ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ನಸೀರ್ ಅಹ್ಮದ್ ಅವರು ಸದನದ ಘನತೆ ಮತ್ತು ಸಂಸದೀಯ ಮೌಲ್ಯಗಳನ್ನು ಗಾಳಿಗೆ ತೂರಿ, ಸನ್ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರನ್ನು “ದೇಶದ್ರೋಹಿ” “ದೇಶಕ್ಕೆ ದೊಡ್ಡ ದ್ರೋಹ ಮಾಡಿದವರು” ಎಂದು ಹೇಳಿರುವುದು ಅತ್ಯಂತ ಅಮಾನವೀಯ ಮತ್ತು ಖಂಡನೀಯ ಕೃತ್ಯವಾಗಿದೆ.
ಸಾಂವಿಧಾನಿಕ ಹುದ್ದೆಗೆ ಅಪಮಾನ: ಪ್ರಧಾನ ಮಂತ್ರಿ ಎಂಬುದು ಕೇವಲ ವ್ಯಕ್ತಿಯಲ್ಲ, ಅದು ನೂರಾರು ಕೋಟಿ ಭಾರತೀಯರ ಆಶೋತ್ತರಗಳ ಪ್ರತೀಕವಾದ ಒಂದು ಸಾಂವಿಧಾನಿಕ ಹುದ್ದೆ. ಅಂತಹ ಸ್ಥಾನದಲ್ಲಿರುವವರನ್ನು ವೈಯಕ್ತಿಕ ದ್ವೇಷಕ್ಕಾಗಿ ನಿಂದಿಸುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ ಮತ್ತು ಅಪಮಾನ.
ಸದನದ ಘನತೆ ಕುಸಿತ: ಪವಿತ್ರವಾದ ವಿಧಾನ ಪರಿಷತ್ತಿನ ಒಳಗಡೆ ಕಾಂಗ್ರೆಸ್ ಸದಸ್ಯರುಗಳು ಪದೇ ಪದೇ ಇಂತಹ ಕೀಳುಮಟ್ಟದ ಭಾಷಾ ಪ್ರಯೋಗ ಮಾಡುತ್ತಿರುವುದು ಸದನದ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಿದೆ.
ಕಾಂಗ್ರೆಸ್ ಸಂಸ್ಕೃತಿಯ ಅನಾವರಣ: ಜನಪ್ರತಿನಿಧಿಯೊಬ್ಬರು ಈ ರೀತಿ ವರ್ತಿಸುತ್ತಿದ್ದರೂ, ಮುಖ್ಯಮಂತ್ರಿಗಳು ಮೌನವಾಗಿರುವುದು ಅವರ ಪಕ್ಷದ ನೈತಿಕ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.
”ಟೀಕೆಗಳು ಆರೋಗ್ಯಕರವಾಗಿರಲಿ, ಆದರೆ ಅದು ದ್ವೇಷದ ಹಾದಿ ಹಿಡಿಯಬಾರದು. ದೇಶದ ಪ್ರಧಾನಿಯನ್ನು ಹೀಯಾಳಿಸುವುದು ಇಡೀ ರಾಷ್ಟ್ರವನ್ನು ಹೀಯಾಳಿಸಿದಂತೆ”.
ಈ ಕೂಡಲೇ ಶ್ರೀ ನಸೀರ್ ಅಹ್ಮದ್ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಮತ್ತು ತಮ್ಮ ಮಾತುಗಳನ್ನು ಹಿಂಪಡೆಯಬೇಕು. ಇಂತಹ ಬೇಜವಾಬ್ದಾರಿ ವರ್ತನೆಯು ಪ್ರಜಾಪ್ರಭುತ್ವದ ಆಶಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಹಾಗೂ ಗೌರವಾನ್ವಿತ ಸಭಾಪತಿಗಳು ಇವರನ್ನು ತಕ್ಷಣವೇ ಸದನದಿಂದ ಅಮಾನತ್ತು ಪಡಿಸಬೇಕೆಂಬುದು ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ್ ಜೋಶಿ ಆಗ್ರಹಿಸಿದ್ದಾರೆ



















