ಮನವಿ ಹಿಂಪಡೆಯದಿದ್ದರೆ ಉಗ್ರ ಹೋರಾಟ
ಇಂಡಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಇಂಡಿ ಅಧ್ಯಕ್ಷ ಚಂದ್ರು ಹೊಸಮನಿ, ಕ.ರಾ.ದ.ಸಂ ಸ ( ಚಂದ್ರಕಾAತ ಕಾದ್ರೋಳ್ಳಿ ಬಣ)ದ ಅಧ್ಯಕ್ಷ ಪರಶುರಾಮ .ಜೆ ಭಾವಿಕಟ್ಟಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಇಂದು ಮಾದಿಗ ಸಮುದಾಯದ ಓಣಿಯಲ್ಲಿನ ರಸ್ತೆ ಅಗಲೀಕರಣ ಮಾಡಬಾರದು ಎಂದು ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ ಇವರಿಗೆ ಮನವಿ ಸಲ್ಲಿಸಿದರು.
ನಗರದ ಸ.ನಂ ೨೧೭ರ ವಾರ್ಡ ನಂ.೧ರಲ್ಲಿ ವಾಸವಾಗಿರುವ ಮಾದಿಗ ಸಮುದಾಯದ ಕುಟುಂಬಗಳು ಅಭಿವೃದ್ದಿಗೆ ಈ ಹಿಂದೆ ಸಿ.ಸಿ ರಸ್ತೆ ಮಾಡುವಾಗ ಮಾದಿಗ ಸಮುದಾಯ ಸಾಕಷ್ಟು ಪುರಸಭೆ ಅಧಿಕಾರಿಗಳಿಗೆ ಸ್ಪಂದಿಸಿ ರಸ್ತೆಯ ಮೇಲಿರುವ ಅಲ್ಪಸ್ವಲ್ಪ ಮನೆಗಳು ಜಖಂ ಅದರೂ ಸಹಕಾರ ನೀಡಿದ್ದಾರೆ. ಪೂರ್ವಜರ ಕಾಲದಿಂದ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಆದರೆ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಆದನಂತ ಅಂದರೆ ಜ,೨೦ ರಂದು ನಗರಸಭೆ ಪೌರಾಯುಕ್ತರು ಮಾದಿಗ ಸಮುದಾಯದ ಓಣಿಯಲ್ಲಿನ ರಸ್ತೆ ಅತೀಕ್ರಮಣವಾಗಿದ್ದು ಕೂಡಲೆ ವಸತಿ ಪ್ರದೇಶದ ಜನರು ಅತೀಕ್ರಮಣ ತೆರವುಗೊಳಿಸಬೇಕು ಎಂದು ನೋಟಿಸ್ ನೀಡಿರುವದರಿಂದ್ದ ಬಡವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಹಿಂದೆ ಸಾಕಷ್ಟು ಹಣ ಖರ್ಚು ಮಾಡಿ ಸೂರು ಕಟ್ಟಿಕೊಂಡಿದ್ದಾರೆ ಪದೆ ಪದೆ ಇಂತಹ ಅಚಾರ್ತ್ಯು ಕಾಮಗಾರಿಗಳು ಮಾಡಿದರೆ ಹೇಗೆ ? ಎಂದು ಪ್ರಶ್ನಿಸಿದ್ದಾರೆ.
ಕೂಡಲೆ ನಗರಸಭೆಯಿಂದ ಹೊರಡಿಸಿದ ಆದೇಶ ಹಿಂಪಡೆಯಬೇಕು ಒಂದು ವೇಳೆ ಇದನ್ನೆ ಮುಂದುವರೆಸಿದರೆ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪುರಸಭೆಮಾಜಿ ಸದಸ್ಯ ಅನೀಲಗೌಡ ಬಿರಾದಾರ ಮಾತನಾಡಿ ವಾರ್ಡ ನಂ ೧ರಲ್ಲಿ ವಾಸವಾಗಿರುವ ಜನರು ಬಡವರ ಶತಮಾನಗಳಿಂದ ವಾಸವಾಗಿದ್ದಾರೆ ಇವರಿಗೆ ತೊಂದರೆ ಕೊಡುವುದು ಸರಿಯಾದ ಕ್ರಮವಲ್ಲ ಸಮುದಾಯಕ್ಕೆ ಅನ್ಯಾಯವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದರು.
ಪೌರಾಯುಕ್ತ ಶಿವಾನಂದ ಪೂಜಾರಿ ಮನವಿ ಸ್ವೀಕರಿಸಿ ಮಾತಮಾಡಿ ನಿಮ್ಮ ನಗರದ ಬಗ್ಗೆ ನಗರದ ಸೌಂದರ್ಯ ನಿಮ್ಮ ಕಾಳಜೀ ಇರಲಿ, ಬೇಡ ಎಂದರೆ ನಿಮ್ಮ ಇಷ್ಟದಂತೆ. ಯಾವುದೇ ವಿಧದಲ್ಲಿ ಯಾವ ಕುಟುಂಬಕ್ಕೂ ತೊಂದರೆ ಕೊಡುವುದಿಲ್ಲ ಒಟ್ಟಾರೆ ಅಭಿವೃದ್ದಿಗೆ ನಗರದ ಜನರು ಸಹಕಾರ ಮಾಡಿ ಎಂದು ವಿನಂತಿಸಿದರು.
ಸುನೀಲ ವಾಘಮೋರೆ, ಅಂಬವ್ವ ಅಂಜುಟಗಿ, ಶಿವಮ್ಮ ಪಾರ್ಸಿ, ಸೀಮಾ ಬೊಳೆಗಾವ, ಹುಸೇನಿ ಭಾವಿಕಟ್ಟಿ, ಮಲ್ಲೇಶಿ ಮಾದರ, ಲಾಯಪ್ಪ ಭಾವಿಕಟ್ಟಿ, ಸಾವಿತ್ರಿ ಕಾಂಬಳೆ, ಗಣೇಶ ವಾಗಮೋರೆ, ಕಲ್ಲವ್ವ ಭಾವಿಕಟ್ಟಿ, ಭಾರತಿ ಹಡಲಸಂಗ, ಸಂಜು ಭಾವಿಕಟ್ಟಿ ಮತ್ತಿತರಿದ್ದರು.
ಪೌರಾಯುಕ್ತ ಶಿವಾನಂದ ಪೂಜಾರಿಯವರಿಗೆ ದಲಿತ ಮುಖಂಡರು ಮನವಿ ಸಲ್ಲಿಸಿದರು.



















