ಇಂಡಿ: ತಾಲೂಕು ಬರಗಾಲದಿಂದ ತತ್ತರಿಸಿ ಹೋಗಿದ್ದು,
ತಾಲೂಕನ್ನು ಬರಗಾಲ ತಾಲೂಕು ಅಂತ ಘೋಷಣೆ ಮಾಡಿ. ಬರಗಾಲ ಕಾಮಗಾರಿಗಳನ್ನು ಪ್ರಾರಂಭಿಸಿ ಬಗರ್-ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಸೋಮವಾರ ಗ್ರೇಡ-೨ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.
ಇಂಡಿ ತಾಲೂಕಿನಲ್ಲಿ ಮುಂಗಾರುಮಳೆ ಆಗದೆ ತಾಲೂಕಿನ
ಎಲ್ಲಾ ರೈತರು ಬಿತ್ತನೆ ಮಾಡಿ ಸಂಕಷ್ಟದಲ್ಲಿದ್ದಾರೆ.
ಅಲ್ಲದೆ ಇಂದು ನಾಳೆ ಮಳೆಯಾಗಿ ಬಿತ್ತನೆ ಮಾಡಬೇಕು
ಎಂದು ಸಾಲ ಸೂಲ ಮಾಡಿ ಬೀಜ, ಗೊಬ್ಬರ ತಂದು ಇಟ್ಟಿದ್ದಾರೆ. ಆದರೆ ಮಳೆ ಸಂಪೂರ್ಣ ಕೊರತೆಯಾಗಿ ಕೆಲ ರೈತರು ಬಿತ್ತಿದ ಬೀಜಗಳು ಸಹ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಕೆಲವು ಕಡೆ ಬಹುತೇಕ ಕಡೆ ಬೋರ್ವೆಲ್ಗಳು ಬತ್ತಿ ಹೋಗಿವೆ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹೀಗಾಗಿ ಕೂಡಲೇ ಸರಕಾರ ಬರಗಾಲ ತಾಲೂಕು ಎಂದು ಘೋಷಿಸಿ ರೈತರಿಗೆ ಸಹಾಯ ಮಾಡಬೇಕು.
ಈಗಾಗಲೇ ರೈತರು ಬೆಳೆಯುತ್ತಿರುವ ನಿಂಬೆ, ದಾಳಿಂಬೆ,
ದ್ರಾಕ್ಷಿ, ಕಬ್ಬು ಸೇರಿದಂತೆ ಎಲ್ಲಾ ಬೆಳೆಗಳು ಒಣಗಿ
ಹೋಗಿದ್ದು, ಎಲ್ಲಾ ರೈತರಿಗೂ ಪರಿಹಾರ ನೀಡುವ
ಕರ್ಯವನ್ನು ಸರ್ಕಾರ ಮಾಡಬೇಕು ಎಂದು ರೈತ
ಸಂಘಟನೆಯ ಸದಸ್ಯರು ಸರಕಾರಕ್ಕೆ ಮನವಿ
ಮಾಡಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು
ಅಧ್ಯಕ್ಷ ಭೀಮರಾಯ ಪೂಜಾರಿ, ಎಂ.ಎಚ್. ಪೂಜಾರಿ, ಶರಣು ಪೂಜಾರಿ, ಸುರೇಶ್ ಫೈಕರ, ಶಿವಾಜಿ ಇಂಗಳೆ, ಕಲ್ಲಪ್ಪ ವಠಾರ, ರಾಕೇಶ್ ವಠಾರ, ಗಣೇಶ್ ರಾಥೋಡ್, ಮಹಾದೇವ ಪೂಜಾರಿ, ಡಿ.ಕೆ. ಪೂಜಾರಿ ಸೇರಿದಂತೆ ಇನ್ನಿತರ ರೈತರು ಮನವಿ ಮಾಡಿಕೊಂಡಿದ್ದಾರೆ.