ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ:ವೃತ್ತ ನಿರೀಕ್ಷಕರು ಆನಂದ್ ಮೂರ್ತಿ
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಏರ್ಪಡಿಸಲಾಗಿತ್ತು.
ವೃತ್ತ ನಿರೀಕ್ಷಕರಾದ ಆನಂದ್ ಮೂರ್ತಿ ಮಾತನಾಡಿ ಗಣೇಶನನ್ನು ಪ್ರತಿಷ್ಠಾಪಿಸುವುದು ವಿಜ್ಞಗಳು ನಿವಾರಣೆಯಾಗಲಿ ಎಂದು ಆದರೆ ಯುವ ಪೀಳಿಗೆ ಮೋಜು ಮಸ್ತಿಗೆ ಸೀಮಿತರಾಗಿರುತ್ತಾರೆ. ಇಂದಿನ ಯುವ ಪೀಳಿಗೆಯು ಇದನ್ನು ಬದಲಾಯಿಸಿ ಕೊಳ್ಳಬೇಕು.ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನರನ್ನು ಒಟ್ಟಿಗೆ ಸೇರಿಸುವ ಸಲುವಾಗಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಿದ್ದರು ಏಕೆಂದರೆ ಆ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಸೇರಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಒಟ್ಟಿಗೆ ಸೇರುತ್ತಿದ್ದರು. ಯಾವುದೇ ಅಹಿತಕರ ಘಟನೆಯಾಗದಂತೆ ಆ ಗಣೇಶ ಮಂಡಳಿಗಳು ತಮ್ಮ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು.
ಮಣ್ಣಿನ ಗಣೇಶ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಬೇಕು.
ಗಣೇಶ ಕೂರಿಸುವ ಸ್ಥಳ ರಸ್ತೆ ಸಂಚಾರಕ್ಕೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು.ಡಿಜೆ ಕಡ್ಡಾಯವಾಗಿ ನಿಷೇಧ ವಾಗಿರುವುದರಿಂದ ಯಾರೂ ಉಪಯೋಗಿಸಬಾರದು. ಅದರ ಬದಲಾಗಿ ತಮಟೆ ಡೋಲುಗಳನ್ನು ಉಪಯೋಗಿಸಿಕೊಳ್ಳಿ.
ತಮ್ಮ ತಮ್ಮ ಗಣೇಶ ಮಂಡಳಿಯು ಸ್ವಯಂ ಸೇವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಂಡಿರಬೇಕು.
ರಾತ್ರಿ 9 ಗಂಟೆ ಒಳಗೆ ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕು. ಎಂಬುದಾಗಿ ಸಲಹೆ ಸೂಚನೆಯನ್ನು ನೀಡಿದರು.
ಗ್ರಾಮ ಆಡಳಿತಾಧಿಕಾರಿ ಶೇಷಣ್ಣ ಮಾತನಾಡಿ ಸರ್ಕಾರದ ಸುತ್ತೋಲೆಯನ್ನು ಎಲ್ಲರೂ ಅನುಸರಿಸಬೇಕು.ಕಂದಾಯ ಇಲಾಖೆಯಿಂದ ಏಕಗವಾಕ್ಷಿ ಕೇಂದ್ರವನ್ನು ತೆರೆಯಲಾಗುತ್ತದೆ. ಅದರಿಂದ ಈ ಕೇಂದ್ರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಎಲ್ಲರೂ ಸಹ ಅನುಮತಿಯನ್ನು ಪಡೆದುಕೊಳ್ಳಬೇಕು ಎಂಬುದಾಗಿ ಸಲಹೆ ನೀಡಿದರು.
ಸೆಸ್ಕಾಂ ಎಸಿ ಆನಂದ್ ಮಾತನಾಡಿ ಗಣೇಶ್ ಮೂರ್ತಿ ಕುರಿಸುವಾಗ ವಿದ್ಯುತ್ ಕಂಬಕ್ಕೆ ನೇರವಾಗಿ ವಿದ್ಯುತ್ ಸಂಪರ್ಕ ಮಾಡಬಾರದು, ಉತ್ತಮವಾದ ವೈರ್ ಗನ್ನು ಬಳಸಬೇಕು. ಲೈಟಿಂಗ್ಸ್ ಬಳಸುವವರು ಮುಂಚಿತವಾಗಿ ಎಷ್ಟು ಲೈಟಿಂಗ್ ಬಳಸುತ್ತೀರಾ ಎಂದು ನಮಗೆ ತಿಳಿಸಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯತಿ ಅಧಿಕಾರಿ ಪ್ರಕಾಶ್ ಮಾತನಾಡಿ, ಗಣೇಶ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು. ಅನುಮತಿ ಇಲ್ಲದೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಿಲ್ಲ.ಗಣೇಶ ಮೂರ್ತಿ ವಿಸರ್ಜಿಸಲು ಪಟ್ಟಣ ಪಂಚಾಯತಿ ವತಿಯಿಂದ ಹೊಂಡವನ್ನು ಮಾಡಲಾಗುತ್ತದೆ, ನೀವುಗಳು ಗಣೇಶ ಮೂರ್ತಿಯನ್ನು ಹೊಂಡದಲ್ಲಿ ವಿಸರ್ಜಿಸಬೇಕು ಎಂದು ತಿಳಿಸಿದರು.
ಅಗ್ನಿಶಾಮಕ ಸಿಬ್ಬಂದಿಯಾದ ಮಹೇಶ್ ಮಾತನಾಡಿ ರಸ್ತೆಯಲ್ಲಿ ಗಣೇಶ ಮೂರ್ತಿನ್ನು ಕೂರಿಸಬಾರದು, ಅಗ್ನಿ ನಿರೋಧಕ ವಸ್ತುಗಳಿಂದ ಮಂಟಪವನ್ನು ತಯಾರಿಸಬೇಕು. ಯಾವುದೇ ಅಗ್ನಿ ಅವಘಡಗಳು ನಡೆಯದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ , ಮುಖಂಡರು ಜಸ್ಸಿಮ್ ಪಾಶ, ಶಿವಕುಮಾರ್, ಅಭಿಲಾಶ್, ವೆಂಕಟೇಶ್, ಪಾರ್ಥ ,ರಾಘು ನಿತಿನ್ ಹಾಗೂ ಸುತ್ತ ಮುತ್ತಲಿನ ಗ್ರಾಮದ ಯುವಕರು ಹಾಜರಿದ್ದರು .


















