ಉತ್ತರ ಕರ್ನಾಟಕದ ಪ್ರತಿಯೊಂದು ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕು
ವಿಜಯಪುರ : 96 ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ಧಿಷ್ಟ ಧರಣಿಗೆ ಆಗಮಿಸಿದ ಶಾಸಕರು, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ ಯವರು ಮಾತನಾಡುತ್ತಾ ವೈದ್ಯಕೀಯ ಕಾಲೇಜಿಗಾಗಿ ನಡೆಯುತ್ತಿರುವ ಈ ಹೋರಾಟ ನಮ್ಮ ಗಮನಕ್ಕೆ ತುಂಬಾ ತಡವಾಗಿ ಬಂದಿತು. ಆರ್ಥಿಕವಾಗಿ ಹಿಂದುಳಿದವರಿಗಾಗಿ, ಜನಸಾಮಾನ್ಯರಿಗಾಗಿ ನೀವು ಹಗಲು ರಾತ್ರಿ ಎನ್ನದೇ ಹೋರಾಟ ಮಾಡುತ್ತಿದ್ದೀರಿ,ಉತ್ತರ ಕರ್ನಾಟಕದ ಕುರಿತು ಮಾತನಾಡುವ ಸಂದರ್ಭದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲಿ ಮೊದಲು ಧ್ವನಿ ಎತ್ತಿದ್ದೀನಿ. ಉತ್ತರ ಕರ್ನಾಟಕದಲ್ಲಿ ಒಟ್ಟು 182 ಕಾಲೇಜುಗಳು ವೈದ್ಯಕೀಯ ಶಿಕ್ಣಕ್ಕೆ ಸಂಬಂದಿಸಿದಂತೆ ಇವೆ.ಜಿಲ್ಲೆಯಲ್ಲಿ 25 ಲಕ್ಷ ಜನಸಂಖ್ಯೆ ಇದೆ ಅದಕ್ಕಾಗಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭವಾದರೆ ಬಡಮಕ್ಕಳು ಉನ್ನತ ಶಿಕ್ಷಣ ಕಲಿಯಲು ಸಹಾಯವಾಗುತ್ತದೆ ಎಂದು ಹೇಳಿದರು.
ನಾವು ಭಾವನಾತ್ಮಕವಾಗಿ ಯಾವಾಗಲೂ ಹೋರಾಟದ ಜೊತೆ ಇರುತ್ತೇವೆ ಎಂದು ಹೇಳಿದರು. ಇನ್ನೋರ್ವ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ರವರು ಮಾತನಾಡುತ್ತಾ ಉತ್ತರ ಕರ್ನಾಟಕದ ಪ್ರತಿಯೊಂದು ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕು. ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕದ ಜಿಲ್ಲೆಗೆ ವೈದ್ಯಕೀಯ ಕಾಲೇಜು ಬೇಕು.100 ಕ್ಕೆ ನೂರು ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಆರಂಭವಾಗುತ್ತದೆ. ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಜಿಲ್ಲೆ ನಮ್ಮ ವಿಜಯಪುರ. ಬೇರೆ ಬೇರೆ ಜಿಲ್ಲೆಗಳಲ್ಲಿ ಇಷ್ಟೊಂದು ಜಾಗ ಇಲ್ಲ. ಜಾಗ ಕೊಂಡುಕೊಳ್ಳುವ ಅವಶ್ಯಕತೆ ಇಲ್ಲ. ಸುಸಜ್ಜಿತವಾದ ಆಸ್ಪತ್ರೆ ಇದೆ. ಮೆಡಿಕಲ್ಕಾಲೇಜ್ ಘೋಷಣೆಮಾಡುವ ಎಲ್ಲಾ ಅವಕಾಶಗಳು ಇಲ್ಲಿದೆ ಇನ್ನೇನು ಬೇಕು. ಸರಕಾರ ಈಗಾಗಲೇ ಹಣ ಕೊಟ್ಟಿದೆ ಆದರೆ ಇದಕ್ಕೆ ಯಾರೋ ಅಡ್ಡಿಯಾಗಿರಬೇಕು.
ಎರಡು ಬಾರಿ ರಾಜ್ಯಮಟ್ಟದ ಪ್ರಶಸ್ತಿ ದೊರಕಿದೆ. ಮಲ್ಟಿಸ್ಪೇಶಾಲಿಟಿ ಮಾಡಲು 53 ಕೋಟಿ ನೀಡಿದೆ. ವೈಜ್ಞಾನಿಕವಾಗಿ ಹೇಳುವುದಾದರೆ ಬಡ ವಿದ್ಯಾರ್ಥಿಗಳು ಕೂಡ ವೈದ್ಯಕೀಯ ಶಿಕ್ಷಣ ಕಲಿಯಬಹುದು, ವಿಜಯಪುರ ಜಿಲ್ಲೆಯ ಮಕ್ಕಳಿಗೆ ಡಾಕ್ಟರ್ ಆಗುವ ಅವಕಾಶ ಸಿಗುತ್ತದೆ.ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಕೊಡಬಾರದು ಎಂದು ಹೇಳಿದರು. ಜಿಲ್ಳೆಯ ಎಲ್ಲಾ ಶಾಸಕರು ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಒಂದಾಗಬೇಕು ಎಂದು ಹೇಳಿದರು.ವಕೀಲ ಸಂಘದ ಅಧ್ಯಕ್ಷರಾದ ಡಿ.ಜಿ ಬಿರಾದರ ರವರು ಮಾತನಾಡುತ್ತಾ 25 ಲಕ್ಷ ಜನರ ಬೇಡಿಕೆ ಇದಾಗಿದೆ.
ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಹಾಗೂ 600 ಹಾಸಿಗೆಗಳನ್ನು ಹೊಂದಿರುವ ಜಿಲ್ಲೆ ನಮ್ಮದಾಗಿದೆ ಇದರ ಕುರಿತು ಎಲ್ಲಾ ಜನ ಪ್ರತಿನಿಧಿಗಳು ಸರಕಾರ ಯೋಚನೆ ಮಾಡಬೇಕು. ಮುಂದೊಂದು ದಿನ ದೊಡ್ಡವರ ಪಾಲಗುವ ಸ್ಥಿತಿ ನಮ್ಮ ಜಿಲ್ಲೆಗೆ ಬರುತ್ತದೆ. ನಮ್ಮ ವಕೀಲರ ಸಂಘದಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು.ಸುರೇಶ್ ಬಿರಾದರ ರವರು ಮಾತನಾಡುತ್ತಾ ಈಗಾಗಲೇ ದಿನಗಳಿಂದ ಈ ಹೋರಾಟ ನಡೆಯುತ್ತಿದೆ. ಬಡವರ ಸಲುವಾಗಿ ಈ ಹೋರಾಟ ನಡೆಯುತ್ತಿದೆ. ಸರಕಾರ ವಿಜಯಪುರ ಜಿಲ್ಲೆಗೆ ಈಗ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಆದರೆ ಕಾಂಗ್ರೆಸ್ ಸರಕಾರ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದೆ. 150 ಎಕರೆ ಜಾಗವನ್ನು ಹೊಂದಿರುವ ಜಿಲ್ಲೆ ನಮ್ಮದಾಗಿದೆ. ನಾವು ಯಾವಾಗಲೂ ಹೋರಾಟ ಮಾಡುತ್ತಲೆ ಬಂದಿವಿ. ಸರಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಹಾಗೂ ನರ್ಸಗಳ ಕೊರತೆ ಇದೆ ಸಿಬ್ಭಂದಿಗಳ ಕೊರತೆ. ಇದೆಲ್ಲಾ ಹೋಗಲಾಡಿಸಬೇಕೆಂದರೆ ಸರಕಾರಿ ವೈದ್ಯಕೀಯ ಕಾಲೇಜು ಆಗಬೇಕು ಎಲ್ಲರಿಗೂ ಉದ್ಯೋಗ ದೊರೆತಂತೆ ಆಗುತ್ತದೆ. ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುತ್ತಾರೆ, ಇಲ್ಲಿರುವ ಅಧಿಕಾತಿಗಳು ಹೊಂದಾಣಿಕೆ ರಾಜ ಕಾರಣವನ್ನು ಇಲ್ಲಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಗುರಲಿಂಗಪ್ಪ ಅಂಗಡಿ,ಉಮೇಶ್ ಕಾರಜೋಳ ಮುಂತಾದವರು ಭಾಗವಹಿಸಿದ್ದರು. ಹೋರಾಟಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.


















