ವೃಷಭಲಿಂಗೇಶ್ವರ ಶಿವಯೋಗಿಗಳ ಜಾತ್ರೋತ್ಸವ, ಸಾವಿರಾರು ಭಕ್ತರವೃಂದದ ಮಧ್ಯ ರಥೋತ್ಸವ
ಇಂಡಿ : ತಾಲೂಕಿನ ತಾಂಬಾ ಗ್ರಾಮದ ಮೀಪದ ಸುಕ್ಷೇತ್ರ ಬಂಥನಾಳದ ವೃಷಭಲಿಂಗೇಶ್ವರ ಸಂಸ್ಥಾನ ಮಠದಲ್ಲಿ ವೃಷಭಲಿಂಗೇಶ್ವರ ಶಿವಯೋಗಿಗಳ ಜಾತ್ರೋತ್ಸವವು ಸಾವಿರಾರು ಭಕ್ತರವೃಂದದ ಮಧ್ಯ ರಥೋತ್ಸವ ವಿಜ್ರಂಭಣೆಯಿAದ ನೆರವೇರಿತು.
ಬೆಳಿಗಿನ ಜಾವ ಮಠದಲ್ಲಿ ಲಿಂಗೈಕ್ಯ ವೃಷಭಲಿಂಗೇಶ್ವರ ಶಿವಯೋಗಿಗಳ, ಶಂಕರಲಿAಗೇಶ್ವರ, ಚನ್ನಬಸವ ಹಾಗೂ ಸಂಗನಬಸವ ಶಿವಯೋಗಿಗಳ ಮೂರ್ತಿಗೆ ವಿವಿಧ ಭಕ್ತರಿಂದ ವಿಶೇಷ ಪೂಜೆ ಜರುಗಿತು.
ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೆರೆಯ ಆಂಧ್ರ, ಮಹಾರಾಷ್ಟç ಹಾಗೂ ರಾಜ್ಯದ ನಾನಾ ಭಾಗದ ಭಕ್ತರು ತಂಡೋಪ ತಂಡವಾಗಿ ಇಲ್ಲಿಗೆ ಆಗಮಿಸಿದ್ದರು. ಈ ರಥೋತ್ಸವದ ದೃಶ್ಯವನ್ನು ನೋಡಲು ಹಲವರು ಭಕ್ತರು ಮೊದಲೇ ತಮ್ಮ ಆಸನವನ್ನು ಭದ್ರಪಡಿಸಿಕೊಂಡಿದ್ದರು. ನೋಡ ನೋಡುವದರೋಳಗೆ ವೃಷಭಲಿಂಗೇಶ್ವರರ ಹಾಗೂ ರೆಬಿನಾಳದ ಬಸವೆಶ್ವರ ಪಲ್ಲಕ್ಕಿಗಳ ರಥೋತ್ಸವ ಹತ್ತಿರ ಆಗಮಿಸುತ್ತದ್ದಂತೆ ಭಕ್ತರ ಹರ್ಷೊದ್ಘಾರ ಮುಗಿಲು ಮುಟ್ಟಿತು. ಅಷ್ಟರಲ್ಲೆ ಭಕ್ತರು “ಸಂಗನಬಸವ ಮಹಾಶಿವಯೋಗಿಗಳು ಮಹಾರಾಜ ಕೀ ಜೈ” ಎಂಬ ಮಂತ್ರ ಘೋಷಣೆಯೊಂದಿಗೆ ಪೂಜ್ಯರ ಸಮ್ಮುಖದಲ್ಲಿ ಪಲ್ಲಕ್ಕಿಗಳ ರಥೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿAದ ನೆರವೇರಿತು. ಇದೇ ವೇಳೆ ಹಲವು ಭಕ್ತರು ಅಗ್ನಿ ಪ್ರವೇಶಿಸಿ ಹೊತ್ತ ಹರಕೆಯನ್ನು ತೀರಿಸಿದರು.
ಮಠದಲ್ಲಿ ಸಂಪ್ರದಾಯದAತೆ ಜರುಗುವ ಈ ಉತ್ಸವವನ್ನು ನೋಡಿ ಕಣ್ತುಂಬಿಕೊಳ್ಳಲು ಸುತ್ತಲ ಗ್ರಾಮದ ರೈತರು ಹೊಸ ಬಟ್ಟೆ ತೊಟ್ಟು ಎತ್ತಿನ ಬಂಡಿ ಹೂಡಿಕೊಂಡು ಈ ಕ್ಷೇತ್ರದತ್ತ ಧಾವಿಸುತ್ತಿರುವ ನೋಟ ಭಕ್ತರ ಮನಸೆಳೆಯಿತು.
ಬಂಥನಾಳ ಮಠದ ಪೀಠಾಧಿಪತಿ ವೃಷಭಲಿಂಗೇಶ್ವರ ಶಿವಯೋಗಿಗಳು, ಯರನಾಳ ಗ್ರಾಮದ ಸಂಗನಬಸವ ಮಹಾಶಿವಯೋಗಿಗಳು ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಸಾನಿಧ್ಯವಹಿಸಿದ್ದರು.
ಕಳೆದ ಬಾರಿಗಿಂತ ಈ ಬಾರಿಯ ಉತ್ಸವದಲ್ಲಿ ಸರ್ವ ಧರ್ಮದ ಭಕ್ತರು ಪಾಲ್ಗೊಂಡಿದ್ದರು. ಪ್ರತಿ ವರ್ಷದಂತೆ ಈ ವರ್ಷವು ಈ ಕ್ಷೇತ್ರದ ದರ್ಶನಕ್ಕೆ ಬರುವ ಭಕ್ತರಿಗಾಗಿ ಈ ಜಾತ್ರೋತ್ಸವದಲ್ಲಿ ಸುರಗಿಹಳ್ಳಿ, ತಾಂಬಾ, ಪಡನೂರ, ಇಂಡಿ, ದೇವಹಿಪ್ಪರಗಿ, ವಾಡೆ, ಚಿಕ್ಕರೂಗಿ, ತೆನಿಹಳ್ಳಿ, ಗೊರನಾಳ, ಬನಟ್ಟಿ, ಹಿರೇರೂಗಿ, ಲಚ್ಯಾಣ, ಕೆಂಗನಾಳ, ಶಿರಕನಹಳ್ಳಿ, ಹೊನ್ನಳ್ಳಿ, ಜಂಬಗಿ, ಬೆನಕನಹಳ್ಳಿ, ಶಿವಪೂರ, ಪಡನೂರ, ರೆಬಿನಾಳ ಸೇರಿದಂತೆ ನಾನಾ ಭಾಗದ ಭಕ್ತರು ಭಾಗವಹಿಸಿದ್ದರು.
ತಾಂಬಾ ಸಮೀಪದ ಸುಕ್ಷೇತ್ರ ಬಂಥನಾಳದ ವೃಷಭಲಿಂಗೇಶ್ವರ ಶಿವಯೋಗಿಗಳ ಜಾತ್ರೋತ್ಸವವು ಸಾವಿರಾರು ಭಕ್ತರವೃಂದದ ಮಧ್ಯ ರಥೋತ್ಸವ ವಿಜ್ರಂಭಣೆಯಿAದ ನೆರವೇರಿತು.











