ಮಠಗಳಿಂದ ಅಕ್ಷರ ಸಂಸ್ಕೃತಿ ಬೆಳವಣೆಗೆ – ಈಶ ಪ್ರಸಾದ ಶ್ರೀ
ಇಂಡಿ : ಮಠ ಮತ್ತು ಮಠಾಧೀಪತಿಗಳು ಸಮಾಜದ ಶ್ರೇಯಸ್ಸಿಗೆ ಶ್ರಮಿಸುತ್ತಿದ್ದು ಜನರಲ್ಲಿನ ಆಧ್ಯಾತ್ಮಿಕ ದಾಹವನ್ನು ನೀಗಿಸಲು ಧಾರ್ಮಿಕ ಆಚರಣೆಯಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನನೀಡುವ ಮಠಗಳಿಂದ ನಾಡಿನಲ್ಲಿ ಸರ್ವಾಂಗೀಣ ಪ್ರಗತಿ ಹಾಗೂ ಅಕ್ಷರ ಕ್ರಾಂತಿಯ ಬೆಳವಣೆಗೆ ಯಾಗಿದೆ ಎಂದು ಅಥರ್ಗಾದ ಷಣ್ಮುಖ ಶಿವಯೋಗಿಗಳ ಗುರುದೇವಾಶ್ರಮದ ಪೂಜ್ಯ ಶ್ರೀ ಈಶ ಪ್ರಸಾದ ಶ್ರೀಗಳು ಹೇಳಿದರು.
ತಾಲೂಕಿನ ಅಥರ್ಗಾ ಗ್ರಾಮದ ಗುರುದೇವಾಶ್ರಮದಲ್ಲಿ ಶ್ರಾವಣ ಮಾಸದ ನಿಮಿತ್ಯ ನಡೆದ ಸಂತರು ಮತ್ತು ಮಹಾತ್ಮರು ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಜಮಖಂಡಿ ಮೈಗೂರದ ಶಿವಾನಂದ ಮಠದ ಗುರುಪ್ರಸಾದ ಶ್ರೀಗಳು ಮಾತನಾಡಿ ಮಠಗಳು ಇಂದಿಗೂ ಜಾತಿ,ಮತ ಭೇದವಿಲ್ಲದೆ ಎಲ್ಲರಿಗೂ ಆಶ್ರಯಕೊಟ್ಟಿವೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿವೆ. ಮಠಗಳಲ್ಲಿ ಅರ್ಥಿಕತೆಯ ಕೊರತೆಯಿದ್ದರೂ ಬರುವ ಭಕ್ತರು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಆಶ್ರಯವನ್ನು ನೀಡುತ್ತಾ ಬಂದಿವೆ ಎಂದರು.
ಕಾಶಿ ಬೀಳಗಿಯ ಪ್ರವಚನಕಾರರಾದ ಮಲ್ಲಿಕಾರ್ಜುನ ಶರಣರು ಸಂತ ಸಿದ್ದೇಶ್ವರ ಶ್ರೀಗಳ ಕುರಿತು ಮತ್ತು ವಿಜಯಪುರದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳು, ಷಣ್ಮುಖ ಶಿವಯೋಗಿಗಳ ಕುರಿತು ಮಾತನಾಡಿದರು.
ಶಿಕ್ಷಕ ಚೌಡಪ್ಪ ಮೇತ್ರಿ ಸ್ವಾಗತಿಸಿ ನಿರೂಪಿಸಿದರು.
ಗ್ರಾಮದ ಪ್ರಮುಖರು, ಸದ್ಭಕ್ತರು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಗುರುದೇವಾಶ್ರಮದಲ್ಲಿ ನಡೆದ ಸಂತರು ಮತ್ತು ಮಹಾತ್ಮರು ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಈಶ ಪ್ರಸಾದ ಶ್ರೀಗಳು ಮಾತನಾಡಿದರು.