ: ಸರಕಾರದ ಆದೇಶ ಪರಿಪಾಲನೆ ಪ್ರತಿ ನೌಕರರ ಆದ್ಯ ಕರ್ತವ್ಯ , ಜೊತೆ ಫಲಾನುಭವಿಗಳಿಗೆ ಒಳ್ಳೆಯದಾಗಲಿ ಎಂದು ರವಿವಾರ ಕೂಡಾ ರಜೆ ಮಾಡದೆ ಕಂದಾಯ ಗ್ರಾಮ ರಜಿಸ್ಟರ್ ಮಾಡಲಾಗುತ್ತಿದೆ ಎಂದು ಉಪನೋಂದಣಾಧಿಕಾರಿ ಶ್ರೀಮತಿ ಅಂಜಲಿ.ಸಿ ಹೇಳಿದರು.
ನಗರದ ಕಚೇರಿಯಲ್ಲಿ ಕಂದಾಯ ಹಕ್ಕು ಪತ್ರ ನೊಂದಣಿ ಕಾರ್ಯಕ್ರಮದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು.
ಅನೇಕ ವರ್ಷಗಳಿಂದ ಕೆಲ ಗ್ರಾಮಗಳು ಯಾವುದೇ ಹಕ್ಕುಪತ್ರಗಳಿಲ್ಲದೆ ವಂಚಿತವಾಗಿದ್ದವು ಸಾರ್ವಜನಿಕರಿಗೆ ನಿವೇ±ನÀ ಹೊಂದಿದ ಜನರಿಗೆ ಸರಕಾರ ಕಂದಾಯ ಗ್ರಾಮಗಳು ಮಾಡಿರುವದರಿಂದ ಫಲಾನುಭವಿಗಳಿಗೆ ಆತ್ಮಸ್ಥೆರ್ಯ ತುಂಬಿದAತಾಗಿದೆ. ಕಳೆದ ಜ.೨೯ ರಿಂದ ಪ್ರಾರಂಭವಾದ ಕಂದಾಯ ಗ್ರಾಮದ ರಜಿಸ್ಟರ್ ಫೆ, ೭ರವರೆಗೆ ಮುಕ್ತಾಯವಾಗುವ ಸಾಧ್ಯತೆ ಇದೆ.
ನಮ್ಮ ಕಾರ್ಯಲಯದಲ್ಲಿ ಕೇವಲ ಕಂದಾಯ ಗ್ರಾಮಗಳ ರಜಿಸ್ಟರ್ ಗೆ ಮಾತ್ರ ಅವಕಾಶ ನೀಡಿದ್ದು ಇನ್ನುಳಿದ ಕೆಲಸಗಳು ಸ್ಥಗಿತಗೋಳಿಸಲಾಗಿದೆ. ಒಟ್ಟು ೯೦೧ ರಲ್ಲಿ ೫೩೧ ಖರೀದಿಗಳು ಆಗಿವೆ ಇನ್ನುಳಿದ ಕಂದಾಯ ಗ್ರಾಮಗಳ ರಜಿಸ್ಟರ್ ಕೂಡಾ ತುರ್ತು ಮಾಡಿಕೊಡಲಾಗುವುದು ಎಂದು ಸಬ್ ರಜಿಸ್ಟಾರ್ ಶ್ರೀಮತಿ ಅಂಜಲಿ ಹೇಳಿದರು.
ಬಳ್ಳೊಳ್ಳಿ ಕಂದಾಯ ಅಧಿಕಾರಿ ಪಂಡಿತ ಕೊಡಹೊನ್ನ ,ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ಎಸ್.ಆರ್ ಮುಜಗೊಂಡ , ಬಸನಾಳ ಗ್ರಾಮದ ಗ್ರಾಮ ಸಹಾಯಕ ಸಿಕಿಂದರ್ , ಗ್ರಾಮ ಸಹಾಯಕ ಹುಸೇನಿ ಜಿಗಜಿಣಗಿ ಉಪಸ್ಥಿತರಿದ್ದರು.
ಇಂಡಿ ಉಪನೋಂದಣಾಧಿಕಾರಿ ಅಂಜಲಿ. ಸಿ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ರಜಿಸ್ಟರ್ ಪ್ರತಿ ನೀಡುತ್ತಿರುವುದು.



















