ಇಂದು ಇಂಡಿ ನಗರಸಭೆ ಕಾರ್ಯಾಲಯ ಲೋಕಾರ್ಪಣೆ..ಹೇಗಿದೆ ಚಿತ್ರಣ..?
ಇಂಡಿ: ಇಂಡಿಯನ್ನು ಜಿಲ್ಲೆ ಮಾಡಬೇಕೆಂಬ ಶಾಸಕ ಯಶವಂತ್ರಾಯಗೌಡ ಪಾಟೀಲರ ಕನಸಿಗೆ ಮತ್ತೊಂದು ಮೈಲುಗಲ್ಲು ದೊರೆತಿದ್ದು ಇಂಡಿ ಪುರಸಭೆಯನ್ನು ಡಿ.೧ ರಿಂದಲೇ ಜಾರಿಗೆ ಬರುವಂತೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಿ ಸರಕಾರ ಆದೇಶ ಹೊರಡಿಸಿದೆ. ಡಿ. ೨೩ ರಂದು ನಗರಸಭೆ ಕಾರ್ಯಾಲಯ ಲೋಕಾರ್ಪಣೆ ಈಗಾಗಲೆ ಸಿಧ್ಧತೆ ಆರಂಭವಾಗಿದೆ.
ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಸದಸ್ಯರು ಅನುಮೋದಿಸಿದ್ದರು. ಸರ್ಕಾರ ಗೆಜೆಟ್ ನೋಟಿಫಿಕೇಷನ್ ನಂತರ ಪುರಸಭೆ ನಗರಸಭೆಯನ್ನಾಗಿ ಮೇಲ್ದೇರ್ಜೆಗೇರಿಸಿ ಅದೇಶಿಸಿರುವುದು ಪಟ್ಟಣದ ಜನತೆಗೆ ಸಂತಸ ತಂದಿದೆ.
ನಗರಸಭೆಗೆ ಅನುದಾನ ಹೆಚ್ಚು:
ಪುರಸಭೆಯನ್ನು ರಾಜ್ಯ ಸರ್ಕಾರ ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶಿಸಿರುವುದರಿಂದ ನಗರದ ಅಭಿವೃದ್ಧಿಗೆ ಸರ್ಕಾರದ ಅನುದಾನಗಳು ಪ್ರಯೋಜನವಾಗಲಿದೆ. ಪುರಸಭೆಯು ನಗರಸಭೆ ಮೇಲ್ದರ್ಜೆಗೆ ಏರಿರುವುದರಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅನುದಾನಗಳು ಯೋಜನೆಗಳು ಸವಲತ್ತುಗಳು ಹೆಚ್ಚಾಗುವ ಭರವಸೆ ಜನ ಸಾಮಾನ್ಯರಲ್ಲಿ ಮೂಡಿದೆ.
ಡಿ. ೨೩ ರಂದು ನಗರಸಭೆ ಕಾರ್ಯಾಲಯ ಇಂಡಿ ಹಾಗೂ ನಗರ ಯೋಜನಾ ಪ್ರಾಧಿಕಾರ ಇಂಡಿ ಕಚೇರಿಗಳ ಪ್ರಾರಂಭೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಪುರಸಭೆ ಇದ್ದ ಸಂದರ್ಭದಲ್ಲಿ ೨೩ ವಾರ್ಡಗಳಿದ್ದು, ಈಗ ನಗರಸಭೆಯಾಗಿ ಮಾರ್ಪಟ್ಟಿದ್ದಕ್ಕೆ ೩೧ ವಾರ್ಡಗಳಾಗಿ ವಿಂಗಡಿಸಲಾಗಿದೆ.
ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ನಗರಾಭಿವೃಧ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್, ಕಬ್ಬು ಅಭಿವೃಧ್ಧಿ, ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಯಶವಂತ್ರಾಯಗೌಡ ಪಾಟೀಲ ವಹಿಸಲಿದ್ದಾರೆ.
ಅಧಿಕಾರ ಅವಧಿಯಲ್ಲಿ ಮಾಡಿರುವ ಕೆಲಸಗಳು ಶಾಶ್ವತವಾಗಿರುತ್ತವೆ. ರಾಜ್ಯದಲ್ಲಿ ನಮ್ಮದೇ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವುದರಿಂದ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಅನುದಾನಗಳನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ನಾನು ಕೊಟ್ಟ ಮಾತಿನಂತೆ ನಾಣು ಕಾರ್ಯ ಮಾಡುತ್ತಿದ್ದೇನೆ. ಇಂಡಿಯನ್ನು ನಗರಸಭೆಯನ್ನಾಗಿ ಮಾಡಿದ್ದೇನೆ. ಜಿಲ್ಲೆಯಾಗುವ ಎಲ್ಲ ಅರ್ಹತೆ ಈಗ ಇಂಡಿಗೆ ಬಂದಿದೆ. ಮುಂದೆ ಜಿಲ್ಲಾ ವಿಂಗಡಣೆಯಾಗುವ ಸಂದರ್ಭ ಬಂದರೆ ಆ ಸರದಿಯಲ್ಲಿ ನಮ್ಮ ಇಂಡಿ ಮೊದಲಿಗಿರುತ್ತದೆ.
ಯಶವಂತ್ರಾಯಗೌಡ ಪಾಟೀಲ, ಶಾಸಕರು.
ಇಂಡಿ ಮತಕ್ಷೇತ್ರ ಶಾಸಕ ಯಶವಂತ್ರಾಯಗೌಡ ಪಾಟೀಲರ ದೂರದೃಷ್ಠಿಯಿಂದ ಈಗ ಅಭಿವೃಧ್ಧಿ ಪಥದತ್ತ ಸಾಗುತ್ತಿದೆ. ಪುರಸಭೆಯಿಂದ ನಗರ ಸಭೆಯಾಗಿ ಮೇಲ್ದರ್ಜೆಗೇರಿಸಿದ್ದು ನಾಗರಿಕರಿಗೆ ಸಂತಸ ತಂದಿದೆ. ನಗರಸಭೆಯಾದರೆ ಅನುದಾನವೂ ಹೆಚ್ಚಿಗೆ ಬರಲಿದೆ. ಜಿಲ್ಲೆ ಮಾಡಬೇಕೆಂಬ ಕನಸಿಗೆ ನಗರಸಭೆ ಒಂದು ಗರಿಯಾಗಿದೆ.
ಹುಚ್ಚಪ್ಪ ತಳವಾರ ಕಾಂಗ್ರೆಸ್ ಮುಖಂಡ ಬುಯ್ಯಾರ (ಇಂಡಿ)
ಇಂಡಿ: ಇಂಡಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದರಿಂದ ನಗರಸಭೆ ನಾಮಫಲಕ ಅಳವಡಿಸಿರುವುದು.



















