ಸರ್ವತೋಮುಖ ಅಭಿವೃದ್ಧಿಗಾಗಿ ಇಂಡಿ ಜಿಲ್ಲೆ ಅವಶ್ಯಕ : ಮಾಜಿ ಸಚಿವ ಪಟ್ಟಣಶೆಟ್ಟಿ
ಇಂಡಿ: ಇಂಡಿ ನೂತನ ಜಿಲ್ಲೆಯಾಗಬೇಕೆಂದು ಹೋರಾಟಗಳು ತೀವ್ರ ಸ್ವರೂಪ ಪಡೆಯುತ್ತಿರುವ
ಬೆನ್ನಲ್ಲೇ, ಪುರಸಭೆಯ ಸರ್ವ ಪಕ್ಷದ ಸದಸ್ಯರು
ಇಂಡಿ ಜಿಲ್ಲೆಯನ್ನಾಗಿಸುವಂತೆ ಠರಾವು ಪಾಸ್ ಮಾಡಿದ್ದರು.
ಈಗ ಬಿಜೆಪಿ ಪಕ್ಷದ ಮುಖಂಡ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಕೂಡ ಇಂಡಿ ಜಿಲ್ಲೆಯಾಗಲು ಸಹಮತ ವ್ಯಕ್ತಪಡಿಸಿದ್ದಾರೆ. ಗುರುವಾರ ಇಂಡಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಕೇಳಿದ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದ ಅವರು, ಇಂಡಿ ಪ್ರತ್ಯೇಕ ಜಿಲ್ಲೆಯಾಗಲು ಭೌಗೋಳಿಕವಾಗಿ ಮತ್ತು ಎಲ್ಲ ವಿಧದಲ್ಲೂ ಅರ್ಹವಿದೆ. ಈಗಾಗಲೆ ಇಂಡಿ ಕೇಂದ್ರ ಸ್ಥಾನದಲ್ಲಿ ಜಿಲ್ಲಾ ಕಚೇರಿಗೆ ಬೇಕಾಗುವ ಕಟ್ಟಡಗಳು ಇವೆ.
ರೈಲು ಸಂಚಾರ, ರಾಷ್ಟ್ರೀಯ ಹೆದ್ದಾರಿ, ಕೈಗಾರಿಕಾ ಪ್ರದೇಶಕ್ಕೆ ಸ್ಥಳಾವಕಾಶ ಸಹ ಇದೆ. ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ, ಚಡಚಣ ಭಾಗಗಳಿಗೆ ಮಧ್ಯ ಭಾಗದಲ್ಲಿ ಇಂಡಿ ಇರುವ ಕಾರಣ ಇಂಡಿಯನ್ನು ಜಿಲ್ಲಾ
ಕೇಂದ್ರ ಮಾಡಿದರೆ ಈ ಎಲ್ಲ ತಾಲ್ಲೂಕುಗಳ ಜನರು
ಇಂಡಿಗೆ ಬಂದು ಹೋಗಲು ಕೇವಲ 40-50 ಕಿ. ಮೀ
ಅಂತರವಿದೆ. ಉಳಿದ ತಾಲ್ಲೂಕುಗಳಲ್ಲಿ ರೈಲು ಸಂಚಾರ
ಸೇರಿದಂತೆ ಜಿಲ್ಲಾ ಕೇಂದ್ರವಾಗಲು ಬೇಕಾಗುವ
ಭೌಗೋಳಿಕ ಹಾಗೂ ವಿವಿಧ ಸೌಲಭ್ಯಗಳನ್ನು
ಹೊಂದಿಲ್ಲವಾದ್ದರಿಂದ ಇಂಡಿ ಜಿಲ್ಲೆ ಮಾಡಲು ನಮ್ಮ
ಸಹಮತವಿದೆ ಎಂದು ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ಇಂಡಿಯಲ್ಲಿ ಉಪವಿಭಾಗ ಕಚೇರಿಗಳು, ಅನ್ಯ ರಾಜ್ಯಗಳ
ನಗರಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲಕ್ಕಾಗಿ
ಜಿಲ್ಲೆಗೆ ಇರಬೇಕಾದ ರೇಲ್ವೆ ಸಂಪರ್ಕ, ಎರಡು
ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದೆ. ಇಂಡಿ ಪಟ್ಟಣದಲ್ಲಿ ರಾಜ್ಯ ಮಟ್ಟದ ಲಿಂಬೆ ಅಭಿವೃದ್ಧಿ ಮಂಡಳಿ, ಜಿಲ್ಲಾ ಮಟ್ಟದ ಹಲವಾರು ಕಛೇರಿಗಳು ಪ್ರಸ್ತುತ ಕಾರ್ಯ
ನಿವರ್ಹಿಸುತ್ತಿವೆ. ಅಲ್ಲದೆ ಇಂಡಿಯನ್ನು ಜಿಲ್ಲೆ ಮಾಡಬೇಕೆಂಬ ಕೂಗು ಐದಾರು ವರ್ಷಗಳ ಹಿಂದೆಯೇ ಆರಂಭವಾಗಿದೆ. ಹೀಗಾಗಿ ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಲು ಸಮಂಜಸವಾಗಿದೆ. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಉತ್ತರಿಸಿದರು.
ಇಂಡಿ: ಮಾಜಿಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ



















