ಬೂದಿಹಾಳ ಪಿ ಎನ್ ಗ್ರಾಮದಲ್ಲಿ ಕೇಂದ್ರ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿ ಹಳ್ಳ ಹಿಡಿದಿದೆ ಮೇಲ್ಮಟ್ಟದ ನೀರು ಸಂಗ್ರಹಗಾರ ಟ್ಯಾಂಕ್ ಕಾಮಗಾರಿ ಸರಿಯಾಗಿ ಕ್ಯೂರಿಂಗ್ ಮಾಡಿಲ್ಲವೆಂದು ಆರೋಪಿಸಿದರು.
ಕೆಲಸ ಮಾಡುವ ಗುತ್ತಿಗೆದಾರರಿಗೆ ಮತ್ತು ಜಿವಿಪಿಆರ್ ಪ್ಲಾನಿಂಗ್ ಮ್ಯಾನೇಜರ್ ಸಂತೋಷ ಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು.
ಮುದ್ದೇಬಿಹಾಳ ; ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟ ಪಂಚಾಯತ ವ್ಯಾಪ್ತಿಯಲ್ಲಿಯ ಬೂದಿಹಾಳ ಪಿ ಎನ್ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿ ಹಳ್ಳ ಹಿಡಿದಿದೆ ಮೇಲ್ಮಟ್ಟದ ನೀರು ಸಂಗ್ರಹಗಾರ ಟ್ಯಾಂಕ್ ಕಾಮಗಾರಿ ಸರಿಯಾಗಿ ಕ್ಯೂರಿಂಗ್ ಮಾಡಿಲ್ಲವೆಂದು ಆರೋಪಿಸಿ ಗ್ರಾಮದ ಮುಖಂಡರು ಕೆಲಸ ಮಾಡುವ ಗುತ್ತಿಗೆದಾರರಿಗೆ ಮತ್ತು ಜಿವಿಪಿಆರ್ ಪ್ಲಾನಿಂಗ್ ಮ್ಯಾನೇಜರ್ ಸಂತೋಷ ಗೆ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.
ಗ್ರಾಮದ ಮುಖಂಡರಾದ ಕಾಂತು ಮಣ್ಣೂರ, ಸಂಗಮೇಶ ನಾಗೂರ ಪರಶುರಾಮ ಹದ್ನೂರ, ವಿರೇಶ ಪ್ಯಾಟಿ, ವಿರೇಶ ಆಸಂಗಿ ಮಾತನಾಡಿ ಪ್ರತಿನಿತ್ಯ ನಾವು ಕಾಮಗಾರಿ ನಡೆಯುವ ಸ್ಥಳದಲ್ಲಿ ಸಂಚರಿಸುತ್ತೇವೆ ಇತ್ತಿಚೆಗೆ ಕಾಮಗಾರಿ ನಡೆದಿದೆ ನೀರು ಸಂಗ್ರಹದ ಟ್ಯಾಂಕರ್ ಕಾಮಗಾರಿ ಪ್ರಗತಿಯಲ್ಲಿದೆ ಆದರೆ ಕ್ಯೂರಿಂಗ್ ಸರಿಯಾಗಿ ಮಾಡುತ್ತಿಲ್ಲ ಸರಿಯಾಗಿ ನೀರನ್ನು ಹೊಡೆಯುತ್ತಿಲ್ಲ ಬೇಕಿದ್ದರೆ ನೋಡಿಯಂತ ಕ್ಯೂರಿಂಗ್ ಆಗದ ನೀರು ಸಂಗ್ರಹ ಟ್ಯಾಂಕರ್ ತೋರಿಸಿದರು ,ಟ್ಯಾಂಕರ್ ಫೌಂಡೇಶನ್ ಸರಿಯಾಗಿ ನೀರುಣಿಸದೆ ಮಣ್ಣು ಹಾಕಲಾಗಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯನ್ನು ಈ ಗುತ್ತಿಗೆದಾರರು ಹಾಳು ಮಾಡುತ್ತಿದ್ದಾರೆ ಇದು ಕಳಪೆ ಕಾಮಗಾರಿ ಆಗುತ್ತಿದೆ ಎಂದು ಆರೋಪಿಸಿದ ಮುಖಂಡರು ಬೇಜವಾಬ್ದಾರಿ ಕೆಲಸ ಮಾಡಬೇಡಿ ಎಂದು ತಾಕೀತು ಮಾಡಿದರು.
ಈ ಕಾಮಗಾರಿ ತಡೆಗೂಡೆ ಕಂಪೌಂಡ ಕಾಮಗಾರಿ ಮತ್ತು ಇತರೆ ಕಟ್ಟಡದ ಕಾಮಗಾರಿಗಳಿಗೂ ಸಹ ನೀರನ್ನು ಹೊಡೆಯದ ಕಾರಣ ಕ್ಯೂರಿಂಗ್ ಇಲ್ಲದೆ ಮಾಡಿರುವ ಸಿಮೆಂಟ್ ಬಿರುಕು ಬಿಟ್ಟದನ್ನು ತೋರಿಸಿ ಜಿವಿಪಿಆರ್ ಕಾಮಗಾರಿ ನೈಜತೆಯ ಕುರಿತು ಪ್ರಶ್ನಿಸಿದರು.
ಬೂದಿಹಾಳ ಪಿಎನ್ ಗ್ರಾಮದ ಸ್ಮಶಾನ ಜಾಗೆಯನ್ನು ಸದ್ಯ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಗುರುತಿಸಲಾಗಿತ್ತು ಕಂಪನಿಯವರು ಬೇರೆ ಜಾಗ ಕೂಡುವುದಾಗಿ ಹೇಳಿದ್ದರು ಇಲ್ಲಿಯವರೆಗೆ ಜಾಗೆ ನೀಡಿಲ್ಲ ,ಕೆಲ ಕಿರು ಕಾಲುವೆಯಲ್ಲಿ ಮಣ್ಣು ತುಂಬಿದೆ ಮತ್ತು ಕಂಪನಿಯ ಬಾರಿ ವಾಹನಗಳಿಂದ ರಸ್ತೆ ಹದಗೆಟ್ಟು ಹೋಗಿವೆ, ಪೈಪ್ ಲೈನ್ ಗೆ ರಸ್ತೆ ಅಗೆದು ಆ ಮಣ್ಣು ರಸ್ತೆಗೆ ಹಾಕುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಳೆಯಲ್ಲಿ ಈ ಮಣ್ಣಿನಿಂದ ಅನೇಕ ಬೈಕ್ ಸವಾರರು ಬಿದ್ದಿದ್ದಾರೆ ಯಾರಿಗಾದರೂ ಪ್ರಾಣಕ್ಕೆ ಅಪಾಯವಾದರೆ ಅದಕ್ಕೆ ನೀವೇ ಹೋಣೆಗಾರರು ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಗ್ರಾಮಸ್ಥರು ಸಂಭಂದಿಸಿದ ಇಲಾಖೆಯ ಅಧಿಕಾರಿಗಳು ,ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯವರು ಭೇಟಿ ನೀಡಿ ಕಾಮಗಾರಿ ಗುಣಮಟ್ಟ ಪರಿಶೀಲಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಗುಣಮಟ್ಟದ ಕಾಮಗಾರಿ ಮಾಡದೆ ಇದ್ದರೆ ಗ್ರಾಮಸ್ಥರೆಲ್ಲ ಉಗ್ರ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ವೇಳೆ ಕಾಂತು ಮಣ್ಣೂರ, ಸಂಗಮೇಶ ಗುಂಡಕನಾಳ,(ನಾಗೂರ) ವಿರೇಶ ಆಸಂಗಿ, ನರಸಪ್ಪ ಹದ್ನೂರ, ಪರಶುರಾಮ ಹದ್ನೂರ, ಭೀಮಣ್ಣ ಪೂಜಾರಿ ,ಬಸನಗೌಡ ಪಾಟೀಲ್, ವಿರೇಶ ಪ್ಯಾಟಿ, ರಾಘವೇಂದ್ರ ಹಿರೆಕುರಬರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.