ಬಂಜೆತನ-ಮಧುಮೇಹ ಉಚಿತ ತಪಾಸಣೆ ಶಿಬಿರ
ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆ ಪಕ್ಕದಲ್ಲಿರುವ ಮಾಗಿ ಕಾಂಪ್ಲೆಕ್ಷನಲ್ಲಿ ಫೆ.15ರಂದು ಆಯುರ್ವೇದ ತಜ್ಞರಾಗಿದ್ದ ಹಂಡರಗಲ್ ಗ್ರಾಮದ ಡಾ|ಅಬೀದ ಹುಸೇನ ಮಾಗಿ ಅವರ ಸ್ಮರಣಾರ್ಥ ಬಂಜೆತನ ಮತ್ತು ಮಧುಮೇಹ ಉಚಿತ ತಪಾಸಣಾ ಶಿಬಿರ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ವಿಜಯಪುರದ ಬಂಜೆತನ ಮತ್ತು ಮಧುಮೇಹ ತಜ್ಞ ಡಾ|ಎ.ಎ.ಮಾಗಿ ಹೇಳಿದರು
ಪಟ್ಟಣದ ಆಲಮಟ್ಟಿ ರಸ್ತೆ ಮಾಗಿ ಕಾಂಪ್ಲೆಕ್ಸ್ ನಲ್ಲಿ
ಮಂಗಳವಾರ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆಯ ವರು ಈ ಭಾಗದಲ್ಲಿ ಆಯುರ್ವೇದ ಚಿಕಿತ್ಸೆ ನೀಡುವಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅವರ ಪ್ರೇರಣೆಯಿಂದಲೇ ನಾನು ಕೂಡ ಆಯುರ್ವೇದ ಚಿಕಿತ್ಸೆ ಕೊಡುವುದನ್ನು ರೂಢಿಸಿಕೊಂಡಿದ್ದೇನೆ. ಆಯುರ್ವೇದಕ್ಕೆ ಎಂಥ ರೋಗವನ್ನಾದರೂ ವಾಸಿ ಮಾಡುವ ಶಕ್ತಿ ಇದೆ. ಆದರೆ ಜನಸಾಮಾನ್ಯರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಆಲೋಪತಿ ಚಿಕಿತ್ಸೆಗಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ. ಕಡುಬಡವರಿಗೆ ಅಷ್ಟೊಂದು ಹಣ ಖರ್ಚು ಮಾಡುವುದು ಸಾಧ್ಯವಿಲ್ಲ, ಇದನ್ನು ಮನಗಂಡು ಈ ಶಿಬಿರ ಏರ್ಪಡಿಸಲಾಗುತ್ತಿದೆ ಎಂದರು.
ಇತ್ತೀಚಿನ ಮಾರಕ ರೋಗ ಎಂದೇ ಕರೆಸಿಕೊಳ್ಳುವ ಮಧುಮೇಹವೂ ಇದಕ್ಕೆ ಒಂದು ಕಾರಣವಾಗಿದೆ. ಅತಿಯಾದ ಮಧುಮೇಹ ಲೈಂಗಿಕ ನಿಶ್ಯಕ್ತಿ ಹೆಚ್ಚಿಸಿ ನರಗಳ ಶಕ್ತಿ ಕುಗ್ಗಿಸುತ್ತದೆ ಎನ್ನುವುದು ಎಷ್ಟೋ ಜನಕ್ಕೆ ಗೊತ್ತಿಲ್ಲ, ಬಂಜೆತನಕ್ಕೂ ಇದಕ್ಕೂ ನೇರ ಸಂಬಂಧ ಇದೆ. ಸಾರ್ವಜನಿಕರು ಇದನ್ನು ಮುಕ್ತವಾಗಿ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ತಮಗಿರುವದೌರ್ಬಲ್ಯಮುಚ್ಚಿಟ್ಟುಕೊಂಡು ಸುಂದರ ದಾಂಪತ್ಯ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಇಂಥವರಿಗೆ
ಶಿಬಿರದಲ್ಲಿ ಕೌನ್ಸೆಲಿಂಗ್ ನಡೆಸಿ ಮಾರ್ಗ ದರ್ಶನ ನೀಡಲಾಗುತ್ತದೆ ಎಂದರು.
ಶಿಬಿರದಲ್ಲಿ ಉಚಿತ ತಪಾಸಣೆ, ಕೌನ್ಸೆಲಿಂಗ್ ಸೇರಿ ಇನ್ನಿತರ ಯಾವುದೇ ವಿಚಾರಗಳಿಗೆ ಸಂಬಂಧಿಸಿದಂತೆ ಮುದ್ದೇಬಿ ಹಾಳ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಮೊ.94482 10446 (ಡಾ|ಎ.ಎ.ಮಾಗಿ), 948015 3322 (ಇಲಿಯಾಸ್ ಮಾಗಿ) ಸಂಪರ್ಕಿಸಿ ಹೆಸರು ಬಸವೇಶ್ವರ ನೋಂದಾಯಿಸಿಕೊಳ್ಳಬೇಕು. ವೃತ್ತದಲ್ಲಿರುವ ಮಾಗಿ ಮೆಡಿಕಲ್ ಶಾಪನಲ್ಲೂ ಹೆಸರು ನೋಂದಾಯಿಸಲು ಅವಕಾಶವಿದೆ ಎಂದು ತಿಳಿಸಿದರು. ಇಲಿಯಾಸ್ ಮಾಗಿ, ಅನ್ವರಹುಸೇನ ಮಾಗಿ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಇತ್ತೀಚಿನ ದಿನಗಳಲ್ಲಿ ಬಂಜೆತನ ನಿವಾರಣೆಯ ಹೆಸರಿನಲ್ಲಿ ಸಾಕಷ್ಟು ಆಸ್ಪತ್ರೆಗಳು ತಲೆ ಎತ್ತಿವೆ. ಆದರೆ ಯಾವುದೇ ಆಸ್ಪತ್ರೆಯಲ್ಲಿ ಬಂಜೆತನ ನಿವಾರಣೆಗೆ ಯಾವುದೇ ಆರೋಗ್ಯ ಯೋಜನೆಯಡಿ ಉಚಿತ ಚಿಕಿತ್ಸೆ ಸಿಗುವ ವ್ಯವಸ್ಥೆಯನ್ನು ಸರ್ಕಾರ ಮಾಡಿಲ್ಲ. ಈ ಸೌಲಭ್ಯವನ್ನೂ ಕಲ್ಪಿಸಿಲ್ಲ. ರಾಜ್ಯದ ಆರೋಗ್ಯ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಉಚಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಯೋಜನೆಯಡಿ ಬಂಜೆತನ ನಿವಾರಣೆಗೂ ಚಿಕಿತ್ಸೆ ದೊರಕುವಂತೆ ಮಾಡಿದರೆ ಬಡಜನರು ನೆಮ್ಮದಿಯ ಕೌಟುಂಬಿಕ ಜೀವನ ನಡೆಸುವುದು ಸಾಧ್ಯವಾಗುತ್ತದೆ ಎಂದರು.
ಡಾ| ಎ.ಎ.ಮಾಗಿ, ಮುದ್ದೇಬಿಹಾಳ