ಇಂಡಿ | ದಲಿತ ವಿರೋಧಿ ಡಿವೈಎಸ್ಪಿ ವರ್ಗಾವಣೆಗೆ ಆಗ್ರಹ : ಜಿತೇಂದ್ರ ಕಾಂಬಳೆ ಆರೋಪ
ಇಂಡಿ : ಇಲ್ಲಿನ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಅವರು ಶ್ರೀಮಂತರ ಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅನ್ಯಾಯಕ್ಕೆ ಒಳಗಾದ ಬಡವರು ಅವರ ಬಳಿ ನ್ಯಾಯಕ್ಕಾಗಿ ಹೋದರೆ, ನ್ಯಾಯ ಒದಗಿಸಿಕೊಡದೇ,ಎಜಂಟರ್ ಮೂಲಕ ಹಣ ಪಡೆದು ಅನ್ಯಾಯ ಮಾಡುತ್ತಿದ್ದಾರೆ ಎಂದು ಆರ್ಪಿಐ (ಎ) ರಾಜ್ಯ ಕಾರ್ಯಾಧ್ಯಕ್ಷ ಜಿತೇಂದ್ರ ಕಾಂಬಳೆ ಆರೋಪಿಸಿದರು.
ಅವರು ಪಟ್ಟಣದ ಖಾಸಗಿ ಹೊಟೇಲ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಡಿವೈಎಸ್ಪಿ ಅವರು ಜಾತಿ ವಿರೋಧಿ ಕೆಲಸ ಮಾಡುತ್ತಿದ್ದು, ಸಂಪೂರ್ಣ ಭೃಷ್ಠಾಚಾರದಲ್ಲಿ ಮುಳುಗಿದ್ದಾರೆ. ಎಸ್ಪಿ ಸಾಹೇಬರ ಮಾತು ಸಹ ಕೇಳದ ಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಶಿರಗೂರ ಗ್ರಾಮದ ಒರ್ವ ದಲಿತನ ಭೂಮಿ ಬೇರೆಯವರು ಬಡ್ಡಿಯಲ್ಲಿ ಒತ್ತಿಯಾಗಿ ಇಟ್ಟುಕೊಂಡಿದ್ದು, ಈ ಕುರಿತು ಎಸ್ಪಿ ಸಾಹೇಬರ ಬಳಿ ಹೋದಾಗ ಅವರು ಡಿವೈಎಸ್ಪಿ ಅವರಿಗೆ ಕರೆ ಮಾಡಿ, ಆ ಜಮೀನು ಭೂಸುಧಾರಣೆ ಕಾಯ್ದೆಯಲ್ಲಿ ಎಸ್ಸಿ,ಎಸ್ಟಿ ಅವರಿಗೆ ನೀಡಿದ ಭೂಮಿಯಾಗಿದ್ದು,ಅದನ್ನು ಮರುಳಿ ಕೊಡಿಸಲು ಪ್ರಯತ್ನಿಸಬೇಕು ಎಂದು ಹೇಳಿದರೂ ಅವರ ಮಾತಿಗೆ ಬೆಲೆ ನೀಡದೆ, ಹಣ ನೀಡಿದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತರು ದೌರ್ಜನ್ಯಕ್ಕೆ ಒಳಗಾಗಿ ನ್ಯಾಯಕ್ಕಾಗಿ ಡಿವೈಎಸ್ಪಿ ಅವರ ಬಳಿ ಬಂದರೆ ಅವರ ಪ್ರಕರಣ ದಾಖಲಿಸಿಕೊಳ್ಳದೆ ವಿಳಂಬ ಮಾಡುತ್ತಿದ್ದಾರೆ, ಇನ್ನೊಂದು ಪಾರ್ಟಿ ಹಣ ನೀಡುತ್ತಾರೆ ಎಂದು ಕಾದು ಪ್ರಕರಣ ದಾಖಲಿಸಿಕೊಳ್ಳದೆ ವಿಳಂಬ ಮಾಡುತ್ತಿದ್ದು, ರೌಡಿ ಸೀಟರ್ಗಳನ್ನು ತಂದು ಅವರಿಂದ ಹಣ ಪಡೆದು ಅವರನ್ನು ಬಿಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಜಯಪುರದ ಖಡಕ್ ಎಸ್ಪಿ ಸಾಹೇಬರು ಜಿಲ್ಲೆಯಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮಧ್ಯ ಮಾರಾಟವಾಗುವುದನ್ನು ತಡೆಯಲು ಶ್ರಮಿಸುತ್ತಿದ್ದರೆ,ಇಂಡಿ ಡಿವೈಎಸ್ಪಿ ಅವರು ಅಕ್ರಮ ಮಧ್ಯ ಮಾರಾಟಗಾರರಿಂದ ಹಣ ಪಡೆದು ಅಕ್ರಮ ಮಧ್ಯ ಮಾರಾಟವಾಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ಕೂಡಲೆ ಇಂಡಿ ಡಿವೈಎಸ್ಪಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು.ಇಲ್ಲವಾದರೆ ವಾರದೊಳಗಾಗಿ ನಮ್ಮ ಬೇಡಿಕೆ ಈಡೇರದಿದ್ದರೆ, ಡಿವೈಎಸ್ಪಿ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಆರ್ಪಿಐ(ಎ) ತಾಲೂಕು ಅಧ್ಯಕ್ಷ ಚಂದ್ರಶೇಖರ ಮೇಲಿನಮನಿ, ಪರಶುರಾಮ ಉಕ್ಕಲಿ, ಸುಖದೇವ ಮೇಲಿನಕೇರಿ, ಫಾರುಕ್ ಶಾಮಣ್ಣನವರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.