ಘತ್ತರಗಿ ಭಾಗಮ್ಮ ದೇವಿ ಚರಿತ್ರೆ ಅನಾವರಣ.!
ಭಾಗ್ಯದೇವತೆ ಭಾಗಮ್ಮಳ ಜಯಕಾರ ಝಗ ಮಗಿಸಿತು.!
ಇಂಡಿ – ನಗರದಲ್ಲಿ ಸರಕಾರಿ ಶಾಲೆಗಳಲ್ಲಿ ಮುಕಟ ಪ್ರಾಯವಾಗಿರುವ ಶಾಸಕರಿಂದ ದತ್ತು ಪಡೆದು ಮಾದರಿ ಶಾಲೆಯಾಗಿರುವ ಕೆ. ಜಿ. ಎಸ್. ಶಾಲಾ ವಾರ್ಷಿಕೋತ್ಸವದಲ್ಲಿ ಸುಕ್ಷೇತ್ರ ಘತ್ತರಗಿ ಭಾಗಮ್ಮಳ ಮಹೊನ್ನತವಾದ ಚರಿತ್ರೆ ಶಾಲಾ ಮಕ್ಕಳಿಂದ ಪ್ರದರ್ಶನಗೊಂಡು ನೆರೆದ ಜನರಿಂದ ಪ್ರಶಂಸೆಗೊಳಪಟ್ಟಿತು.
ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮ ಉದ್ಘಾಟನೆ ಲಿಂಬೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭೀಮಣ್ಣ ಕೌವಲಗಿ ಉದ್ಘಾಟನೆಗೊಳಿಸಿ ಮಾತನಾಡಿದರು.
ಹಲವಾರು ಜನರು ಸರಕಾರಿ ಶಾಲೆ
ಎಂದರೆ ಬೇಜಾರು ವ್ಯಕ್ತಪಡಿಸಿದ್ದು ಕಂಡಿದ್ದೆವೆ. ಅಂತಹ ಎಲ್ಲಾ ಸಂಕೋಚಿತ ಭಾವನೆಯುಳ್ಳ ಮನಸ್ಸಿನ ಜನರಿಗೆ ಈ ಕೆಜಿಎಸ್ ಸರಕಾರಿ ಶಾಲೆ ಉತ್ತರಿಸುತ್ತೆದೆ.
ಶಾಸಕರ ದತ್ತು ಪಡೆದ ಸರಕಾರಿ ಹೆಣ್ಣು ಮಕ್ಕಳ ಶಾಲೆ ಹಲವಾರು ಸೌಲಭ್ಯ ಸಂಪನ್ಮೂಲಗಳನ್ನು ಪಡೆದುಕೊಂಡು ಎರಡು ಮೂರು ದಶಕಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ವಿಶೇಷವಾಗಿ ಈ ಶಾಲೆಯಲ್ಲಿ ಐದು ನೂರು ವಿಧ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯಲ್ಲಿ ಕಲಿಕೆಯೊಂದಿಗೆ ಸಂಸ್ಕೃತಿ-ಸಂಸ್ಕಾರ ಜೀವನ ಕೌಶಲ್ಯಗಳನ್ನು ಕಲಿಸುವಲ್ಲಿ ಇಲ್ಲಿನ ಪ್ರಬುದ್ಧ ಶಿಕ್ಷಕರು ಕಂಕಣ ತೊಟ್ಟಿದ್ದಾರೆ ಎರಡು ಸ್ಮಾರ್ಟ ಕ್ಲಾಸ ಹೊಂದಿರುವ ಶಾಲೆ ಜಿಲ್ಲೆಗೆ ಮಾದರಿಯಾಗಿ ಹಲವಾರು ಪ್ರಶಸ್ತಿ ಪಾರಿತೋಷಕಗಳನ್ನು ಪಡೆದಿದೆ ಎಂದು ಮಾತನಾಡಿದರು.
ಇನ್ನೂ ಇದೆ ಸಂದರ್ಭದಲ್ಲಿ ನೂಡಲ್ ಅಧಿಕಾರಿ ಎಓ ಹೂಗಾರ ಮಾತನಾಡಿ, ಘತ್ತರಗಿ ಭಾಗ್ಯವಂತಿ ದೇವಿಯ ಜಾತ್ರಾ ಮಹೋತ್ಸವದ ಭಕ್ತೀಯ ಪರಾಕಾಷ್ಠೆ ರೂಪಕ, ಭರತನಾಟ್ಯ, ಎಲ್ಲಮ್ಮ ದೇವಿಯ ಜಾನಪದ ನೃತ್ಯ , ಒನಕೆ ಓಬವ್ವನ ಸಾಹಸ ಗೀತೆ,ತಾಯಿಯ ತ್ಯಾಗ ನಾಟಕ, ಮ ಮೈಸೂರು ಒಡೆಯರ, ಆಪರೇಷನ್ ಸಿಂಧೂರ, ಹೀಗೆ ಹಲವು ಸಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿನಿಯರಿಂದ ಬಹಳ ಸುಂದರವಾಗಿ ವಿಜೃಂಭಣೆಯಿಂದ, ಅಭಿನಯಸಲ್ಪಟ್ಟಿವೆ. ಗತ ಕಾಲದಲ್ಲಿ ಆಗಿ ಹೋದ ಘಟನೆಗಳ ಒಟ್ಟು ಸಂಗ್ರಹ ಮಾಡಿ ‘ಭಕ್ತಿಯ ಪರಾಕಾಷ್ಠೆ ಹೀಗೂ ಉಂಟೆ..?’ ಎನ್ನುವ ಶಿರ್ಷೀಕೆಯ ಅಡಿಯಲ್ಲಿ ಈ ಎಲ್ಲ ಸಂಪ್ರದಾಯಗಳನ್ನು ಶಿಕ್ಷಕ ದಶರಥ ಕೋರಿ ಇವರ ನಿರ್ದೇಶನದ ರೂಪಕದಲ್ಲಿ ಶಾಲಾ ಮಕ್ಕಳು ವೇದಿಕೆಯಲ್ಲಿ ಮನೋಜ್ಞವಾಗಿ ಅಭಿನಯ ಮಾಡಿ ತೋರಿಸಿ, ನೆರೆದ ಜನರು ಬೆಕ್ಕಸ ಬೆರಗಾಗುವಂತೆ ಲೀಲಾಜಾಲವಾಗಿ ನಟಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಗಾಜಿನ ಗಂಬ, ಎತ್ತಿನ ಬಂಡಿ, ಚಿಟ್ಟಲಗಿ, ಭಾಜಾ-ಭಜಂತ್ರಿ, ಕೊಂಬು-ಕಹಳೆ ನಗಾರಿ – ಶಹನಾಯಿ ನಿನಾದಗಳು ಧಾರ್ಮಿಕ ಧ್ವಜಗಳು,ಛತ್ರಿ-ಚಾಮರ ಕಂಡ ಪ್ರೇಕ್ಷಕರು ಮಂತ್ರ ಮುಗ್ದ ಗೊಂಡಿವೆ ಎಂದು ಹೇಳಿದರು.
ನ್ಯಾಯವಾದಿ ಸೋಮಶೇಖರ ನಿಂಬರಗಿಮಠ , ಭೀಮನಗೌಡ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ಆನಂದ ಕಂಬಾರ, ಉಪಾಧ್ಯಕ್ಷ ಸಂತೋಷ ಮೋರೆ, ಬಲು ಕಾಟಕರ, ಪ್ರಶಾಂತ ಗುಂದಗಿ, ಮಾಳು ಪೂಜಾರಿ, ಮಲ್ಲು ಗುಡ್ಲ, ಕಾಳಿಕಾದೇವಿ ಅರ್ಚಕರಾದ ವಿಠ್ಠಲ ಆಚಾರಿ, ಶ್ರೀಕಾಂತ ಕೂಡಿಗನೂರ, ಯಮುನಾಜಿ ಸಾಳುಂಕೆ, ಸಾತು ತೆನ್ನೆಹಳ್ಳಿ,ಪ್ರಕಾಶ ಬಿರಾದಾರ, ಪ್ರಕಾಶ ಐರೋಡಗಿ, ಶಿಕ್ಷಕ ಪ್ರತಿನಿಧಿ ಎಸ್ ವಿ ಹರಳಯ್ಯ, ಎಸ್ ಆರ್ ಪಾಟೀಲ, ಕೆ ಜಿ ಎಸ್ ಶಾಲೆ ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.


















