ಪ್ರಧಾನಮಂತ್ರಿ ಭೀಮಾ ಫಸಲ್ ವಿಮಾ ಯೋಜನೆ ಅನುಷ್ಠಾನ
ಇಂಡಿ : ಪ್ರಸಕ್ತ ೨೦೨೪-೨೫ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ಭಿಮಾ(ವಿಮಾ) ಯೋಜನೇಯನ್ನು ಇಂಡಿ ತಾಲೂಕಿನಾದಂತ ಅನುಷ್ಟಾನಗೊಳಿಸಲಾಗಿದೆ ಎಂದು ಇಂಡಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ಆದ್ದರಿಂದ ಅಧಿಸೂಚಿಸಲಾದ ಬೆಳೆಗಳಿಗೆ ಮಾತ್ರ ವಿಮಾ ಕಂತು ಕಟ್ಟಬೇಕು. ಅದನ್ನು ಹೊರತು ಪಡಿಸಿ ಅನ್ಯ ಬೆಳೆಗಳಿಗೆ ಅನ್ವಯವಾಗುವುದಿಲ್ಲ. ಕಾರಣ ಇಚ್ಛೆ ಉಳ್ಳ ಭೂಮಿ ಹೊಂದಿದ ರೈತರು ಪಹಣ ಪತ್ರಿಕೆ(ಆರ್ಟಿಸಿ), ಬ್ಯಾಂಕ್ ಪಾಸ್ ಬುಕ್, ಆಧಾರ ಸಂಖ್ಯೆಯೊAದಿಗೆ ಎಫ್ಆಯ್ಡಿ( ಫ್ರೂಟ್ಸ್ ಐಡಿ) ಹೊಂದಿರುವ ರೈತರು ತಮ್ಮ ಹತ್ತಿರದ ಬ್ಯಾಂಕ್, ಗ್ರಾಮ ಒನ್ ಕೇಂದ್ರ ಹಾಗೂ ಸಿಎಸ್ಸಿ( ಕಾಮನ್ ಸರ್ವಿಸ್ ಸೇಂಟರ್)ಗಳಲ್ಲಿ ನಿಗದಿತ ಅವಧಿಯೊಳಗಾಗಿ ವಿಮಾ ಮಾಡಿಸಿಕೊಳ್ಳಬೇಕು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ತಾಲೂಕಿನ ಬೆಳೆಗಳಾದ ತೊಗರಿ ಗ್ರಾಮ ಪಂಚಾಯತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳಾದ ಮುಸುಕಿನ ಜೋಳ, ಸಜ್ಜೆ, ಹೆಸರು, ಉದ್ದು, ಸೂರ್ಯಕಾಂತಿ, ಹತ್ತಿ, ಶೇಂಗಾ, ಹುರುಳಿ, ಈರುಳ್ಳಿ, ಟೋಮ್ಯಾಟೊ, ಕೆಂಪು ಮೆಣಸಿನಕಾಯಿ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸಲಾಗಿದೆ.
ನೊಂದಣ ಮಾಡುವ ಬೆಳೆಗಳಾದ ಹೆಸರು, ಉದ್ದು ವಿಮಾ ಕಟ್ಟಲು ಜುಲೈ ೧೫ ಕೊನೆಯ ದಿನವಾಗಿದೆ. ಇನ್ನೂ ತೊಗರಿ, ಮುಸಕಿನ ಜೋಳ, ಸಜ್ಜೆ, ಶೇಂಗಾ, ಹತ್ತಿ, ಹುರುಳಿ, ಟೋಮ್ಯಾಟೊ ಇವುಗಳಿಗೆ ಜುಲೈ ೩೧ ವಿಮಾ ಕಟ್ಟಲು ಕಡೆಯ ದಿನವಾಗಿದೆ. ಸೂರ್ಯಕಾಂತಿ, ಕೆಂಪು ಮೆಣಸಿನಕಾಯಿ, ಈರುಳ್ಳಿ ಈ ಬೆಳೆಗಳಿಗೆ ವಿಮಾ ಕಟ್ಟಲು ಅಗಷ್ಟ ೧೬ ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬ್ಯಾಂಕ್ ಶಾಖೆ/ ರೈತ ಸಂಪರ್ಕ, ಓರಿಯಂಟಲ್ ಇನ್ನೂರನ್ಸ್ ಕಂಪನಿ (ದೂರವಾಣ ಸಂಖ್ಯೆ-೮೮೬೧೭೨೨೪೭೯೯) ಸಂಪರ್ಕಿಸಬೇಕು ಎಂದು ಮಹಾದೇವಪ್ಪ ಏವೂರ ತಿಳಿಸಿದ್ದಾರೆ.