ತಡವಲಗಾ ಗ್ರಾಮದಲ್ಲಿ ಡಿ-26 ರಿಂದ ಗುರುಲಿಂಗೇಶ್ವರ ಶಿವಾಚಾರ್ಯರ 82ನೇ ಪುಣ್ಯರಾಧನೆಯ ಜಾತ್ರಾ ಮಹೋತ್ಸವ
ಇಂಡಿ: ತಾಲೂಕಿನ ತಡವಲಗಾ ಗ್ರಾಮದಲ್ಲಿ ಮಹಾತಪಸ್ವಿ ಗುರುಲಿಂಗೇಶ್ವರ ಶಿವಾಚಾರ್ಯರ ೮೨ನೇ ಪುಣ್ಯರಾಧನೆಯ ಜಾತ್ರಾ ಮಹೋತ್ಸವ ಕಾರ್ಯಕ್ರಮ ಡಿಸೆಂಬರ್ ೨೬ ರಿಂದ ೩೧ ರವರೆಗೆ ಜರುಗಲಿದೆ ಎಂದು ಸಂಸ್ಥಾನ ಹಿರೇಮಠದ ಅಭಿನವ ಶಿವಯೋಗೇಂದ್ರ ದೇವರು ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. ೨೬ ರಿಂದ ೩೦ ರವರೆಗೆ ಪ್ರತಿದಿನ ಬೆಳಿಗ್ಗೆ ೫:೦೦ ಗಂಟೆಗೆ ಮಹಾ ತಪಸ್ವಿ ಗುರುಲಿಂಗೇಶ್ವರ ಶಿವಾಚಾರ್ಯರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಪೂಜೆ ನೆರವೇರಲಿದೆ. ಸಾಯಂಕಾಲ ೭:೦೦ ಗಂಟೆಯಿAದ ೮:೩೦ರವರೆಗೆ ಪುರಾಣರತ್ನ ಡಾ. ವಿರೂಪಾಕ್ಷ ದೇವರು ಗೊರನಾಳ ಇವರಿಂದ ಮಹಾಮಹೀಮ ಶ್ರೀ ಕೊಪ್ಪಳ ಗವಿಸಿದ್ದೇಶ್ವರ ಮಹಾಪುರಾಣ ಜರುಗಲಿದೆ.
ಡಿ. ೨೮ರ ರವಿವಾರರಂದು ಬೆಳಿಗ್ಗೆ ೬:೦೦ ಕ್ಕೆ ಶ್ರೀಮಠದ ಶವಯೋಗೇಂದ್ರ ದೇವರ ಇಷ್ಟಲಿಂಗ ಮಹಾಪೂಜೆಯ ನಂತರ ಮಹಾಕಾಳಿ, ಚಂಡಿಕಾ ಹೋಮ ನಡೆಯಲಿದ್ದು ಚಂಡಿಕಾ ಹೋಮವನ್ನು ಸೋಲಾಪುರದ ವೇದಮೂರ್ತಿ ಸಿದ್ದರಾಮ ಹಿರೇಮಠ ಹಾಗೂ ಬಳಗದವರು ನಡೆಸಲಿದ್ದಾರೆ.
ಡಿ. ೨೯ರಂದು ಬೆಳಿಗ್ಗೆ ೯:೦೦ಯಿಂದ ಸಾಯಂಕಾಲ ೬:೦೦ ವರೆಗೆ ಆಲಮೇಲದ ಭಾಗಣ್ಣ ಮದರಿ ಹಾಗೂ ಬಾಳಿಗೆರೆಯ ಲಕ್ಷ್ಮೀಬಾಯಿ ಇವರಿಂದ ಪ್ರಸಿದ್ಧ ಗೀಗಿ ಪದಗಳ ಕಾರ್ಯಕ್ರಮವಿದೆ.
ಡಿ. ೩೦ ರಂದು ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೬:೦೦ ವರೆಗೆ ಶ್ರೀ ಕೃಷ್ಣ ಪಾರಿಜಾತ ನಾಟಕ ದಯಾನಂದ ಜುಲ್ಫಿ ಸಾ. ಲೋಣಿ ಬಿ.ಕೆ ಹಾಗೂ ಸಂಗಡಿಗರಿAದ ಜರುಗಲಿದೆ.
ಅದೇ ದಿನ ರಾತ್ರಿ ೧೦ ಕ್ಕೆ ಶಿರಕನಹಳ್ಳಿಯ ಅಕ್ಕಮಹಾದೇವಿ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಡಿ. ೩೧ರ ಬುಧವಾರ ಬೆಳಗ್ಗೆ ೮ ಕ್ಕೆ ಲಿಂ. ಶಿವಯೋಗೇಂದ್ರ ಶಿವಾಚಾರ್ಯರ ಭಾವಚಿತ್ರ ಅಡ್ಡ ಪಲ್ಲಕ್ಕಿ ಮಹೋತ್ಸವ ವೈಶಿಷ್ಟವಾಗಿ ಸಕಲ ಕಳಸ ಕನ್ನಡಿವಾದ್ಯ ವೈಭವಗಳೊಂದಿಗೆ ಸಕಲ ಶರಣ- ಶರಣೆಯರು ಪಾಲ್ಗೊಂಡು ನೆರವೇರಿಸಲಿದ್ದಾರೆ.
ತದನಂತರ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಪುರಾಣ ಮಹಾಮಂಗಲ ಮತ್ತು ಧರ್ಮಸಭೆ. ನಡೆಯಲಿದೆ. ಪುರಾಣ ಮಹಾಮಂಗಳ ಹಾಗೂ ಧರ್ಮಸಭೆಯ ಪಾವನ ಸಾನಿಧ್ಯವನ್ನು ಮಸೂತಿ ಹಿರೇಮಠದ ಪ್ರಭು ಕುಮಾರ ಶಿವಾಚಾರ್ಯರು, ಸಿಂದಗಿ ಗಚ್ಚಿನಮಠದ ವಿಶ್ವ ಪ್ರಭುದೇವ ಶಿವಾಚಾರ್ಯರು, ಗೊರನಾಳ ಹಿರೇಮಠದ ಡಾ. ವಿರೂಪಾಕ್ಷ ದೇವರು ಆಗಮಿಸಿ… ಆಶೀರ್ವದಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಇಂಡಿ: ಅಭಿನವ ಶಿವಯೋಗೇಂದ್ರ ದೇವರು ಭಾವಚಿತ್ರ.




















